More

    3 ಲಕ್ಷ ರೂ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತ

    ಹಾವೇರಿ: ಸರ್ಕಾರ ಏನೇ ಅಭಿವೃದ್ಧಿ, ಯೋಜನೆ, ಸಹಾಯ, ಸಹಕಾರ ಎಂದರೂ ರೈತರ ಆತ್ಮಹತ್ಯೆಯಂತೂ ನಿಲ್ಲುತ್ತಿಲ್ಲ. ಒಂದಲ್ಲ ಒಂದು ಕಡೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದೆರಗುತ್ತಿರುತ್ತದೆ. ಇದೀಗ ಆ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆ ಆಗಿದೆ.

    ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಬನೂರು ಗ್ರಾಮದಲ್ಲಿ ಶಿವಮೂರ್ತಯ್ಯ ಹಂಪಯ್ಯ ಗೊಟಗೋಡಿಮಠ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಒಂದು ಎಕರೆ 26 ಗುಂಟೆ ಜಮೀನು ಹೊಂದಿದ್ದ ಇವರು 3 ಲಕ್ಷ ರೂಪಾಯಿ ಸಾಲ ಕೂಡ ಮಾಡಿಕೊಂಡಿದ್ದರು. ಆದರೆ ಸರಿಯಾದ ಬೆಳೆ ತೆಗೆಯಲಾಗದೆ, ಸಾಲ ತೀರಿಸಲಾಗದೆ ಜಮೀನಿನಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ…

    ಸೇಡಿಗೆ ಬಲಿಯಾದನೇ ಹರ್ಷ?; ಆರು ವರ್ಷಗಳಿಂದಿತ್ತು ಹಗೆತನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts