ಬೆಂಗಳೂರು: ಬಿಗ್ಬಾಸ್ ಸೀಸನ್ 7ರಲ್ಲಿ ಸ್ವರ್ಧಾಳುವಾಗಿದ್ದ ನಟಿ ಚೈತ್ರಾ ಕೊಟ್ಟೂರು ಸದ್ದಿಲ್ಲದೆಯೇ ಹಸೆಮಣೆ ಏರಿದ್ದಾರೆ. ಬ್ಯಾಟರಾಯನಪುರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಸರಳ ವಿವಾಹ ಮಾಡಿಕೊಂಡು ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.
ನಾಗಾರ್ಜುನ್ ಹೆಸರಿನ ವರನನ್ನು ಚೈತ್ರಾ ಅವರು ಮದುವೆಯಾಗಿದ್ದಾರೆ. ನಾಗಾರ್ಜುನ್ ಕನ್ಸ್ಟ್ರಕ್ಷನ್ ರಿಯಲ್ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಕರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಆಡಂಭರವಿಲ್ಲದೆ, ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನೆರವೇರಿದೆ.
ಚೈತ್ರಾ ಕೊಟ್ಟೂರು ಬಿಗ್ಬಾಸ್ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಅದಾದ ನಂತರ ಅವರಿಗೆ ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳೂ ಬಂದಿತ್ತು. ಇತ್ತೀಚೆಗೆ ‘ಹುಡುಗರು ತುಂಬಾ ಒಳ್ಳೆವ್ರು, ಟೈಂ ಬೇಕು ಒಂಚೂರು’ ಎನ್ನುವ ಆಲ್ಬಂ ಸಾಂಗ್ ಒಂದರಲ್ಲಿ ಸಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಅರವಿಂದ್ ಕೌಶಿಕ್ ನಿರ್ದೇಶನದ ಲಗ್ನ ಪತ್ರಿಕೆ ಧಾರಾವಾಹಿಯಲ್ಲಿ ನಮಿತಾ ಎಂಬ ಖಳನಾಯಕಿ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
‘ಸಂತ್ರಸ್ತೆ ಇನ್ನೂ ಸಿಕ್ಕಿಲ್ಲವೆಂದರೆ ನಾಚಿಕೆಗೇಡು, ಅವಳನ್ನ ಮೊದಲು ಹೊರಗೆ ಕರ್ಕೊಂಡು ಬನ್ನಿ..’