ಬೆಂಗಳೂರು: ಮಂಸೋರೆ ಅಭಿನಯದ ‘ಆಕ್ಟ್ 1978’ ಚಿತ್ರವು ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆ ನಂತರ ಬಿಡುಗಡೆಗೆ ಇನ್ನ್ಯಾವ ಚಿತ್ರ ಸಿದ್ಧವಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ‘ಆಕ್ಟ್ 1978’ ಚಿತ್ರ ಬಿಡುಗಡೆಯಾದ ಮರುವಾರವೇ ಇನ್ನೊಂದು ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಇದನ್ನೂ ಓದಿ: ಕಿಚ್ಚನ ‘ಫ್ಯಾಂಟಮ್’ ಚಿತ್ರಕ್ಕೆ ಮತ್ತೊಬ್ಬ ಪ್ರೊಡ್ಯೂಸರ್ ಬಂದ್ರು
ಹೌದು, ನವೆಂಬರ್ 27ಕ್ಕೆ ‘ಗಡಿಯಾರ’ ಎಂಬ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ಶೀತಲ್ ಶೆಟ್ಟಿ, ದೀಪಕ್ ರಾಜ್ ಶೆಟ್ಟಿ, ಯಶ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ ಸೇರಿದಂತೆ ಹಲವರು ನಟಿಸಿದ್ದಾರೆ. ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಎಸ್.ಪಿ. ಸಾಂಗ್ಲಿಯಾನ ಅವರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೊಂದು ನೈಜ ಘಟನೆಯನ್ನಾಧರಿಸಿದ ಚಿತ್ರವಂತೆ. ಕರ್ನಾಟಕದಲ್ಲಿ ನಡೆದ ಒಂದು ಘಟಣೆಯನ್ನಿಟ್ಟುಕೊಂಡು ಪ್ರಭಿಕ್ ಮೊಗವೀರ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪುರಾತನ ನಿಧಿ ಮತ್ತು ಅದನ್ನು ಹುಡುಕುವುದಕ್ಕೆ ನಡೆಯುವ ಪ್ರಯತ್ನಗಳ ಕುರಿತು ಈ ಕಥೆ ಸಾಗಲಿದ್ದು, ಇದರಿಂದ ನಮ್ಮ ಐತಿಹಾಸಿಕ ಸ್ಥಳಗಳನ್ನು ಯಾವ ರೀತಿ ಹಾಳು ಮಾಡಲಾಗುತ್ತಿದೆ ಎಂಬುದನ್ನು ಹೇಳಲಾಗಿದೆಯಂತೆ. ಇದೊಂದು ವಿಭಿನ್ನ ಚಿತ್ರವಾಗಿದ್ದು, ಎರಡನೇ ಬಾರಿ ನೋಡಿದರೆ ಚಿತ್ರ ಇನ್ನಷ್ಟು ಚೆನ್ನಾಗಿ ಅರ್ಥವಾಗುತ್ತದಂತೆ. ಹಾಗಂತ ಚಿತ್ರದ ಪೋಸ್ಟರ್ಗಳಲ್ಲೇ ಹೇಳಲಾಗಿದೆ.
ಇದನ್ನೂ ಓದಿ: ಮಂಗಳಮುಖಿಯಾಗಿ ಬದಲಾದ ಮಿಲಿಂದ್ ಸೋಮನ್; ಪತ್ನಿ ಅಂಕಿತಾ ಏನಂತಾರೆ?
ಪ್ರಭಿಕ್ ಈ ಚಿತ್ರವನ್ನು ನಿರ್ದೇಶಿಸಿರುವುದಷ್ಟೇ ಅಲ್ಲ, ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ ಈ ಚಿತ್ರದ ನಿರ್ಮಾಣವನ್ನೂ ಅವರೇ ಮಾಡಿದ್ದಾರೆ.