ಲಖನೌ: ಮದುವೆಯ ನಂತರದ ಮಧುರ ಕ್ಷಣವೆಂದರೆ ಅದು ಹನಿಮೂನ್. ಈ ಕ್ಷಣಕ್ಕಾಗಿ ವಧು-ವರ ಎದುರು ನೋಡುತ್ತಿರುತ್ತಾರೆ. ಮಧುಚಂದ್ರವು ನವವಿವಾಹಿತ ದಂಪತಿಗಳಿಗೆ ತಮ್ಮನ್ನು ತಾವು ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಕಷ್ಟು ಖಾಸಗಿ ಸಮಯವನ್ನು ನೀಡುತ್ತದೆ. ಇಬ್ಬರೂ ಬೆರೆತು ಒಂದಾಗುವ ಕ್ಷಣ ಶಾಶ್ವತ ನೆನಪಿನಲ್ಲಿ ಉಳಿಯುತ್ತದೆ. ಆದರೆ, ಇದಕ್ಕೆ ವಿರುದ್ಧವಾದ ಘಟನೆಯೊಂದು ವರದಿಯಾಗಿದೆ.
ವರನೊಬ್ಬ ಹನಿಮೂನ್ಗೆ ಹೆದರಿ ನೆರೆಮನೆಯಲ್ಲಿ ಬಚ್ಚಿಟ್ಟುಕೊಂಡ ಸಂಗತಿ ಬಯಲಾಗಿದೆ. ಆತನಿಗೆ ವಧು ಕೋಣೆಯಲ್ಲಿ ಕಾದು ಕುಳಿತರೆ, ವರ ಮಾತ್ರ ನೆರೆಮನೆಯಲ್ಲಿ ತಲೆಮರೆಸಿಕೊಂಡಿದ್ದ. ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದಾಗಿ ಉತ್ತರ ಪ್ರದೇಶದ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಇತ್ತೀಚೆಗೆ ಪತ್ರಿಕೆಯ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತು. “ಹನಿಮೂನ್ ರಾತ್ರಿ ವರನು ನಾಚಿಕೆಯಿಂದ ನೆರೆಯ ಮನೆಗೆ ಹೋಗಿ ಬಚ್ಚಿಟ್ಟುಕೊಂಡನು” ಎಂಬ ಶೀರ್ಷಿಕೆಯೊಂದಿಗೆ ಸುದ್ದಿಯನ್ನು ಪ್ರಕಟಿಸಲಾಗಿದೆ.
ಸ್ಥಳೀಯ ಪತ್ರಿಕೆಯ ಪ್ರಕಾರ ವರನು ಹನಿಮೂನ್ ರಾತ್ರಿಯಂದು ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಾನೆ. ಆತನಿಗಾಗಿ ವಧು ಕೋಣೆಯಲ್ಲೇ ಕಾಯುತ್ತಾ ಕುಳಿತಿರುತ್ತಾಳೆ. ಇತ್ತ ವರನ ಸುಳಿವು ಸಿಕ್ಕದೆ ಆಘಾತಕ್ಕೆ ಒಳಗಾಗುವ ಕುಟುಂಬಸ್ಥರು ಆತನಿಗಾಗಿ ಹುಡುಕಾಡುತ್ತಾರೆ. ಇದಕ್ಕೂ ಮುನ್ನ ಆತನಿಗೆ ಫೋನ್ ಸಹ ಮಾಡುತ್ತಾರೆ. ಆದರೆ, ಆತನ ಮೊಬೈಲ್ ಸ್ವಿಚ್ ಆಗಿರುತ್ತದೆ. ಎಷ್ಟೇ ಹುಡುಕಾಡಿದರೂ ಆತ ಆ ರಾತ್ರಿ ಸಿಗುವುದೇ ಇಲ್ಲ. ಆತ ಪಕ್ಕದ ಮನೆಯಲ್ಲೇ ಅವಿತು ಕುಳಿತಿದ್ದ.
ಇದಾದ ಮರುದಿನ ಬೆಳಗ್ಗೆ ವರ ತನ್ನ ಫೋನ್ ಸ್ವಿಚ್ ಆನ್ ಮಾಡುತ್ತಾನೆ. ಈ ವೇಳೆ ಕರೆ ಮಾಡುವ ಪಾಲಕರು ಏಕೆ ಈ ರೀತಿ ಮಾಡಿದೆ? ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸುವ ವರ, ನನಗೆ ತುಂಬಾ ನಾಚಿಕೆ ಆಯಿತು ಮತ್ತು ಮುಜುಗರದಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಿದೆ. ಇಡೀ ರಾತ್ರಿ ಮನೆಗೆ ಹಿಂತಿರುಗಲು ಧೈರ್ಯವೇ ಬರಲಿಲ್ಲ ಎಂದು ಹೇಳುತ್ತಾನೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.
ಇಷ್ಟೆಲ್ಲ ಆದರೂ ವರ ಮಾತ್ರ ಹನಿಮೂನ್ ಬಿಟ್ಟು ಏಕೆ ಓಡಿ ಹೋಗಿ ಅವಿತು ಕುಳಿತುಕೊಂಡ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ. ಇನ್ನೊಂದೆಡೆ ಪತ್ರಿಕೆಯ ಅಧಿಕೃತತೆಯ ಮೇಲೆ ಸಂದೇಹವಿದೆ. ಮೀಮ್ಸ್ಗಾಗಿ ಫೋಟೋಶಾಪ್ ಮೂಲಕ ತಿರುಚಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ ಪತ್ರಿಕೆಯ ತುಣುಕು ಮಾತ್ರ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದನ್ನು ನೋಡಿ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ. (ಏಜೆನ್ಸೀಸ್)
ಹನಿಮೂನ್ ವೇಳೆ ವರನಿಗೆ ಮತ್ತು ಬರುವ ಔಷಧಿ ನೀಡಿ ವಧು ಎಸ್ಕೇಪ್! ಪೊಲೀಸ್ ತನಿಖೆಯಲ್ಲಿ ಕಾರಣ ಬಯಲು
ಅಯ್ಯೋ ದುರ್ವಿಧಿಯೇ! ಮದುವೆಯಾದ ಮೂರೇ ದಿನದಲ್ಲಿ ದುರಂತ ಅಂತ್ಯ ಕಂಡ ನವದಂಪತಿ