ಪ್ಲಾಸ್ಟಿಕ್ ಕವರ್‌ನಲ್ಲಿ ಪಾರ್ಸಲ್ ನೀಡದಿರಿ

harapanahalli_1

ಹರಪನಹಳ್ಳಿ: ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಏಕಬಳಕೆ ಹಾಗೂ ಎಲ್ಲ ರೀತಿಯ ಪ್ಲಾಸ್ಟಿಕ್ ಬಳಸಿದಲ್ಲಿ ದಂಡ ವಿಧಿಸುವುದರ ಜತೆಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಎಚ್ಚರಿಸಿದರು.

blank

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಸ್ತೆಬದಿಯ ಫಾಸ್ಟ್‌ಫುಡ್ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದರು. ಬೀದಿಬದಿ ವ್ಯಾಪಾರ ಮಾಡುವ ಎಗ್‌ರೈಸ್, ಗೋಬಿ, ಪಾನಿಪುರಿ ಮುಂತಾದ ವ್ಯಾಪಾರಸ್ಥರು ಪ್ಲಾಸ್ಟಿಕ್‌ನಲ್ಲಿ ಪಾರ್ಸಲ್ ಕೊಡಬಾರದು. ಇದರಿಂದ ಜನರ ಆರೋಗ್ಯ ಹದಗೆಡುವುದು ಖಚಿತ. ಆದ್ದರಿಂದ ಬಾಳೆ ಎಲೆ, ಪತ್ರವಳಿ, ಕಾಗದ ಚೀಲ ಈ ರೀತಿ ವಸ್ತುಗಳನ್ನು ಉಪಯೋಗಿಸಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ:http://ಪ್ಲಾಸ್ಟಿಕ್ ಕವರ್‌ನಲ್ಲಿ ಪಾರ್ಸಲ್ ನೀಡದಿರಿ
ಅಡುಗೆಯಲ್ಲಿ ಟೇಸ್ಟಿಂಗ್ ಪೌಡರ್ ಬಳುಸುವುದು ಸರಿಯಲ್ಲ. ಇದು ಕ್ಯಾನ್ಸರಕಾರಕವಾಗಿದೆ. ಎಗ್ ರೈಸ್ ಅಂಗಡಿಯವರು ರಸ್ತೆ ಬದಿ ಅಂಗಡಿ ಇಟ್ಟುಕೊಂಡು ಖಾರದ ಪುಡಿಯನ್ನು ಜೋರಾಗಿ ಪಾತ್ರೆಯಲ್ಲಿ ಎಸೆಯುತ್ತೀರಿ ಇದರಿಂದ ದಾರಿಯಲ್ಲಿ ಹೋಗುವವರ ಕಣ್ಣಿಗೆ ಖಾರದ ಪುಡಿ ತಾಗುತ್ತಿದೆ ಎಂಬ ದೂರುಗಳು ಬಂದಿವೆ. ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯುವುದಿಲ್ಲ, ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ.

blank

ನಾವು ಬದುಕಬೇಕು, ಇತರರನ್ನು ಬದುಕಿಸಬೇಕು, ಪ್ಲಾಸ್ಟಿಕ್ ಬಳಸಿದರೆ ಮೊದಲಿಗೆ ದಂಡ ನಂತರ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಬಿಸಿಎಂ ಇಲಾಖೆಯ ಅಧಿಕಾರಿ ಬಿ.ಎಚ್.ಚಂದ್ರಪ್ಪ ಮಾತನಾಡಿದರು.

Share This Article

ದಾಲ್ಚಿನ್ನಿ ಪುರುಷರಿಗೆ ಎಷ್ಟು ಪ್ರಯೋಜನಕಾರಿ ಗೊತ್ತಾ? cinnamon benefits

cinnamon benefits: ದಾಲ್ಚಿನ್ನಿ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ. ದಾಲ್ಚಿನ್ನಿ ಸೇವನೆಯು ವಿಶೇಷವಾಗಿ ಪುರುಷರಿಗೆ ಒಳ್ಳೆಯದು…

ಈ ರಾಶಿಯ ಜನರು ಯಾರಿಗೋಸ್ಕರನೂ ತಮ್ಮ ಈ ಗುಣವನ್ನು ಎಂದಿಗೂ ಬಿಟ್ಟುಕೊಡಲ್ಲ! ನಿಮ್ಮ ಬಗ್ಗೆ ಹೇಗೆ? Zodiac Sign

Zodiac Sign : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ತಲೆಯ ಬಲಭಾಗದಲ್ಲಿ ಆಗಾಗ ನೋವು ಅನುಭವಿಸುತ್ತಿದ್ದೀರಾ? ಈ ಲಕ್ಷಣಗಳನ್ನು ನಿರ್ಲಕ್ಷಿಸಲೇಬೇಡಿ! Headache

Headache : ಯಾರೇ ಆಗಲಿ ಆಗಾಗ ತಲೆನೋವು ಅನುಭವಿಸುತ್ತಲೇ ಇರುತ್ತಾರೆ. ಹೆಚ್ಚಿನ ಜನರು ಚಹಾ ಅಥವಾ…