ವಿಜಯವಾಡ: ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಸಿಕೊಂಡರೆ ಒಳ್ಳೆಯ ಕೆಲಸ ಮಾಡಬಹುದು ಎಂಬುದರಲ್ಲಿ ಸಂದೇಹವೇ ಇಲ್ಲ. ಅದೇ ರೀತಿ ಜಾಲತಾಣದಲ್ಲಿ ನಡೆಯುವ ವಂಚನೆಗಳು ಕಡಿಮೆ ಇಲ್ಲ. ಏನೇ ಆಗಲಿ ಆಯ್ಕೆ ಅವರವರ ಮನಸ್ಸಿಗೆ ಬಿಟ್ಟದ್ದು.
ಫೇಸ್ಬುಕ್ನಲ್ಲಿ ಫ್ರೆಂಡ್ಸ್ ರಿಕ್ವೆಸ್ಟ್ ಸ್ವೀಕರಿಸುವಾಗ ಬಹಳ ಹುಷಾರಾಗಿರಬೇಕು. ಹಾಗಂತ ಎಲ್ಲರೂ ಕೆಟ್ಟವರೇನಲ್ಲ. ಕೆಲವು ಒಳ್ಳೆಯವರು ಸಹ ಇರುತ್ತಾರೆ ಎಂಬುದಕ್ಕೆ ಈ ಒಂದು ಘಟನೆ ಒಂದು ತಾಜಾ ಉದಾಹರಣೆ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯೊಬ್ಬನ ಜೀವ ಫೇಸ್ಬುಕ್ ಸ್ನೇಹಿತನಿಂದಲೇ ಉಳಿದಿದೆ.
ಈ ಘಟನೆ ಆಂಧ್ರ ಪ್ರದೇಶ ಅನಂತಪುರದಲ್ಲಿ ನಡೆದಿದೆ. ಸತೀಶ್ ಎಂಬಾತ ತನ್ನ ಫೇಸ್ಬುಕ್ ಸ್ನೇಹಿತ ಅನ್ನಪೂರ್ಣ ಸೇವಾ ಸಮಿತಿ ಸಂಸ್ಥಾಪಕ ಮಹಾಕಾಳಿ ಪ್ರಕಾಶ್ ಎಂಬುವರಿಗೆ ಶನಿವಾರ ಮಧ್ಯಾಹ್ನ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಾನೆ.
ಬಳಿಕ ಪ್ರಕಾಶ್ ಸಾಕಷ್ಟು ಬಾರಿ ಸತೀಶ್ಗೆ ಕರೆ ಮಾಡಿದರೂ ಉತ್ತರಿಸದಿದ್ದಾಗ ತಕ್ಷಣ ಪ್ರಕಾಶ್, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸುತ್ತಾನೆ. ಇದಕ್ಕೆ ತಕ್ಷಣ ಸ್ಪಂದಿಸುವ ಪೊಲೀಸರು ತಾಂತ್ರಿಕ ಸಹಾಯದಿಂದ ಸತೀಶ್ 10 ಕಿ.ಮೀ ಅಂತರದಲ್ಲಿ ಮೆಸೇಜ್ ಮಾಡಿರುವುದು ತಿಳಿಯುತ್ತದೆ. ಬಳಿಕ ಪೊಲೀಸರು ಆ ಸ್ಥಳವನ್ನು ಗುರುತಿಸುತ್ತಾರೆ.
ಈ ವೇಳೆ ಸತೀಶ್ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಯ ಮೇಲೆ ಮಲಗಿರುತ್ತಾನೆ. ಇದನ್ನು ನೋಡಿದ ಪೊಲೀಸರು ಸತೀಶ್ನನ್ನು ರಕ್ಷಿಸುತ್ತಾರೆ. ಇನ್ನು ಏಳು ನಿಮಿಷಗಳಲ್ಲಿ ರೈಲು ಬರುವ ಸಾಧ್ಯತೆಯು ಇತ್ತು. ಆದರೆ, ಅಷ್ಟರಲ್ಲಾಗಲೇ ಆತನ ಜೀವವನ್ನು ಪೊಲೀಸರು ಉಳಿಸಿದ್ದಾರೆ. ಅದಕ್ಕೆ ಕಾರಣ ಸತೀಶನ ಫೇಸ್ಬುಕ್ ಫ್ರೆಂಡ್. (ಏಜೆನ್ಸೀಸ್)
ಸದ್ದಿಲ್ಲದೆ ಮದುವೆಯಾದ ಚೈತ್ರಾ ಕೊಟ್ಟೂರು! ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ
ಬಿಜೆಪಿ ಗೆದ್ದರೆ ಪ್ರತಿ ಹೆಣ್ಣು ಮಗುವಿನ ಖಾತೆಗೆ 1 ಲಕ್ಷ ರೂಪಾಯಿ: ಖುಷ್ಬೂ ಸುಂದರ್ ಭರವಸೆ