More

    ಕೇರಳಿಗರು ಕಾಮದಲ್ಲಿ… ರೀಲ್ಸ್​ನಿಂದಲೇ ಸಿನಿಮಾ ಅವಕಾಶ ಗಿಟ್ಟಿಸಿದ ಮಲಯಾಳಿ ಯುವತಿಯ ಶಾಕಿಂಗ್ ಹೇಳಿಕೆ!

    ತಿರುವನಂತಪುರಂ: ಶ್ರೀಲಕ್ಷ್ಮೀ ಸತೀಶ್​, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಒಂದೇ ಒಂದು ವಿಡಿಯೋ ಮೂಲಕ ಲಕ್ಷಾಂತರ ನೆಟ್ಟಿಗರ ಮನ ಸೆಳೆದ ರೂಪದರ್ಶಿ ಈಕೆ. ಸೀರೆಯುಟ್ಟ ವಿಡಿಯೋ ನೆಟ್ಟಿಗರನ್ನು ಮಾತ್ರವಲ್ಲ, ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಗಮನವನ್ನೂ ಸೆಳೆದಿದೆ.

    ತನ್ನ ವೈರಲ್​ ವಿಡಿಯೋದಿಂದಾಗಿ ಶ್ರೀಲಕ್ಷ್ಮಿಗೆ ನಾಯಕಿಯಾಗಿ ನಟಿಸುವ ಅವಕಾಶವು ಒದಗಿ ಬಂದಿದೆ. ರಾಮ್​ ಗೋಪಾಲ್​ ವರ್ಮಾ ನಿರ್ದೇಶನದ ಸ್ಯಾರಿ ಸಿನಿಮಾದಲ್ಲಿ ಶ್ರೀಲಕ್ಷ್ಮೀಗೆ ಅವಕಾಶ ಸಿಕ್ಕಿದೆ. ಈ ಕಾರಣದಿಂದ ಆಕೆ ತನ್ನ ಹೆಸರನ್ನು ಶ್ರೀ ಲಕ್ಷ್ಮಿಯಿಂದ ಆರಾಧ್ಯ ದೇವಿ ಎಂದು ಬದಲಾಯಿಸಿಕೊಂಡಿದ್ದಾರೆ. ಶ್ರೀಲಕ್ಷ್ಮೀ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡುತ್ತಿರುವ ವಿಡಿಯೋಗಳನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡುತ್ತಿದ್ದಾರೆ.

    ಇದೀಗ ಶ್ರೀಲಕ್ಷ್ಮಿ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರು ಶ್ರೀಲಕ್ಷ್ಮೀಯನ್ನು ಕೇಳಿ, ಒಪ್ಪಿಗೆ ಮೇರೆಗೆ ಆಕೆಯ ವಿಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರ ಬಗ್ಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಾನು ಎದುರಿಸಿದ ಕಹಿ ಘಟನೆಗಳ ಶ್ರೀಲಕ್ಷ್ಮಿ ಮುಕ್ತವಾಗಿ ಮಾತನಾಡಿದ್ದಾರೆ.

    ರಾಮ್ ಗೋಪಾಲ್ ವರ್ಮಾ ಅವರು ನನ್ನ ಒಪ್ಪಿಗೆ ಕೇಳಿದ ನಂತರವೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ಶ್ರೀಲಕ್ಷ್ಮಿ ಹೇಳಿದ್ದಾರೆ. ಈ ವಿಷಯ ಯಾರಿಗೂ ತಿಳಿದಿಲ್ಲ. ಬಿಳಿ ಸೀರೆಯ ರೀಲು ಕಂಡಾಗ ಅದನ್ನು ಪೋಸ್ಟ್ ಮಾಡುವುದಾಗಿ ಕೇಳಿದರು. ಅಷ್ಟು ದೊಡ್ಡ ನಿರ್ದೇಶಕರು ನನ್ನ ಒಪ್ಪಿಗೆ ಕೇಳುತ್ತಿದ್ದಾರೆ ಅಂದರೆ, ಅದು ಗ್ರೇಟ್​ ಅಲ್ಲವೆ, ಇದುವರೆಗೂ ರಾಮ್​ ಗೋಪಾಲ್​ ಅವರು ಶೇರ್​ ಮಾಡಿಕೊಂಡಿರುವ ವಿಡಿಯೋವನ್ನು ನನ್ನ ಒಪ್ಪಿಗೆ ಕೇಳಿಯೇ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ನಾನು ಗ್ರಾಮೀಣ ಪ್ರದೇಶದಿಂದ ಬಂದವಳು. ರಾಮ್ ಗೋಪಾಲ್ ವರ್ಮಾ ಅವರು ನನ್ನ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಸಾಕಷ್ಟು ನಕಾರಾತ್ಮಕ ಕಾಮೆಂಟ್‌ಗಳು ಬಂದವು. ಆರ್​ಜಿವಿ ಅವರು ಹೆಣ್ಣುಬಾಕ ಅಂದರು. ಆದರೆ, ನಾನು ಹುಡುಕುತ್ತಿರುವುದು ಒಬ್ಬ ವ್ಯಕ್ತಿ ನನಗೆ ನೀಡುವ ಗೌರವವನ್ನು. ನನಗೆ ಆರ್​ಜಿವಿ ಒಳ್ಳೆಯ ಗೌರವ ನೀಡಿದರು. ಈ ಕ್ಷಣದವರೆಗೂ ಅವರು ನನ್ನ ಬಳಿ ಎಲ್ಲವನ್ನೂ ಔಪಚಾರಿಕವಾಗಿ ಕೇಳಿದ್ದಾರೆ. ನಮ್ಮನ್ನು ಕಂಫರ್ಟ್​ ಆಗಿ ನೋಡಿಕೊಳ್ಳುವ ವ್ಯಕ್ತಿ ಎಂದು ಶ್ರೀಲಕ್ಷ್ಮಿ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಶ್ರೀಲಕ್ಷ್ಮೀ, ನಮ್ಮ ಬಗ್ಗೆ ಕಾಳಜಿ ಇದೆ ಎಂದು ಹೇಳುವವರೂ ಇದ್ದಾರೆ. ಅದೇ ಸಮಯದಲ್ಲಿ ಕಾಮೆಂಟ್‌ಗಳಲ್ಲಿ ಕೆಟ್ಟದ್ದನ್ನು ಹೇಳುವ ಮತ್ತು ವೈಯಕ್ತಿಕ ಸಂದೇಶಗಳಲ್ಲಿ ಫ್ಲರ್ಟ್ ಮಾಡುವವರೂ ಇದ್ದಾರೆ. ಅದು ನನಗೆ ಅರ್ಥವಾಗುತ್ತಿಲ್ಲ. ಮೊದಲನೆಯದು ಕೇರಳದ ಜನರ ಲೈಂಗಿಕವಾಗಿ ಬಡವರು ಎಂದು ಮಾತ್ರ ಹೇಳುತ್ತೇನೆ. ನಾನು ಹೊಂದಿರುವ ಹೆಚ್ಚಿನ ಕಾಮೆಂಟ್‌ಗಳು ಮಹಿಳೆಯರಿಂದಲೇ ಬಂದಿವೆ. ಆದರೆ, ನನ್ನ ದೇಹದ ಮೇಲೆ ನನಗೆ ವಿಶ್ವಾಸವಿದೆ ಎಂದು ಶ್ರೀಲಕ್ಷ್ಮಿ ಹೇಳಿದರು. (ಏಜೆನ್ಸೀಸ್​)

    ಕೇವಲ ಮೂರೇ ತಿಂಗಳಲ್ಲಿ ನಿಜವಾಯ್ತು ಬಾಬಾ ವಂಗಾ ನುಡಿದ ಈ ವರ್ಷದ 5 ಭವಿಷ್ಯವಾಣಿಗಳು!

    ರೈಲಿನಲ್ಲಿ ಯುವಕನನ್ನು ಬಾತ್​ರೂಮ್​ ಒಳಗಡೆ ಎಳೆದೊಯ್ದು ಲಾಕ್​ ಮಾಡಿಕೊಂಡ ಮಂಗಳಮುಖಿ! ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts