ಬೆಂಗಳೂರು: ಕರ್ನಾಟಕ ಹೈಕೋರ್ಟ್ ಜಡ್ಜ್ಗಳನ್ನು ಹತ್ಯೆ ಮಾಡಿಸುವುದಾಗಿ ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ಹೈಕೋರ್ಟ್ ಪಿಆರ್ಒ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಹೈಕೋರ್ಟ್ ಪಿಆರ್ಒ ಕೆ. ಮುರಳೀಧರ್ ಅವರಿಗೆ ಹೈಕೋರ್ಟ್ನಿಂದ ನೀಡಲಾಗಿರುವ ಮೊಬೈಲ್ಫೋನ್ ನಂಬರ್ಗೆ ಜುಲೈ 12ರ ರಾತ್ರಿ ಅನಾಮಧೇಯ ನಂಬರ್ನಿಂದ ವಾಟ್ಸ್ಆ್ಯಪ್ ಸಂದೇಶ ಬಂದಿದ್ದು, ಅದರಲ್ಲಿ ಎಬಿಎಲ್ (ಅಲೈಡ್ ಬ್ಯಾಂಕ್ ಲಿಮಿಟೆಡ್ ಪಾಕಿಸ್ತಾನ್) ಖಾತೆ ಸಂಖ್ಯೆ ನಮೂದಿಸಿ, ಆ ಖಾತೆಗೆ 50 ಲಕ್ಷ ರೂ. ಹಣ ಹಾಕುವಂತೆ ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ: ನಾಯಿ ಕಾಣೆಯಾಗಿದೆ, ಸೆಕ್ಯುರಿಟಿಯವರನ್ನು ಅಮಾನತುಗೊಳಿಸಿ: ಪೊಲೀಸ್ ಅಧಿಕಾರಿಗೆ ಹೈಕೋರ್ಟ್ ಜಡ್ಜ್ ಪತ್ರ
ಅಲ್ಲದೆ ಹೈಕೋರ್ಟ್ನ ಕೆಲವು ಜಡ್ಜ್ಗಳ ಹೆಸರನ್ನು ನಮೂದಿಸಲಾಗಿದ್ದು, ಹಣ ಹಾಕದಿದ್ದರೆ ದುಬೈ ಸುಪಾರಿ ಹಂತಕರ ಮೂಲಕ ಅವರನ್ನು ಹತ್ಯೆ ಮಾಡಿಸುವುದಾಗಿ ಹಿಂದಿ, ಉರ್ದು, ಇಂಗ್ಲಿಷ್ ಭಾಷೆಗಳಲ್ಲಿ ಸಂದೇಶ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪಿಆರ್ಒ ಪೊಲೀಸರಿಗೆ ದೂರು ನೀಡಿ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!