ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಮಾಣ ವಚನ ಸಮಾರಂಭ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮೇ 20ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿದ್ದು, ದೇಶದ ರಾಜಕೀಯ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಯಾವ ಪಕ್ಷದ ಯಾವ ನಾಯಕರಿಗೆ ಆಮಂತ್ರಣ ನೀಡಲಾಗಿದೆ ಎಂಬುದರ ವಿವರವಾದ ಪಟ್ಟಿಯನ್ನು ನಿಯೋಜಿತ ಮುಖ್ಯಮಂತ್ರಿಯವರ ಕಾರ್ಯಾಲಯ ಬಿಡುಗಡೆ ಮಾಡಿದೆ.
ಇಲ್ಲಿದೆ ಪಟ್ಟಿ
- ಎಂಕೆ ಸ್ಟಾಲಿನ್ – ತಮಿಳುನಾಡು ಮುಖ್ಯಮಂತ್ರಿ (ಡಿಎಂಕೆ)
- ನಿತೀಶ್ ಕುಮಾರ್- ಬಿಹಾರ ಮುಖ್ಯಮಂತ್ರಿ (ಜೆಡಿಯು)
- ಮಮತಾ ಬ್ಯಾನರ್ಜಿ- ಪಶ್ಚಿಮ ಬಂಗಾಳ ಮುಖ್ಯಮಂತ್ರಿ (ಟಿಎಂಸಿ)
- ಹೇಮಂತ್ ಸೋರೆನ್- ಜಾರ್ಖಂಡ್ ಮುಖ್ಯಮಂತ್ರಿ (ಜೆಎಂಎಂ)
- ತೇಜಸ್ವಿ ಯಾದವ್- ಬಿಹಾರದ ಉಪ ಮುಖ್ಯಮಂತ್ರಿ (ಆರ್ಜೆಡಿ)
- ಶರದ್ ಪವಾರ್- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ (ಎನ್ಸಿಪಿ)
- ಉದ್ಧವ್ ಠಾಕ್ರೆ- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ (ಶಿವಸೇನಾ)
- ಅಖಿಲೇಶ್ ಯಾದವ್ – ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ (ಸಮಾಜವಾದಿ ಪಾರ್ಟಿ)
- ಫಾರೂಕ್ ಅಬ್ದುಲ್ಲಾ- ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ (ನ್ಯಾಷನಲ್ ಕಾನ್ಫರೆನ್ಸ್)
- ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ (ಪಿಡಿಪಿ)
- ಸೀತಾರಾಮ್ ಯೆಚೂರಿ- ಸಿಪಿಎಂ ಪ್ರಧಾನ ಕಾರ್ಯದರ್ಶಿ
- ಡಿ. ರಾಜ- ಸಿಪಿಐ ಪ್ರಧಾನ ಕಾರ್ಯದರ್ಶಿ
- ಲಲ್ಲನ್ ಸಿಂಗ್- ಜೆಡಿಯು ಅಧ್ಯಕ್ಷ
- ವೈಕೋ- ಎಂಡಿಎಂಕೆ ಅಧ್ಯಕ್ಷ
- ಎನ್.ಕೆ. ಪ್ರೇಮಚಂದ್ರನ್, ಆರ್ಎಸ್ಪಿ ಅಧ್ಯಕ್ಷ
- ದೀಪಂಕರ ಭಟ್ಟಾಚಾರ್ಯ- ಸಿಪಿಐಎಂಎಲ್ ಪ್ರಧಾನ ಕಾರ್ಯದರ್ಶಿ
- ಡಾ. ತೋಲ್ ತಿರುಮಾವಳವನ್- ವಿಸಿಕೆ ಅಧ್ಯಕ್ಷ
- ಜಯಂತ್ ಚೌಧರಿ- ಆರ್ಎಲ್ಡಿ ಅಧ್ಯಕ್ಷ
- ಜೋಸ್ ಕೆ. ಮಣಿ- ಕೇರಳ ಕಾಂಗ್ರೆಸ್ ಅಧ್ಯಕ್ಷ
- ಸಾದಿಕ್ ಅಲಿ ತಂಗಳ್- ಐಯುಎಂಎಲ್ ಅಧ್ಯಕ್ಷ