ನವದೆಹಲಿ/ಪಟನಾ: ಇತ್ತೀಚೆಗಷ್ಟೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆ ತೊರೆದು ಜೆಡಿಯು ಸೇರಿರುವ ಗುಪ್ತೇಶ್ವರ ಪಾಂಡೆಗೆ ಟಿಕೆಟ್ ದೊರಕಿಲ್ಲ. ಆದರೆ, ಮಾಜಿ ಕಾನ್ಸ್ಟೆಬಲ್ ಪುರುಷೋತ್ತಮ ಚತುರ್ವೆದಿ ಬಿಜೆಪಿಯಿಂದ ಟಿಕೆಟ್ ಗಟ್ಟಿಸಿಕೊಂಡು, ಬಕ್ಸರ್ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಪಾಂಡೆ ತಮ್ಮ ತವರೂರಾದ ಬಕ್ಸರ್ನಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಪಾಂಡೆಯವರನ್ನು ನ. 7ಕ್ಕೆ ಉಪಚುನಾವಣೆ ನಡೆಯಲಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: ದೀದಿ ನಾಡಲ್ಲಿ ಭುಗಿಲೆದ್ದ ಘರ್ಷಣೆ; ನಬನ್ನಾ ಚಲೋ ತಡೆದ ಪೊಲೀಸರ ವಿರುದ್ಧ ಬಿಜೆಪಿ ಆಕ್ರೋಶ
ಬಿಹಾರದಲ್ಲಿ ಸೀಟು ಹಂಚಿಕೆ ಹಾಗೂ ನಾಯಕತ್ವ ವಿಚಾರದಲ್ಲಿ ಮುನಿಸಿಕೊಂಡು ಎನ್ಡಿಎ ತೊರೆದಿದ್ದ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನತಾಂತ್ರಿಕ ಪಕ್ಷವು (ಎಲ್ಜೆಪಿ) ಬಿಜೆಪಿ ಹಾಗೂ ಜೆಡಿಯು ಬಿಟ್ಟು ಬರುತ್ತಿರುವ ನಾಯಕರಿಗೆ ಗಾಳ ಹಾಕಿದೆ. ಕೆಲವು ಹಾಲಿ ಹಾಗೂ ಮಾಜಿ ಶಾಸಕರ ಸಹಿತ ಸುಮರು 10 ಬಿಜೆಪಿ ನಾಯಕರಿಗೆ ಎಲ್ಜೆಪಿ ಟಿಕೆಟ್ ಸಿಗುವ ಸಂಭವವಿದೆ. ಜೆಡಿಯು ಟಿಕೆಟ್ ನಿರಾಕರಿಸಿರುವ ಇಬ್ಬರು ಹಾಲಿ ಶಾಸಕರಿಗೆ ಕೂಡ ಎಲ್ಜಿಪಿಯಿಂದ ಟಿಕೆಟ್ ದೊರೆಯುವುದು ಖಚಿತವಾಗಿದೆ.
ನಾಡಬಾಂಬ್ ಎಸೆದ್ರು ನಮ್ಮ ರ್ಯಾಲಿ ಮೇಲೆ, ಟಿಎಂಸಿಯ ಗೂಂಡಾಗಳದ್ದೇ ಕೆಲ್ಸ ಇದು- ತೇಜಸ್ವಿಸೂರ್ಯ ಗಂಭೀರ ಆರೋಪ