ಹಾಸನ: ಪ್ರೀತಿಯನ್ನು ನಿರಾಕರಿಸಿದ್ದ ಯುವತಿಯನ್ನು ಪಾಗಲ್ ಪ್ರೇಮಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಇದೀಗ ಮತ್ತೊಂದು ತಿರುವು ಕಾಣಿಸಿಕೊಂಡಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ:ಪ್ರೀತಿ ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಂದ ಪಾಗಲ್ ಪ್ರೇಮಿ
ಸಕಲೇಶಪುರ ತಾಲೂಕಿನ ಸಿದ್ದಾಪುರ ಗ್ರಾಮದ ಹೇಮಂತ್(25) ಹೆಸರಿನ ಯುವಕ ಸುಶ್ಮಿತಾ (21)ಳನ್ನು ಪ್ರೀತಿಸುತ್ತಿದ್ದ. ಆಕೆ ಪ್ರೀತಿಗೆ ಒಪ್ಪದ ಹಿನ್ನೆಲೆಯಲ್ಲಿ ಇಂದು ನಡುರಸ್ತೆಯಲ್ಲಿ ಆಕೆಯ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದಾನೆ. ತೀವ್ರ ರಕ್ತಸ್ತ್ರಾವದಿಂದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅದಾದ ಮೇಲೆ ಹೇಮಂತ್ ಕಾಫಿ ತೋಟದ ಮರವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಕೆಲಸದಿಂದ ತೆಗೆದು ಹಾಕಿದ್ರೆ ಜೀವನ ನಿರ್ವಹಣೆ ಕಷ್ಟ; ರಾಜ್ಯ ಖಾಸಗಿ ಶಿಕ್ಷಕರ ಬಳಗದ ಸದಸ್ಯರ ಆಕ್ರೋಶ
ನೇಣಿಗೆ ಶರಣಾಗುವುದಕ್ಕೂ ಮೊದಲು ಆತ, ಪ್ರಿಯತಮೆಯನ್ನು ಕೊಲೆ ಮಾಡಿ ಬಂದವನೆ ನೇರವಾಗಿ ಗ್ರಾಮದ ಕೆರೆಗೆ ಹೋಗಿ ಹಾರಿದ್ದಾನೆ. ಆ ಸಮಯದಲ್ಲಿ ಕರೆ ಪಕ್ಕದಲ್ಲಿ ಮೃತ ಯುವತಿಯ ಚಿಕ್ಕಪ್ಪ ಜಮೀನು ಕೆಲಸ ಮಾಡುತ್ತಿದ್ದ, ಹೇಮಂತ್ನ ರಕ್ಷಣೆಗೆ ಓಡು ಬಂದಿದ್ದಾರೆ. ಆತನನ್ನು ನೀರಿನಿಂದ ಮೇಲತ್ತಿ ಜೀವ ರಕ್ಷಿಸಲಾಗಿತ್ತು. ಅದಾದ ನಂತರ ಆತ ತನ್ನ ಅಣ್ಣನ ಮಗಳನ್ನೇ ಕೊಲೆ ಮಾಡಿರುವ ವಿಚಾರ ತಿಳಿದು ಚಿಕ್ಕಪ್ಪ ಅಘಾತಕ್ಕೆ ಒಳಗಾಗಿದ್ದರು. (ದಿಗ್ವಿಜಯ ನ್ಯೂಸ್)
ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!
ಪ್ಲೀಸ್ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!