ಬೆಂಗಳೂರು: ದುನಿಯಾ ವಿಜಯ್ ಕತ್ರಿಗುಪ್ಪೆಯ ಸರ್ಕಾರಿ ಶಾಲೆಗೆ ಆಗಮಿಸಿ ಮತ ಚಲಾಯಿಸಿದ್ದು ನಂತರ ಸಾರ್ವಜನಿಕರಿಗೆ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಅಭಿಮಾನಿಯ ರಕ್ತದಲ್ಲೇ ಮೂಡಿಬಂತು ನಟ ದುನಿಯಾ ವಿಜಯ್ ಚಿತ್ರ!
ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದುನಿಯಾ ವಿಜಯ್ “ಮತದಾನ ಮಾಡೋದು ನಮ್ಮ ಹಕ್ಕು. ಯಾರು ಮನೆಯಲ್ಲಿ ಸುಮ್ನೆ ಕೂರಬೇಡಿ. ಮಿಸ್ ಮಾಡದೇ ಎಲ್ಲರೂ ವೋಟ್ ಮಾಡಿ. ಎಲೆಕ್ಷನ್ 5 ವರ್ಷಕ್ಕೊಮ್ಮೆ ಬರೋದು. ಅದರ ಪ್ರಯೋಜನ ನಮಗೆ ಇರೋದು. ಬೇರೆಯವರಿಗೆ ಅಲ್ಲ. ಹಾಗಾಗಿ ಮಸ್ಟ್ ವೋಟ್ ಅಂತೀನಿ ಅಷ್ಟೇ” ಎಂದಿದ್ದಾರೆ
ಇನ್ನು ಹಣ-ಹೆಂಡಕ್ಕೆ ಮಾರು ಹೋಗೋರಿಗೆ ದುನಿಯಾ ವಿಜಿ ಕಿವಿಮಾತು ಹೇಳಿದ್ದು “ಬೇಜವಬ್ದಾರಿ ಮಾಡದೇ ವೋಟ್ ಮಾಡಿ. ಯಾವ ಸರ್ಕಾರ ಬಂದ್ರ ಬಡತನ ನಿರ್ಮೂಲನೆ ಆಗುತ್ತದೆ ಎಂದು ನೋಡಿಕೊಳ್ಳಿ” ಎಂದಿದ್ದಾರೆ.