More

    ಛೇ.. ಇದೆಂಥ ದುರಂತ!; ಮಗಳಿಗೆ ಮದ್ವೆ ಮಾಡಿಸಿ ಗಂಡನ ಮನೆಗೆ ಕಳಿಸಿದ ಬೆನ್ನಿಗೇ ತಂದೆಯ ಸಾವು..

    ಕೊಡಗು: ದಿನವಿಡೀ ಮದುವೆಯ ಸಂಭ್ರಮದಲ್ಲಿದ್ದ ಈ ಮನೆಯವರು ಇನ್ನೇನು ಎಲ್ಲವೂ ಸಾಂಗವಾಗಿ ನೆರವೇರಿತು ಎಂದು ನಿಟ್ಟುಸಿರುಬಿಡುವಷ್ಟರಲ್ಲಿ ಆಗಬಾರದ್ದೊಂದು ಆಗಿಹೋಗಿದೆ. ಪರಿಣಾಮವಾಗಿ ಸಂಭ್ರಮದಿಂದ ಕೂಡಿದ್ದ ಕುಟಂಬಸ್ಥರಲ್ಲಿ ದುಃಖತಪ್ತರಾಗುವಂತಾಗಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆಯ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ‌ ಈ ದುರಂತ ಸಂಭವಿಸಿದ್ದು, ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಇದಕ್ಕೆ ಕಾರಣ ವಧುವಿನ ತಂದೆಯೇ ಮೃತಪಟ್ಟಿದ್ದು.

    ಕಿಬ್ಬೆಟ್ಟ ಗ್ರಾಮದ ಚಿನ್ನಪ್ಪ (60) ಎಂಬವರು ಇಂದು ತಮ್ಮ ಪುತ್ರಿಯ ಮದುವೆಯನ್ನು ಹಮ್ಮಿಕೊಂಡಿದ್ದರು. ಮದುವೆಯ ಬಳಿಕ ಸಂಜೆಯ ಸುಮಾರಿಗೆ ನವವಿವಾಹಿತರನ್ನು ಕಾರಿಗೆ ಹತ್ತಿಸಿ ಗೋಕಾಕ್​ಗೆ ಕಳುಹಿಸಿಕೊಟ್ಟ ಅವರು ಇತ್ತ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಸಂಭ್ರಮದ ವಾತಾವರಣ ಕೆಲವೇ ಕ್ಷಣಗಳಲ್ಲಿ ಶೋಕಸಾಗರದಲ್ಲಿ ಮುಳುಗಿದೆ.

    ಹಾಲು-ಆಲ್ಕೋಹಾಲ್​ ಬಳಿಕ ಪೆಟ್ರೋಲ್​ಗೂ ಮುಗಿಬಿದ್ದ ಜನ; ವಾಟರ್ ಜೆಟ್​ ಪ್ರಯೋಗಿಸಿದ್ರೂ ಡೋಂಟ್​ ಕೇರ್​

    ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts