ಮುಂಬೈ: ಈ ಕಂಗನಾ ರಣಾವತ್ ಮತ್ತು ಗಾಯಕ ದಿಲ್ಜಿತ್ ದೊಸಾಂಜ್ ನಡುವಿನ ಕದನ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ, ದಿಲ್ಜಿತ್ ಅವರು ಲೋಕಲ್ ಕ್ರಾಂತಿಕಾರಿ ಎಂದು ಕಂಗನಾ ಹೇಳಿದ್ದರು. ಇದೀಗ ನೀವ್ಯಾಕೆ ನನ್ನ ಪಿಆರ್ಓ ಆಗಬಾರದು ಎಂದು ದಿಲ್ಜಿತ್ ದೊಸಾಂಜ್ ಆಹ್ವಾನ ಕೊಟ್ಟಿದ್ದಾರೆ.
ಕಂಗನಾ ಮತ್ತು ದಿಲ್ಜಿತ್ ನಡುವಿನ ಕದನಕ್ಕೆ ಒಂದು ತಿಂಗಳ ಇತಿಹಾಸವಿದೆ. ಕಳೆದ ತಿಂಗಳು ದೆಹಲಿಯಲ್ಲಿ ಪ್ರಾರಂಭವಾದ ರೈತರ ಪ್ರತಿಭಟನೆಯಿಂದ, ಕಂಗನಾ ಮತ್ತು ದಿಲ್ಜಿತ್ ಅವರ ಜಗಳವೂ ಪ್ರಾರಂಭವಾಯಿತು. ಆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಒಬ್ಬ ಹಿರಿಯರ ಕುರಿತು ಕಂಗನಾ ಟ್ವೀಟ್ ಮಾಡಿದ್ದರು. 10 ರೂ ಕೊಟ್ಟರೆ ಈ ಮಹಿಳೆ ರೈತ ಚಳವಳಿಗೂ ಬರುತ್ತಾರೆ, ಶಾಹೀನ್ಭಾಗ್ ಪ್ರತಿಭಟನೆಯಲ್ಲೂ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ನೂರು ಮೊಬೈಲ್ಗಲನ್ನು ಉಡುಗೊರೆಯಾಗಿ ಕೊಟ್ಟ ಸೋನು ಸೂದ್
ಇದರ ವಿರುದ್ಧ ಗಟ್ಟಿಧ್ವನಿ ಎತ್ತಿದವರು ದಿಲ್ಜಿತ್. ರೈತಮಹಿಳೆಯ ಕುರಿತಾಗಿ ಈ ರೀತಿಯ ಕೆಟ್ಟ ಹೇಳಿಕೆ ಸರಿಯಲ್ಲ ಎಂದು ಅವರು ಖಂಡಿಸಿದ್ದರು. ಈ ವಿಷಯವಾಗಿ, ಎಲ್ಲರೂ ಕಂಗನಾ ವಿರುದ್ಧ ತಿರುಗಿಬಿದ್ದ ಕಾರಣ, ಆಕೆ ತಮ್ಮ ಟ್ವೀಟ್ ಹಿಂಪಡೆದಿದ್ದರು. ಅಲ್ಲಿಂದ ದಿಲ್ಜಿತ್ ಮೇಲೆ ಸಮಯ ಸಿಕ್ಕಾಗಲೆಲ್ಲಾ ಕಂಗನಾ ಟಾಂಗ್ ಕೊಡುತ್ತಲೇ ಇದ್ದಾರೆ.
ಇತ್ತೀಚೆಗೆ ದಿಲ್ಜಿತ್ ಹಿಮದ ಮಧ್ಯೆ ಇರುವ ಒಂದು ಫೋಟೋ ಶೇರ್ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ, ‘ಹೌದೋ ಅಣ್ಣ. ಅಲ್ಲಿ ರೈತರನ್ನು ಎತ್ತಿಗಟ್ಟಿ ರಸ್ತೆಗೆ ದೂಡಿದ್ದ ಲೋಕಲ್ ಕ್ರಾಂತಿಕಾರಿಗಳು ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ. ಇದು ನಿಜವಾದ ಕ್ರಾಂತಿ’ ಎಂದು ಅವರು ಟಾಂಗ್ ಕೊಟ್ಟಿದ್ದರು.
ಇದನ್ನೂ ಓದಿ: ಥಿಯೇಟರ್ಗೆ ಜತೆಯಾಗಿಯೇ ಎಂಟ್ರಿ ಕೊಡಲಿದ್ದಾರೆ ಕಿಚ್ಚ ದಚ್ಚು; ಮತ್ತೆ ಶುರುವಾಗುತ್ತಾ ಸ್ಯಾಂಡಲ್ವುಡ್ ಫ್ಯಾನ್ಸ್ ವಾರ್?
ಇದಕ್ಕೆ ಉತ್ತರ ಕೊಟ್ಟಿರುವ ದಿಲ್ಜಿತ್, ‘ನೀವು ಏನೆಲ್ಲಾ ಮಾಡಿದ್ದೀರಾ ಎಂಬುದನ್ನು ನೀವು ಮರೆತಿದ್ದರೂ, ಪಂಜಾಬಿಗಳು ಮರೆತಿಲ್ಲ. ಸದ್ಯದಲ್ಲೇ ಅದಕ್ಕೆಲ್ಲಾ ಸರಿಯಾಗಿ ಉತ್ತರ ಕೊಡುತ್ತೇವೆ’ ಎಂದಿದ್ದರು. ಆ ನಂತರ ಕಂಗನಾ ಮತ್ತು ದಿಲ್ಜಿತ್ ನಡುವೆ ಇನ್ನಷ್ಟು ಮಾತಿನ ಸಮರ ಮುಂದುವರೆದಿದೆ.
ಕಂಗನಾ ತಮ್ಮ ವಿರುದ್ಧ ಪದೇಪದೇ ಹರಿಹಾಯುತ್ತಿರುವ ಕುರಿತು ಮಾತನಾಡಿರುವ ದಿಲ್ಜಿತ್, ‘ಆಕೆ ನನ್ನ ಬಗ್ಗೆ ಇಷ್ಟೊಂದು ಯೋಚಿಸುತ್ತಿರುವುದು ನೋಡಿದರೆ, ನನ್ನನ್ನು ತುಂಬಾ ಹಚ್ಚಿಕೊಂಡಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ, ತಮ್ಮ ಪ್ರಚಾರಕರ್ತೆಯನ್ನಾಗಿ ನೇಮಿಸಿಕೊಂಡರೆ ಹೇಗೆ ಎಂಬ ಯೋಚನೆ ಆಗಾಗ ಬರುತ್ತದೆ’ ಎಂದು ದಿಲ್ಜಿತ್ ಹೇಳಿಕೊಂಡಿದ್ದಾರೆ. ಇದಕ್ಕೆ ಕಂಗನಾ ಏನು ಉತ್ತರ ಕೊಡುತ್ತಾರೋ ನೋಡಬೇಕು.
ರಿಯಲ್ ಲೈಫ್ನಲ್ಲಿ ಮಾವ-ಸೊಸೆ; ರೀಲ್ ಲೈಫ್ನಲ್ಲಿ ಮಾತ್ರ ಅಣ್ಣ-ತಂಗಿ