ಬೆಂಗಳೂರು: ದಂಪತಿಯಿಂದ ನಿನ್ನೆ ಹೊಯ್ಸಳ ಸಿಬ್ಬಂದಿ ಹಣ ವಸೂಲಿ ಮಾಡಿ ಅಮಾನತಿಗೆ ಒಳಗಾದ ಬೆನ್ನಿಗೇ ಪೊಲೀಸ್ ದೌರ್ಜನ್ಯದ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಂತೂ ಪೊಲೀಸರು ಸಾಯಿಸಲಿಕ್ಕೇ ಮುಂದಾಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್ ಕೊಡಗು ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಹೊರಿಸಿ ಪೋಸ್ಟ್ ಮಾಡಿಕೊಂಡಿದ್ದಾನೆ. ಮಾತ್ರವಲ್ಲ, ಪೊಲೀಸರೇ ನನ್ನನ್ನು ಸಾಯಿಸ್ತಾರೆ, ನ್ಯಾಯ ಕೊಡಿಸಿ ಎಂದು ಅಲವತ್ತುಕೊಂಡಿದ್ದಾನೆ.
ಇದನ್ನೂ ಓದಿ: ರಾತ್ರಿ ಬರ್ತಡೇ ಪಾರ್ಟಿ ಮುಗಿಸಿ ಬರ್ತಿದ್ದ ದಂಪತಿ ತಡೆದು ಹಣ ವಸೂಲಿ: ಇಬ್ಬರು ಹೊಯ್ಸಳ ಪೊಲೀಸರು ಸಸ್ಪೆಂಡ್
ಈ ಹಿಂದೆ ನನ್ನ ಮೇಲೆ ಸುಳ್ಳು ಕೇಸ್ ಹಾಕಿ ಅಮಾನುಷವಾಗಿ ದಂಡಿಸಿದ್ರು, ಈಗ ನನ್ನ ಮೊಬೈಲ್ಫೋನ್ ಅಕ್ರಮವಾಗಿ ಇಟ್ಟುಕೊಂಡಿದ್ದಾರೆ. ಅವರು ನನ್ನನ್ನು ಸಾಯಿಸ್ತಾರೆ, ನನ್ನ ಸಾವಿಗೆ ಇನ್ನು ಕೆಲವೇ ಕ್ಷಣಗಳು ಬಾಕಿ ಇವೆ ಎಂದು ಹೇಳಿಕೊಂಡಿರುವ ನಂದೀಶ್, ನವೀನ್ ಎಂಬ ಪೊಲೀಸ್ ಸಿಬ್ಬಂದಿಯ ವಿರುದ್ಧ ಆರೋಪ ಮಾಡಿ ಆತನ ಮೊಬೈಲ್ಫೋನ್ ಸಹಿತ ಪೋಸ್ಟ್ ಮಾಡಿಕೊಂಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವರು ನಂದೀಶ್ಗೆ ಸ್ಪಂದಿಸಿ ಕಮೆಂಟ್ ಮಾಡುತ್ತಿದ್ದಾರೆ.
ಮತ್ತೆ ಕನ್ನಡಾಭಿಮಾನ ಮೆರೆದ ರಿಷಬ್ ಶೆಟ್ಟಿ; ಈ ಸಲ ಮಾತಿಗೆ ಸೀಮಿತವಾಗದೆ ಕನ್ನಡದಲ್ಲೇ ಬರೆದ್ರು!
ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ