More

    ನಿಧಾನವಾಗಿ ಪತ್ನಿಯ ವರ್ತನೆ ಬದಲಾಯಿತು, ನನ್ನನ್ನೇ ಅಪರಿಚಿತರಂತೆ ನೋಡುತ್ತಿದ್ದಳು: ಕೆ. ಕಲ್ಯಾಣ್​

    ಬೆಳಗಾವಿ: ನಮ್ಮಿಬ್ಬರಲ್ಲಿ ಯಾವುದೇ ಗೊಂದಲವಿಲ್ಲ. ನಾನು ಮತ್ತು ನನ್ನ ಪತ್ನಿ ಚೆನ್ನಾಗಿಯೇ ಇದ್ದೇವೆ. ಸಂಸಾರದಲ್ಲಿ ಸರಸ, ವಿರಸ ಮತ್ತು ಸಮರಸ ಇದ್ದರೇನೆ ಜೀವನ ಎಂದು ಗೀತ ರಚನೆಕಾರ, ಸಾಹಿತಿ ಕೆ. ಕಲ್ಯಾಣ್ ಹೇಳಿದರು.

    ದಾಂಪತ್ಯದಲ್ಲಿ ಬಿರುಕು ವಿಚಾರವಾಗಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿನ್ನೆ ನನ್ನ ಪತ್ನಿ ನನ್ನ ವಿರುದ್ಧ ಆರೋಪ ಮಾಡಿದ್ದಾಳೆ. ನಮ್ಮಿಬ್ಬರ ವಿವಾಹವಾಗಿ 15 ವರ್ಷ ಆಗಿದೆ. ನನ್ನ ತಂದೆ-ತಾಯಿ ಮರಣದ ಬಳಿಕ ನಾವು ಬೇರೆಡೆ ವಾಸ ಮಾಡುತ್ತಿದ್ದೆವು. ಬಳಿಕ ನಮ್ಮ ಜತೆಗೆ ಪತ್ನಿಯ ತಂದೆ-ತಾಯಿಯೂ ಬಂದರು. ಈ ವೇಳೆ ನಮ್ಮ ಮನೆಗೆ ಗಂಗಾ ಕುಲಕರ್ಣಿ ಎಂಬಾಕೆ ಕೆಲಸಕ್ಕೆ ಸೇರಿದರು. ಆದರೆ, ನನ್ನ ಪತ್ನಿಗೆ ಅವಳು ಬಂದಿದ್ದು ಇಷ್ಟವಿರಲಿಲ್ಲ. ಸ್ವಲ್ಪ ಸಮಯದ ಬಳಿಕ ನನ್ನ ಪತ್ನಿ ಮೌನವಾದ್ಲು.

    ಒಂದು ದಿನ ನನ್ನ ಅತ್ತೆ ಮನೆಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಮಧ್ಯರಾತ್ರಿ 1 ಗಂಟೆಗೆ ಪೂಜೆ ಮಾಡುತ್ತಿದ್ದರು. 2020ರ ಜ.9ರಂದು ಊರಿಗೆ ಹೋಗುತ್ತೇನೆಂದು ಎಲ್ಲರು ಹೋದರು. ಜ.10ರಂದು ಪತ್ನಿಯ ನಂಬರ್ ಸ್ವೀಚ್​​ ಆಫ್​ ಆಗಿತ್ತು. ಜ.17ರಂದು ನಾನು ಕೂಡ ಬೆಳಗಾವಿಗೆ ಬಂದೆ. ಆ ವೇಳೆ ಒಂದಿಷ್ಟು ನಿಂಬೆಹಣ್ಣು ಇಟ್ಟುಕೊಂಡು ನಮ್ಮ ಅತ್ತೆ ಪೂಜೆ ಮಾಡುತ್ತಿದ್ದರು ಎಂದು ಗೊತ್ತಾಯ್ತು. ಆ ವೇಳೆಗಾಗಲೇ ತಂದೆ-ತಾಯಿ ಜತೆ ಪತ್ನಿ ಬೇರೆ ಮನೆಗೆ ಶಿಫ್ಟ್​ ಆಗಿದ್ದರು.

    ಇದನ್ನೂ ಓದಿ: ರಚಿತಾ ಅಕೌಂಟ್​ಗೆ ಇನ್ನೆರಡು: ಹುಟ್ಟುಹಬ್ಬಕ್ಕೆ ಫಸ್ಟ್​ಲುಕ್​ಗಳ ಉಡುಗೊರೆ

    ತಿಲಕವಾಡಿಯಲ್ಲಿ ಪೋಷಕರ ಜತೆ ನನ್ನ ಪತ್ನಿ ಇದ್ಲು. ಈ ವೇಳೆ ಶಿವಾನಂದ ವಾಲಿ ಹಾಗೂ ಗಂಗಾ ಕುಲಕರ್ಣಿ ಜತೆ ಪತ್ನಿಯ ಪಾಲಕರು ಸಂಪರ್ಕದಲ್ಲಿದ್ದರು. ಸ್ವಲ್ಪ ದಿನದ ಬಳಿಕ ನನ್ನ ಪತ್ನಿಯ ತಾಳಿ ಮತ್ತು ಕಾಲುಂಗುರ ಇರಲಿಲ್ಲ. ನಾನು ಕೇಳಿದ್ದಕ್ಕೆ ಅವು ಇದ್ದರೆ ಮಾತ್ರಕ್ಕೆ ಗಂಡ-ಹೆಂಡತಿನಾ? ಎಂದು ಪ್ರಶ್ನಿಸಿದ್ದರು. ಆಮೇಲೆ ನಿಧಾನವಾಗಿ ಅವರ ವರ್ತನೆಯೂ ಬದಲಾಯಿತು. ನನ್ನನ್ನು ಅಪರಿಚಿತರಂತೆ ನನ್ನ ಪತ್ನಿ ನೋಡುತ್ತಿದ್ದಳು.

    ಇದಾದ ಕೆಲ ದಿನಗಳ ಬಳಿಕ ನನ್ನ ಪತ್ನಿ ಖಾತೆಯಿಂದ 1 ಲಕ್ಷದ 70 ಸಾವಿರ ಹಣ ಶಿವಾನಂದ ವಾಲಿ ಅವರ ಅಕೌಂಟ್​​ಗೆ ವರ್ಗಾವಣೆಯಾಗಿದೆ. ನನ್ನ ಅತ್ತೆ-ಮಾವನ ಹೆಸರಿನ ಆಸ್ತಿಯೂ ಶಿವಾನಂದ ವಾಲಿ ಹೆಸರಿಗೆ ವರ್ಗಾಯಿಸಿದ್ದಾರೆ. ಹೀಗಾಗಿ ಕಾನೂನು ತಜ್ಞರ ಜತೆ ಚರ್ಚಿಸಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ನನ್ನ ಅತ್ತೆ, ಮಾವ, ಪತ್ನಿ ಕಾಣಿಸುತ್ತಿಲ್ಲ ಮತ್ತು ಅಪರಿಚಿತ ವ್ಯಕ್ತಿಯ ಖಾತೆ ಹಣ ವರ್ಗಾವಣೆಯಾಗಿದೆ ಎಂದು ಪ್ರಕರಣ ದಾಖಲಿಸಿದ್ದೇನೆ.

    ಕೇವಲ 8-10 ತಿಂಗಳಲ್ಲಿ ಈ ಬೆಳವಣಿಗೆ ನಡೆದಿದೆ. ಅವರ ಆಸ್ತಿ ನನಗೆ ಮುಖ್ಯವಲ್ಲ. ನನ್ನ ಅತ್ತೆ, ಮಾವ ಮತ್ತು ಪತ್ನಿಯ ಯೋಗಕ್ಷೇಮ ಮುಖ್ಯ. ದೂರು ನೀಡಿದ ಬಳಿಕ ಶಿವಾನಂದ ವಾಲಿ ಸಿಕ್ಕಿದರು. ಇದಾದ ಬಳಿಕ ನನ್ನ ಪತ್ನಿಯಿಂದ ನನ್ನ ವಿರುದ್ಧವೇ ಆರೋಪ ಮಾಡಲಾಗಿದೆ. ಶಿವಾನಂದ ವಾಲಿ ಅರೆಸ್ಟ್ ಆಗುವವರೆಗೂ ಆರೋಪ ಇರಲಿಲ್ಲ. ಬಂಧನದ ಬೆನ್ನಲ್ಲೇ ಬಳಿಕ ಆರೋಪ ಮಾಡಿದ್ದಾರೆಂದು ಕಲ್ಯಾಣ್​ ವಿವರಿಸಿದರು. (ದಿಗ್ವಿಜಯ ನ್ಯೂಸ್​)

    ತಮ್ಮ ಖಾಸಗಿ ಅಂಗಗಳ ಬಗ್ಗೆ ಮುಕ್ತವಾಗಿ ಮಾತನಾಡಿ ನೆಟ್ಟಿಗರ ಹುಬ್ಬೇರಿಸಿದ ಗೋವಾ ಬ್ಯೂಟಿ ಇಲಿಯಾನಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts