More

    ಬೀದಿ ನಾಯಿಗಳ ದಾಳಿ; ಉದ್ಯಾನವನದಲ್ಲಿ ಆಟವಾಡುತ್ತಿದ್ದ 7ವರ್ಷದ ಬಾಲಕ ಮೃತ್ಯು

    ಹೈದರಾಬಾದ್​: ಉದ್ಯಾನವನದಲ್ಲಿ ಆಟವಾಡುತ್ತಿದ್ದ 7 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ಗುಂಪೊಂದು ಕಚ್ಚಿ ಕೊಲೆ ಮಾಡಿರುವ ಘಟನೆ ಹೈದರಾಬಾದಿನ ವಾರಂಗಲ್​-ಕಾಜಿಪೇಟ್​ ಪ್ರದೇಶದಲ್ಲಿರುವ ರೈಲ್ವೇ ಕಾಲೋನಿಯಲ್ಲಿ ನಡೆದಿದೆ.

    ಉತ್ತರಪ್ರದೇಶದಿಂದ ವಲಸೆ ಬಂದಿದ್ದ ಬೀದಿ ಬದಿ ವ್ಯಾಪರಸ್ಥರ ಕುಟುಂಬಕ್ಕೆ ಸೇರಿದ್ದ ಚೋಟು(7) ಮೃತ ದುರ್ದೈವಿ ಎಂದು ತಳಿದು ಬಂದಿದೆ.

    ನಾಯಿಗಳ ಅಟ್ಯಾಕ್​

    ಚೋಟು ಉದ್ಯಾನವನದಲ್ಲಿ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಗಳ ಗುಂಪೊಂದು ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಶ್ವಾನವೊಂದು ಚೋಟು ಕತ್ತಿನ ಭಾಗವನ್ನು ಕಚ್ಚಿದ್ದು ದೇಹಾದಾದ್ಯಂತ ಪರಚಿದ ಗಾಯಗಳಾಗಿವೆ.

    Spot Verification
    ಘಟನೆ ನಡೆದ ಸ್ಥಳ

    ಕೂಡಲ್ಲೇ ಅಲ್ಲಿದ್ದ ಸ್ಥಳೀಯರು ಬಾಲಕನನ್ನು ಹತ್ತಿರದ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಚೋಟು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

    ಇದನ್ನೂ ಓದಿ: ವಾಲುತ್ತಿದೆ ಜಗತ್ತಿನ ಅತಿ ಎತ್ತರದ ಶಿವನ ದೇವಾಲಯ; ASIನಿಂದ ಎಚ್ಚರಿಕೆ

    ಹೆಚ್ಚಿದ ಹಾವಳಿ

    ಆಸ್ಪತ್ರೆಗೆ ವಾರಂಗಲ್​ ಪಶ್ಚಿಮ ಕ್ಷೇತ್ರದ ಶಾಸಕ ದಾಸ್ಯಂ ವಿನಯ್​ ಭಾಸ್ಕರ್​, ಹೈದರಾಬಾದ್​ ನಗರ ಪಾಲಿಕೆ ಮೇಯರ್​ ಗುಂಡಾ ಪ್ರಕಾಶ್​ ರಾವ್​ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಸರ್ಕಾರದ ವತಿಯಿಂದ 1 ಲಕ್ಷ ರೂಪಾಯಿ ಪರಿಹಾರದ ಚೆಕ್​ಅನ್ನು ಹಸ್ತಾಂತರಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಬೀದಿ ನಾಯಿ ದಾಳಿ ಮಾಡಿದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು ಮಾರ್ಚ್​ ಹಾಗು ಏಪ್ರಿಲ್​ ತಿಂಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts