ಬೆಂಗಳೂರು: ಸಾಮಾನ್ಯವಾಗಿ ಅಮಾವಾಸ್ಯೆ ದಿನ ಏನಾದರೂ ಕೆಟ್ಟದ್ದಾಗುವ ಸಾಧ್ಯತೆ ಇರುತ್ತದೆ. ಮಾಟ-ಮಂತ್ರ, ವಾಮಾಚಾರದಂಥ ಪ್ರಯೋಗ ಮಾಡುವ ಕೆಲವರು ಅದಕ್ಕೂ ಸಾಮಾನ್ಯವಾಗಿ ಅಮಾವಾಸ್ಯೆಯ ಇರುಳನ್ನೇ ಆಯ್ಕೆ ಮಾಡಿಕೊಂಡಿರುತ್ತಾರೆ.
ಇದನ್ನೂ ಓದಿ: ಮಹಾಲಯ ಅಮಾವಸ್ಯೆ ದಿನದಂದೇ ಭೀಕರ ಅಪಘಾತ: ಎಎಸ್ಐ ಪತ್ನಿ-ಮಗಳು ಸೇರಿ ನಾಲ್ವರು ದುರ್ಮರಣ
‘ನಾಳೆ ಯಾವುದಕ್ಕೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು’ ಎಂಬಂತೆ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದು, ಕಾಕತಾಳೀಯ ಎಂಬಂತೆ ನಾಳೆ ಅಮಾವಾಸ್ಯೆಯೂ ಆಗಿರುವುದರಿಂದ ಈಗ ಆ ಪೋಸ್ಟ್ ಬಹಳಷ್ಟು ಪ್ರತಿಕ್ರಿಯೆ ಪಡೆಯಲಾರಂಭಿಸಿದೆ.
ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ ದಿನವೇ ದುರಂತ: ತಾಯಿ-ಮಗ ಕಾರಿನಲ್ಲೇ ಸಾವು
2023ರ ಅಕ್ಟೋಬರ್ 14ರಂದು ಭಾರತದಲ್ಲಿನ ಜನಸಂದಣಿಯ ಸ್ಥಳಕ್ಕೆ ಹೋಗುವುದನ್ನೂ ಆದಷ್ಟೂ ತಪ್ಪಿಸಿ. ಅದರಲ್ಲೂ ವಿಶೇಷವಾಗಿ ಪ್ರಮುಖ ಮಹಾನಗರಗಳಲ್ಲಿ ಎಂದಿರುವ ಆ ವ್ಯಕ್ತಿ, ಉಗ್ರರ ದಾಳಿ, ಕೋಮುಗಲಭೆ ಸಂಭವಿಸುವ ಸಾಧ್ಯತೆ ಇದೆ, ಜನರು ಎಚ್ಚರಿಕೆಯಿಂದಿರಿ ಎಂದು ಸೋಷಿಯಲ್ ಮೀಡಿಯಾ ತಾಣವಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ ರಾತ್ರಿ ಹಳೇ ಮನೆ ಬಳಿ ಜವರಾಯನಂತೆ ಬಂದ ಮಳೆರಾಯ 7 ಜನರ ಪ್ರಾಣ ಹೊತ್ತೊಯ್ದ!
ತನ್ನ ಬಯೋದಲ್ಲಿ ಡೆವಿಲ್ ಆಸ್ಟ್ರಾಲಜರ್ ಎಂದು ಬರೆದುಕೊಂಡಿರುವ ಪ್ರಶಾಂತ್ ಕಿಣಿ ಎಂಬ ಈ ವ್ಯಕ್ತಿಯ ಪೋಸ್ಟ್ ಆತಂಕಕಾರಿಯಾಗಿದ್ದು, ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿ ಆತಂಕ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ.
People shall avoid crowded places in INDIA on 14th October 2023 ,To be precise in major metro cities,
Terrorist attack
Communal riots possible ,
People please be alert 🙏— Prashanth Kini (@AstroPrashanth9) October 13, 2023
ಮಂಚದಡಿಯಲ್ಲಿ ಕೋಟಿಗಟ್ಟಲೆ ಹಣ!; ತಿರುಗುಬಾಣ ಆಗಲಿದೆಯೇ 40% ಕಮಿಷನ್ ಪ್ರಕರಣ?