More

    ನನ್ನ ತುಂಬಾ ಮಿಸ್​ ಮಾಡಿಕೊಳ್ತಿದ್ದೀರಾ ಅನಿಸುತ್ತೆ … ಕಂಗನಾ ಹೀಗೆ ಹೇಳಿದ್ದು ಯಾರಿಗೆ?

    ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಅವರ ಅಸಹಜ ಸಾವಿನ ಕುರಿತು ಮುಂಬೈ ಪೊಲೀಸರು ಯಾವಾಗ ಸಮನ್ಸ್​ ಕೊಟ್ಟರೂ ಬರುವುದಾಗಿ ಕಂಗನಾ ಹೇಳುತ್ತಲೇ ಇದ್ದರು. ಆದರೆ, ಮುಂಬೈ ಪೊಲೀಸರು ಸುಶಾಂತ್​ ಸಾವಿನ ಕುರಿತಾಗಿ ಕಂಗನಾ ಅವರನ್ನು ಕರೆಸಲೇ ಇಲ್ಲ.

    ಆದರೆ, ಕೆಲವು ದಿನಗಳ ಹಿಂದೆ ಮುಂಬೈ ಪೊಲೀಸರಿಂದ ಕಂಗನಾಗೆ ಸಮನ್ಸ್​ ಹೋಗಿದೆ. ಬರೀ ಕಂಗನಾಗಷ್ಟೇ ಅಲ್ಲ, ಅವರ ಅಕ್ಕ ರಂಗೋಲಿ ಚಾಂಡೆಲ್​ಗೆ ಸಹ ಕೋಮು ಸೌಹಾರ್ದತೆ ಕದಡುವ ವಿಚಾರದಲ್ಲಿ ಸಮನ್ಸ್​ ಹೋಗಿದೆ. ಬಾಂದ್ರಾ ಪೊಲೀಸರ ಎದುರು ಅಕ್ಟೋಬರ್​ 25 ಅಥವಾ 26ರಂದು ಬಂದು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.

    ಇದನ್ನೂ ಓದಿ: ಪ್ರೇಮ್​ ಜನ್ಮದಿನಕ್ಕೆ ಘೋಷಣೆಯಾದ ಸಿನಿಮಾಗಳ ಪಟ್ಟಿ ಇಲ್ಲಿದೆ..

    ಈ ಕುರಿತು ಟ್ವೀಟ್​ ಮಾಡಿರುವ ಕಂಗನಾ, ಬಹುಶಃ ಪೊಲೀಸರಿಗೆ ಕಂಗನಾ ನೆನಪು ಹೆಚ್ಚಾಗುತ್ತಿರಬಹುದು. ಅವರು ನನ್ನ ಬಹಳ ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಎಂದನಿಸುತ್ತದೆ. ಡೋಂಟ್​ ವರಿ, ನಾನು ಬಹಳ ಬೇಗ ಬರ್ತೀನಿ ಎಂದು ಕಂಗನಾ ಉತ್ತರಿಸಿದ್ದಾರೆ.

    ಅಂದಹಾಗೆ, ಪೊಲೀಸರು ಕಂಗನಾಗೆ ಸಮನ್ಸ್​ ಕಳಿಸಿರುವುದಕ್ಕೂ ಕಾರಣವಿದೆ. ಬಾಲಿವುಡ್​ನಲ್ಲಿ ಕಾಸ್ಟಿಂಗ್​ ಡೈರೆಕ್ಟರ್​ ಮತ್ತು ಫಿಟ್​ನೆಸ್​ ಟ್ರೈನರ್​ ಆಗಿ ಗುರುತಿಸಿಕೊಂಡಿರುವ ಮುನ್ನವರಾಲಿ ಸಾಹಿಲ್​ ಸಯ್ಯದ್​ ಎನ್ನುವವರು, ಬಾಲಿವುಡ್​ ಮಂದಿಯನ್ನು ಕಂಗನಾ ಬಹಳ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಎಂದು ದೂರು ನೀಡಿದ್ದರು.

    ಇದನ್ನೂ ಓದಿ: ‘ನನಗೆ ಗಂಡು ಮಗುವೇ ಆಗುತ್ತೆ ನೋಡ್ತಿರು’; ಚಿರು ನುಡಿದ ಭವಿಷ್ಯ ನಿಜವಾಯ್ತು ಎಂದ ಧ್ರುವ

    ಕಳೆದ ಕೆಲವು ತಿಂಗಳುಗಳಲ್ಲಿ ಬಾಲಿವುಡ್​ನಲ್ಲಿ ಚಾಲ್ತಿಯಲ್ಲಿರುವ ನೆಪೋಟಿಸಂ (ಸ್ವಜನಪಕ್ಷಪಾತ), ಡ್ರಗ್ಸ್​ ಚಟ ಕುರಿತು ಸಾಕಷ್ಟು ಮಾತನಾಡಿದ್ದರು. ಬಾಲಿವುಡ್​ನ ಕೆಲವು ನಿರ್ಮಾಪಕರು, ನಿರ್ದೇಶಕರನ್ನು ಕೊಲೆಗಡುಗರು ಎಂದು ಹೇಳಿದ್ದರು. ಈ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿತ್ತು. ಹೀಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದರಿಂದ ಬಾಲಿವುಡ್​ಗೆ ಸಾಕಷ್ಟು ಕೆಟ್ಟ ಹೆಸರು ಬಂದಿದೆ ಎಂದು ಸಯ್ಯದ್​ ತಮ್ಮ ದೂರಿನಲ್ಲಿ ಹೇಳಿದ್ದರು.

    ಈಗ ಇದೇ ವಿಚಾರವಾಗಿ ಮುಂಬೈ ಪೊಲೀಸರು ಕಂಗನಾಗೆ ಸಮನ್ಸ್​ ಕಳಿಸಿದ್ದು, ಕಂಗನಾ ಈ ವಿಚಾರವಾಗಿ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

    ಜ್ಯೂ ಎನ್​ಟಿಆರ್​ ಪರಿಚಯಿಸುವ ಟೀಸರ್​ಗೆ ರಾಮ್​ಚರಣ್​ ಧ್ವನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts