More

    ಒಂದು ಮತದಿಂದ ಎಸ್ಡಿಎಂಸಿ ಅಧ್ಯಕ್ಷರಾಗಿ ಪದ್ಮಾವತಿ ಆಯ್ಕೆ

    ಕಂಪ್ಲಿ: ತೀವ್ರ ಕುತೂಹಲ ಮೂಡಿಸಿದ್ದ ತಾಲೂಕಿನ ನಂ.10 ಮುದ್ದಾಪುರ ಸರ್ಕಾರಿ ಹಿಪ್ರಾ ಶಾಲೆ ಎಸ್ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಶನಿವಾರ ಶಾಂತಿಯುತವಾಗಿ ನಡೆಯಿತು.

    ಅಧ್ಯಕ್ಷ ಸ್ಥಾನಕ್ಕೆ ಬಿ.ಶ್ರೀನಿವಾಸ, ಕಜ್ಜಿ ಪದ್ಮಾವತಿ, ಕೊಂಡಮಿ ಕೊಮಾರೆಪ್ಪ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಬಿ.ಶ್ರೀನಿವಾಸ ಉಮೇದುವಾರಿಕೆ ವಾಪಸ್ ಪಡೆದಿದ್ದರಿಂದ ಕಣದಲ್ಲಿ ಉಳಿದ ಇಬ್ಬರಲ್ಲಿ ಪದ್ಮಾವತಿ 9 ಮತ ಪಡೆದು ಗೆಲುವು ಸಾಧಿಸಿದರು. ಕೊಮಾರೆಪ್ಪ 8 ಮತ ಗಳಿಸಿ ಸೋಲನುಭವಿಸಿದರು. ಒಂದು ಮತ ತಿರಸ್ಕೃತಗೊಂಡಿತು.

    ಇದನ್ನೂ ಓದಿ: ಮುಖ್ಯಶಿಕ್ಷಕಿ ವಿರುದ್ಧ ಕ್ರಮಕೈಗೊಳ್ಳಿ: ಹೊಸಪೇಟೆ ಆದರ್ಶ ವಿದ್ಯಾಲಯದ ಎಸ್ಡಿಎಂಸಿ ಅಧ್ಯಕ್ಷೆ, ಸದಸ್ಯರ ಒತ್ತಾಯ

    ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ರೇಣುಕಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ಪ್ರಭಾರ ಮುಖ್ಯಶಿಕ್ಷಕ ಮಂಜುನಾಥ ತಿಳಿಸಿದರು.

    ಎಸ್ಡಿಎಂಸಿ ಸದಸ್ಯರಾದ ಕೆ.ಲಕ್ಷ್ಮೀ, ಎಚ್.ಮಂಜುಳಾ, ಎಚ್.ರಾಮಚಂದ್ರ, ಎಚ್.ಗೋಪಾಲ, ಸಣ್ಣ ಹುಲಿಗೆಮ್ಮ, ವಿ.ರತ್ನಮ್ಮ, ಬಾನುಬೀ, ಕಾರಪುಡಿ ರೇಣುಕಾ, ಬಿ.ದೇವಿ, ಜಿ.ಬಿ.ಸತ್ಯಭಾಮ, ದಂಡಿನ ಹುಲುಗಪ್ಪ, ಬಿ.ಶ್ರೀನಿವಾಸ, ಅಕ್ಕಿ ಬಸವರಾಜ, ಬಿ.ಸುರೇಶ, ಮುದ್ರಿಕಾರ್ ರಾಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts