More

    ಮಾಜಿ ಕಾನ್​ಸ್ಟೆಬಲ್ ಟಿಕೆಟ್, ಮಾಜಿ ಡಿಜಿಪಿಗೆ ಇಲ್ಲ! : ಬಿಜೆಪಿ, ಜೆಡಿಯು ತೊರೆದ ನಾಯಕರಿಗೆ ಎಲ್​ಜೆಪಿ ಗಾಳ

    ನವದೆಹಲಿ/ಪಟನಾ: ಇತ್ತೀಚೆಗಷ್ಟೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆ ತೊರೆದು ಜೆಡಿಯು ಸೇರಿರುವ ಗುಪ್ತೇಶ್ವರ ಪಾಂಡೆಗೆ ಟಿಕೆಟ್ ದೊರಕಿಲ್ಲ. ಆದರೆ, ಮಾಜಿ ಕಾನ್​ಸ್ಟೆಬಲ್ ಪುರುಷೋತ್ತಮ ಚತುರ್ವೆದಿ ಬಿಜೆಪಿಯಿಂದ ಟಿಕೆಟ್ ಗಟ್ಟಿಸಿಕೊಂಡು, ಬಕ್ಸರ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ.

    ಪಾಂಡೆ ತಮ್ಮ ತವರೂರಾದ ಬಕ್ಸರ್​ನಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಪಾಂಡೆಯವರನ್ನು ನ. 7ಕ್ಕೆ ಉಪಚುನಾವಣೆ ನಡೆಯಲಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗುವುದು ಎನ್ನಲಾಗಿದೆ.

    ಇದನ್ನೂ ಓದಿ: ದೀದಿ ನಾಡಲ್ಲಿ ಭುಗಿಲೆದ್ದ ಘರ್ಷಣೆ; ನಬನ್ನಾ ಚಲೋ ತಡೆದ ಪೊಲೀಸರ ವಿರುದ್ಧ ಬಿಜೆಪಿ ಆಕ್ರೋಶ

    ಬಿಹಾರದಲ್ಲಿ ಸೀಟು ಹಂಚಿಕೆ ಹಾಗೂ ನಾಯಕತ್ವ ವಿಚಾರದಲ್ಲಿ ಮುನಿಸಿಕೊಂಡು ಎನ್​ಡಿಎ ತೊರೆದಿದ್ದ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನತಾಂತ್ರಿಕ ಪಕ್ಷವು (ಎಲ್​ಜೆಪಿ) ಬಿಜೆಪಿ ಹಾಗೂ ಜೆಡಿಯು ಬಿಟ್ಟು ಬರುತ್ತಿರುವ ನಾಯಕರಿಗೆ ಗಾಳ ಹಾಕಿದೆ. ಕೆಲವು ಹಾಲಿ ಹಾಗೂ ಮಾಜಿ ಶಾಸಕರ ಸಹಿತ ಸುಮರು 10 ಬಿಜೆಪಿ ನಾಯಕರಿಗೆ ಎಲ್​ಜೆಪಿ ಟಿಕೆಟ್ ಸಿಗುವ ಸಂಭವವಿದೆ. ಜೆಡಿಯು ಟಿಕೆಟ್ ನಿರಾಕರಿಸಿರುವ ಇಬ್ಬರು ಹಾಲಿ ಶಾಸಕರಿಗೆ ಕೂಡ ಎಲ್​ಜಿಪಿಯಿಂದ ಟಿಕೆಟ್ ದೊರೆಯುವುದು ಖಚಿತವಾಗಿದೆ.

    ನಾಡಬಾಂಬ್ ಎಸೆದ್ರು ನಮ್ಮ ರ‍್ಯಾಲಿ ಮೇಲೆ, ಟಿಎಂಸಿಯ ಗೂಂಡಾಗಳದ್ದೇ ಕೆಲ್ಸ ಇದು- ತೇಜಸ್ವಿಸೂರ್ಯ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts