ನವದೆಹಲಿ: ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ಸಾರಥ್ಯದ ನಿಗದಿತ ಓವರ್ಗಳ ಭಾರತ ತಂಡ, ಶ್ರೀಲಂಕಾ ಪ್ರವಾಸ ತೆರಳುವುದಕ್ಕೂ ಮುನ್ನ ಜೂನ್ 14 ರಿಂದ 28 ರವರೆಗೆ ಮುಂಬೈನಲ್ಲಿ ಕ್ವಾರಂಟೈನ್ಗೆ ಒಳಗಾಗಲಿದೆ. ಈ ಅವಧಿಯಲ್ಲಿ ಆಟಗಾರರು 6 ಬಾರಿ ಆರ್ಟಿ- ಪಿಸಿಆರ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಜುಲೈ 13 ರಿಂದ ಭಾರತ ಹಾಗೂ ಶ್ರೀಲಂಕಾ ನಡುವೆ ಕೊಲಂಬೊದಲ್ಲಿ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ವಿರಾಟ್ ಕೊಹ್ಲಿ ಸಾರಥ್ಯದ ತಂಡದ ಮಾದರಿಯಂತೆಯೇ ಲಂಕಾ ಪ್ರವಾಸ ಕೈಗೊಳ್ಳಲಿರುವ ಶಿಖರ್ ಧವನ್ ಸಾರಥ್ಯದ ತಂಡ ಕೂಡ ಕ್ವಾರಂಟೈನ್ಗೆ ಒಳಗಾಗಿದೆ.
ಇದನ್ನೂ ಓದಿ: ಯುರೋ ಕಪ್-2020 ಫುಟ್ಬಾಲ್ ಟೂರ್ನಿ; ಶುಭಾರಂಭ ಕಂಡ ಇಟಲಿ ತಂಡ,
ಹೊರ ರಾಜ್ಯದ ಆಟಗಾರರು ಚಾರ್ಟರ್ ವಿಮಾನ ಹಾಗೂ ಬ್ಯುಸಿನೆಸ್ ಕ್ಲಾಸ್ ವಿಮಾನಗಳ ಮೂಲಕ ಮುಂಬೈಗೆ ಆಗಮಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆರಂಭಿಕ 7 ದಿನಗಳ ಕಾಲ ಕೊಠಡಿಯಲ್ಲೆ ಕ್ವಾರಂಟೈನ್ನಲ್ಲಿದ್ದರೆ, ಬಳಿಕ ಬಯೋಬಬಲ್ ವ್ಯಾಪ್ತಿಯಲ್ಲೇ ಆಟಗಾರರಿಗೆ ಜಿಮ್ ಸೇರಿದಂತೆ ಇನ್ನಿತರ ಕಡೆಗೆ ಓಡಾಡಲು ಅವಕಾಶ ನೀಡಲಾಗುತ್ತಿದೆ.
ಇದನ್ನೂ ಓದಿ: ಟ್ವೀಟ್ ವಿವಾದದ ಸುಳಿಯಲ್ಲಿ ಇಂಗ್ಲೆಂಡ್ನ ಸ್ಟಾರ್ ಕ್ರಿಕೆಟಿಗರು ; ಐಪಿಎಲ್ ಆಡುವಾಗಲೇ ಭಾರತೀಯರನ್ನು ಅಣಕಿಸಿದ್ದ ಜೋಡಿ,
ಕೊಲಂಬೋದಲ್ಲಿ ಮೂರು ದಿನಗಳ ಕಾಲ ಕ್ವಾರಂಟೈನ್ನಲ್ಲಿದ್ದು ಪರಿಸ್ಥಿತಿ ನೋಡಿಕೊಂಡು ಭಾರತ ತಂಡ ಅಭ್ಯಾಸ ಆರಂಭಿಸಲಿದೆ. ಇಂಗ್ಲೆಂಡ್ಗೆ ತೆರಳುವುದಕ್ಕೂ ಹಾಗೂ ತೆರಳಿದ ಬಳಿಕ ಅನುಸರಿಸಿದ ಮಾದರಿಯಲ್ಲೇ ಲಂಕಾ ಪ್ರವಾಸಕ್ಕೂ ಅದೇ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ. ಭಾರತ ತಂಡದ ಆಟಗಾರರು ಎಂದಿನಂತೆ ಕೊಲಂಬೊದಲ್ಲಿರುವ ತಾಜ್ ಸಮುದ್ರಾ ಹೋಟೆಲ್ನಲ್ಲೆ ಉಳಿದುಕೊಳ್ಳಲಿದ್ದಾರೆ.
ನಡಾಲ್-ಜೋಕೋ ನಡುವಿನ ಕಾದಾಟದ ವೇಳೆ ಫ್ರೆಂಚ್ ಅಧ್ಯಕ್ಷರು ಹೊರಡಿಸಿದ ಆದೇಶ ಏನು ಗೊತ್ತೆ?