ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಅವರ ಅಸಹಜ ಸಾವಿನ ಕುರಿತು ಮುಂಬೈ ಪೊಲೀಸರು ಯಾವಾಗ ಸಮನ್ಸ್ ಕೊಟ್ಟರೂ ಬರುವುದಾಗಿ ಕಂಗನಾ ಹೇಳುತ್ತಲೇ ಇದ್ದರು. ಆದರೆ, ಮುಂಬೈ ಪೊಲೀಸರು ಸುಶಾಂತ್ ಸಾವಿನ ಕುರಿತಾಗಿ ಕಂಗನಾ ಅವರನ್ನು ಕರೆಸಲೇ ಇಲ್ಲ.
ಆದರೆ, ಕೆಲವು ದಿನಗಳ ಹಿಂದೆ ಮುಂಬೈ ಪೊಲೀಸರಿಂದ ಕಂಗನಾಗೆ ಸಮನ್ಸ್ ಹೋಗಿದೆ. ಬರೀ ಕಂಗನಾಗಷ್ಟೇ ಅಲ್ಲ, ಅವರ ಅಕ್ಕ ರಂಗೋಲಿ ಚಾಂಡೆಲ್ಗೆ ಸಹ ಕೋಮು ಸೌಹಾರ್ದತೆ ಕದಡುವ ವಿಚಾರದಲ್ಲಿ ಸಮನ್ಸ್ ಹೋಗಿದೆ. ಬಾಂದ್ರಾ ಪೊಲೀಸರ ಎದುರು ಅಕ್ಟೋಬರ್ 25 ಅಥವಾ 26ರಂದು ಬಂದು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.
ಇದನ್ನೂ ಓದಿ: ಪ್ರೇಮ್ ಜನ್ಮದಿನಕ್ಕೆ ಘೋಷಣೆಯಾದ ಸಿನಿಮಾಗಳ ಪಟ್ಟಿ ಇಲ್ಲಿದೆ..
ಈ ಕುರಿತು ಟ್ವೀಟ್ ಮಾಡಿರುವ ಕಂಗನಾ, ಬಹುಶಃ ಪೊಲೀಸರಿಗೆ ಕಂಗನಾ ನೆನಪು ಹೆಚ್ಚಾಗುತ್ತಿರಬಹುದು. ಅವರು ನನ್ನ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದನಿಸುತ್ತದೆ. ಡೋಂಟ್ ವರಿ, ನಾನು ಬಹಳ ಬೇಗ ಬರ್ತೀನಿ ಎಂದು ಕಂಗನಾ ಉತ್ತರಿಸಿದ್ದಾರೆ.
ಅಂದಹಾಗೆ, ಪೊಲೀಸರು ಕಂಗನಾಗೆ ಸಮನ್ಸ್ ಕಳಿಸಿರುವುದಕ್ಕೂ ಕಾರಣವಿದೆ. ಬಾಲಿವುಡ್ನಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಮತ್ತು ಫಿಟ್ನೆಸ್ ಟ್ರೈನರ್ ಆಗಿ ಗುರುತಿಸಿಕೊಂಡಿರುವ ಮುನ್ನವರಾಲಿ ಸಾಹಿಲ್ ಸಯ್ಯದ್ ಎನ್ನುವವರು, ಬಾಲಿವುಡ್ ಮಂದಿಯನ್ನು ಕಂಗನಾ ಬಹಳ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಎಂದು ದೂರು ನೀಡಿದ್ದರು.
ಇದನ್ನೂ ಓದಿ: ‘ನನಗೆ ಗಂಡು ಮಗುವೇ ಆಗುತ್ತೆ ನೋಡ್ತಿರು’; ಚಿರು ನುಡಿದ ಭವಿಷ್ಯ ನಿಜವಾಯ್ತು ಎಂದ ಧ್ರುವ
ಕಳೆದ ಕೆಲವು ತಿಂಗಳುಗಳಲ್ಲಿ ಬಾಲಿವುಡ್ನಲ್ಲಿ ಚಾಲ್ತಿಯಲ್ಲಿರುವ ನೆಪೋಟಿಸಂ (ಸ್ವಜನಪಕ್ಷಪಾತ), ಡ್ರಗ್ಸ್ ಚಟ ಕುರಿತು ಸಾಕಷ್ಟು ಮಾತನಾಡಿದ್ದರು. ಬಾಲಿವುಡ್ನ ಕೆಲವು ನಿರ್ಮಾಪಕರು, ನಿರ್ದೇಶಕರನ್ನು ಕೊಲೆಗಡುಗರು ಎಂದು ಹೇಳಿದ್ದರು. ಈ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿತ್ತು. ಹೀಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದರಿಂದ ಬಾಲಿವುಡ್ಗೆ ಸಾಕಷ್ಟು ಕೆಟ್ಟ ಹೆಸರು ಬಂದಿದೆ ಎಂದು ಸಯ್ಯದ್ ತಮ್ಮ ದೂರಿನಲ್ಲಿ ಹೇಳಿದ್ದರು.
ಈಗ ಇದೇ ವಿಚಾರವಾಗಿ ಮುಂಬೈ ಪೊಲೀಸರು ಕಂಗನಾಗೆ ಸಮನ್ಸ್ ಕಳಿಸಿದ್ದು, ಕಂಗನಾ ಈ ವಿಚಾರವಾಗಿ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.