ವಿಜಯಪುರ: ರೌಡಿಗಳು ಕಂಡಕಂಡಲ್ಲಿ ದಾಳಿ ಇಟ್ಟು, ಸಿಕ್ಕವರನ್ನು ಹೆದರಿಸಿ ಹೊಡೆದು ಹವಾ ಸೃಷ್ಟಿಸಿಕೊಳ್ಳುತ್ತಾರೆ. ಅಂಥ ರೌಡಿಶೀಟರ್ ಒಬ್ಬನ ಜತೆಗೆ ನೂರಕ್ಕೂ ಅಧಿಕ ರೌಡಿಗಳಿದ್ದರೂ ಬಟಾಬಯಲಲ್ಲೇ ಕಪಾಳಮೋಕ್ಷವಾಗಿದೆ. ಗನ್ ಹಿಡಿದು ಹೆದರಿಸುತ್ತಿದ್ದ ರೌಡಿ ಆ ಒಂದು ಹೊಡೆತಕ್ಕೆ ಥಂಡಾ ಹೊಡೆದಿದ್ದಾನೆ.
ಬಡ್ಡಿ ವ್ಯವಹಾರದ ಜತೆಗೆ ದಾದಾಗಿರಿ ನಡೆಸುತ್ತಿದ್ದ ಭೀಮಶಿ ಭಜಂತ್ರಿ ವಿಜಯಪುರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಬಿದ್ದ ಒಂದೇ ಏಟಿಗೆ ತಣ್ಣಗಾಗಿ, ಖಾಕಿ ಖದರ್ ಮುಂದೆ ಮುದುರಿ ಹೋಗಿದ್ದಾನೆ. ಗನ್ ಇರಿಸಿಕೊಂಡಿದ್ದ ರೌಡಿಯನ್ನು ಪ್ರಶ್ನಿಸಿದ ಎಸ್ಪಿ ಅನುಪಮ್ ಅಗರ್ವಾಲ್, ಯಾಕೆ ಗನ್ ಇಟ್ಟುಕೊಂಡಿದ್ದಿ ಎಂದು ಗದರಿ ಕಪಾಳಕ್ಕೆ ಹೊಡೆದಿದ್ದಾರೆ.
ವಿಜಯಪುರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ 110ಕ್ಕೂ ಅಧಿಕ ರೌಡಿಗಳ ಪರೇಡ್ ನಡೆಯುತ್ತಿದ್ದ ಸಂದರ್ಭದಲ್ಲಿ, ಭಜಂತ್ರಿಯ ತಲೆಗೂದಲು ಹಿಡಿದು ಗೋಣು ಬಗ್ಗಿಸಿದ ಎಸ್ಪಿ, ಆತನ ಕಪಾಳಕ್ಕೆ ಬಾರಿಸಿ ಎಚ್ಚರಿಕೆ ನೀಡಿದ್ದಾರೆ.
ಹೊಡೆತದ ದೃಶ್ಯ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
https://www.facebook.com/VVani4U/videos/153492006492126/
‘ಸಪ್ತಪದಿ’ ತುಳಿಯದೆ ಮುಗಿದ ಮದುವೆ! – ನೋಂದಾಣಿದಾರರ ಸಂಸಾರ ಶುರು ಆದರೂ ಸಾಮೂಹಿಕ ವಿವಾಹಕ್ಕೆ ಕೂಡದ ಮುಹೂರ್ತ
ಮತ್ಸ್ಯಪ್ರಿಯರಿಗೆ ಸಕತ್ ಖುಷಿ ಸುದ್ದಿ: ತಾಜಾತಾಜಾ ಮೀನು ಇನ್ಮುಂದೆ ಆನ್ಲೈನ್ನಲ್ಲಿ!