ತೆಲಂಗಾಣ: ನೂರಾರು ಮಂದಿ ಮನೆಗೆ ನುಗ್ಗಿ ದಾಳಿ ನಡೆಸಿದ್ದಲ್ಲದೆ ಬೆಡ್ರೂಮ್ನಲ್ಲಿದ್ದ ದಂತವೈದ್ಯೆಯನ್ನೇ ಅಪಹರಿಸಿಕೊಂಡು ಹೋದ ಪ್ರಕರಣವೊಂದು ನಡೆದಿದೆ. ಇತ್ತೀಚೆಗೆ ನಡೆದ ಈ ಪ್ರಕರಣದ ವಿಡಿಯೋ ವೈರಲ್ ಕೂಡ ಆಗಿದೆ.
ತೆಲಂಗಾಣದ ರಂಗರೆಡ್ಡಿ ಪ್ರದೇಶದ ದಂತವೈದ್ಯೆ, 24 ವರ್ಷದ ವೈಶಾಲಿ ಅಪಹರಣಕ್ಕೆ ಒಳಗಾದಾಕೆ. ಈ ಬಗ್ಗೆ ಆಕೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದು, ತನಿಖೆಗಿಳಿದ ಪೊಲೀಸರು ಆಕೆಯನ್ನು ಪತ್ತೆ ಮಾಡಿ ರಕ್ಷಿಸಿದ್ದಾರೆ ಮತ್ತು ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ.
ದಂತವೈದ್ಯೆಯ ಮನೆ ಎದುರಿನ ಕೆಫೆಯ ಮಾಲೀಕ ನವೀನ್ ರೆಡ್ಡಿ ಈ ಅಪಹರಣದ ರೂವಾರಿ ಎನ್ನಲಾಗಿದೆ. ಈಕೆಯನ್ನು ಮದುವೆಯಾಗಲು ಆತ ಒತ್ತಾಯಿಸುತ್ತಿದ್ದು, ಅದಕ್ಕೆ ಒಪ್ಪದ ಈಕೆ ಒಪ್ಪದ ಹಿನ್ನೆಲೆಯಲ್ಲಿ ಅಪಹರಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ ಆತ ತಾನು ವೈದ್ಯೆಯನ್ನು ಗುಟ್ಟಾಗಿ ವರಿಸಿದ್ದಾಗಿ ಹೇಳಿದ್ದು, ಆಕೆ ನಿರಾಕರಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. –ಏಜೆನ್ಸೀಸ್
‘ನನ್ನನ್ನು ಪೊಲೀಸರೇ ಸಾಯಿಸ್ತಾರೆ, ನ್ಯಾಯ ಕೊಡಿಸಿ’ ಎಂದು ಅಲವತ್ತುಕೊಂಡ ಯುವಕ!