More

    ಕೇರಳದಲ್ಲಿ ಬಿಜೆಪಿಗೆ 5 ಸ್ಥಾನ ಗೆಲುವು

    ಮಂಗಳೂರು: ಕೇರಳದಲ್ಲಿ ಈ ಬಾರಿ ಪರಿವರ್ತನೆಯ ಗಾಳಿ ಬೀಸಲಾರಂಭಿಸಿದೆ. 2016ರಿಂದ 19ರ ವರೆಗೆ ನಾನು ಸಹ ಉಸ್ತುವಾರಿ ಆಗಿದ್ದೆ. ಆಗ 2 ಚುನಾವಣೆ, ಮೂರು ಪಾದಯಾತ್ರೆ ಕೈಗೊಳ್ಳಲಾಗಿತ್ತ. ಈ ಬಾರಿ ಯುವ ಜನತೆ ಹಾಗೂ ಕ್ರೈಸ್ತ ಸಮುದಾಯ ಮೋದಿ ಅವರತ್ತ ಒಲವು ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ಕನಿಷ್ಠ ಐದು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಖಚಿತ ಎಂದು ದ.ಕ. ಸಂಸದ, ಕೇರಳ ಬಿಜೆಪಿ ಚುನಾವಣಾ ಸಹ ಪ್ರಭಾರಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
    ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಗ್ರ ನಿಗ್ರಹ ಸೇರಿದಂತೆ ದೇಶದ ಹಲವು ಸಮಸ್ಯೆಗಳನ್ನು ಚಾಣಾಕ್ಷತನದಿಂದ ಎದುರಿಸಿದ ನರೇಂದ್ರ ಮೋದಿ ಅವರು, ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ದೇಶದ ಜನತೆಯ ಕನಸು. ರಾಜ್ಯದಲ್ಲಿ ಕೂಡ ಕಳೆದ ಒಂದು ವರ್ಷದಿಂದ ಕಾಂಗ್ರೆಸ್‌ನ ಹೀನಾಯ ಆಡಳಿತ, ಅಭಿವೃದ್ಧಿ ಕುಂಠಿತ ವ್ಯವಸ್ಥೆಯಿಂದ ಜನತೆ ರೋಸಿ ಹೋಗಿದೆ. ಭ್ರಷ್ಟಾಚಾರ ಮಿತಿಮೀರಿದ್ದು, ಗುತ್ತಿಗೆದಾರರರಿಗೆ ಬಿಲ್ ಪಾವತಿಗೆ ಹಣ ಇಲ್ಲ. ಶೇ.80ಕ್ಕೆ ಪಸರ್ಂಟೇಜ್ ತಲುಪಿದೆ. ಕಾಂಗ್ರೆಸ್‌ನಲ್ಲೂ ಗುಂಪುಗಾರಿಕೆ ಮುಂದುವರಿದಿದ್ದು, ಅಭಿವೃದ್ಧಿ ಪರ ಮೋದಿ ಅಲೆಗೆ ಜನತೆ ಮನಸೋತಿದೆ ಎಂದರು.
    ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಅಸಮಾಧಾನವನ್ನು ಪಕ್ಷದ ರಾಷ್ಟ್ರೀಯ ನಾಯಕರು ಪರಿಹರಿಸುತ್ತಾರೆ. ಈಶ್ವರಪ್ಪ ಅವರು ಪಕ್ಷದ ಹಿರಿಯರಾಗಿದ್ದು, ಪಕ್ಷದ ಬಗ್ಗೆ ಅಪಾರ ಗೌರವ ಇರುವವರು. ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರಶ್ರೀಗಳು ಸ್ಪರ್ಧೆಗೆ ಹಕ್ಕು ಪ್ರತಿಪಾದಿಸಿರುವುದು ತಪ್ಪಲ್ಲ. ಆದರೆ ದೇಶ, ಧರ್ಮ, ಸಂಸ್ಕೃತಿಯ ವಿಚಾರ ಬಂದಾಗ ಅಸಮಾಧಾನ, ಆಕ್ರೋಶವನ್ನು ಬದಿಗಿರಿಸಿ ರಾಷ್ಟ್ರಹಿತವನ್ನು ನೋಡಬೇಕು ಎಂದರು.
    ಕಳೆದ 10 ವರ್ಷಗಳಲ್ಲಿ ಕೇಂದ್ರದಲ್ಲಿ ಭ್ರಷ್ಟಾಚಾರ ರಹಿತ ಅಭಿವೃದ್ಧಿ ಆಡಳಿತದಿಂದಾಗಿನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿಸಲು ದೇಶವ್ಯಾಪಿ ಎನ್‌ಡಿಎ ಪರ ಅಲೆ ಇದೆ. ಕರ್ನಾಟಕದಲ್ಲೂ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ ಜಯಿಸಲಿದೆ ಎಂದರು.
    ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಸುದರ್ಶನ್ ಎಂ., ಕಸ್ತೂರಿ ಪಂಜ, ನಿತಿನ್ ಕುಮಾರ್, ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ಕಿಶೋರ್ ಕುಮಾರ್ ಬೊಟ್ಯಾಡಿ, ಸುಧೀರ್ ಶೆಟ್ಟಿ ಕಣ್ಣೂರು, ಯತೀಶ್ ಆರ್ವಾರ್ ಇದ್ದರು.


    14ರಂದು ಮಂಗಳೂರಲ್ಲಿ ಮೋದಿ ಜನರ ಬಳಿಗೆ
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದುಮಂಗಳೂರಿನಲ್ಲಿ ರೋಡ್‌ಶೋ ಮೂಲಕ ಜನರ ಬಳಿಗೆ ಆಗಮಿಸಲಿದ್ದಾರೆ. ಈ ಬಾರಿ ಅಭೂತಪೂರ್ವ ಜನಸಾಗರದ ನಿರೀಕ್ಷೆ ಹೊಂದಲಾಗಿದೆ. ಈ ಹಿಂದೆ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿತ್ತು ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಮೋದಿ ಅವರಿಗೆ ಮಂಗಳೂರು ಎಂದರೆ ಪ್ರೀತಿ. ಹಾಗಾಗಿ ಅವರ ಸೂಚನೆ ಮೇರೆಗೆ ರೋಡ್ ಶೋ ನಡೆಸಲಾಗುತ್ತಿದೆ. ಮೂರು ಬಾರಿ ಮಂಗಳೂರಿಗೆ ಬಂದಿದ್ದಾಗ ಮೋದಿ ಅವರು ಸಮಾವೇಶದಿಂದ ಹೊರಡುವಾಗ ವಾಹನದಿಂದ ಇಳಿದು ಕೈಬೀಸಿ ಜನತೆಯ ಪ್ರೀತಿ ಗಳಿಸಿದ್ದರು. ಈ ಮೂಲಕ 2014ರಲ್ಲೇ ರೋಡ್‌ಶೋ ಪರಿಕಲ್ಪನೆ ಮಂಗಳೂರಲ್ಲಿ ಮೊಳೆಯಿತು. ಈ ಬಾರಿ ಮೊದಲ ಸಲ ನಡೆಯುತ್ತಿರುವ ಅಧಿಕೃತ ರೋಡ್‌ಶೋ ಕಾರ್ಯಕ್ರಮ. ಈ ರೋಡ್‌ಶೋ ವೇಳೆ 10 ಕಡೆಗಳಲ್ಲಿ ಕರಾವಳಿಯ ಜಾನಪದ ಸಂಸ್ಕೃತಿ ಅನಾವರಣಗೊಳಿಸುವ ಕಾರ್ಯ ನಡೆಯಲಿದೆ ಎಂದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts