ಲಾಕ್ಡೌನ್ ಸಮಯದಲ್ಲಿ ಅಕ್ಷಯ್ ಕುಮಾರ್, ನಾಸಿಕ್ಗೆ ಹೆಲಿಕಾಫ್ಟರ್ನಲ್ಲಿ ತೆರಳಿ ಅಲ್ಲಿ ರೆಸಾರ್ಟ್ವೊಂದರಲ್ಲಿ ಕೆಲವು ದಿನಗಳ ಕಾಲ ಕಳೆದಿದ್ದರು ಎಂಬ ವಿಷಯ ಇದೀಗ ಸಾಕಷ್ಟು ವಿವಾದ ಹುಟ್ಟುಹಾಕಿದೆ.
ಕರೊನಾದಿಂದ ಇಡೀ ದೇಶಕ್ಕೆ ಲಾಕ್ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ಯಾರೂ ಮನೆ ಬಿಟ್ಟು ಎಲ್ಲೂ ಹೋಗುವಂತಿರಲಿಲ್ಲ. ಒಂದು ಪಕ್ಷ ಹೋದರೂ, ಅದಕ್ಕೆ ಸೂಕ್ತ ಅನುಮತಿ ಪಡೆದು ಪ್ರಯಾಣ ಮಾಡಬೇಕಿತ್ತು. ಆದರೆ, ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ನಾಸಿಕ್ಗೆ ಹೆಲಿಕಾಫ್ಟರ್ನಲ್ಲಿ ಹೋಗಿದ್ದರು ಎಂಬ ವಿಷಯ ಇದೀಗ ಬಹಿರಂಗಗೊಂಡಿದ್ದು, ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
ಇದನ್ನೂ ಓದಿ: ಪಿಪಿಇ ಕಿಟ್ ವಿತರಣೆ: ಪೊಲೀಸರಿಗೆ ಇನ್ಸ್ಪೆಕ್ಟರ್ ವಿಕ್ರಂ ಕಾಣಿಕೆ
ಈ ವಿಷಯವಾಗಿ, ಮಹಾರಾಷ್ಟ್ರದ ಆಹಾರ ಮತ್ತು ಸರಬರಾಜು ಸಚಿವ ಚಗನ್ ಭುಜಬಲ್ ಅವರು ಜಿಲ್ಲಾಡಳಿತಕ್ಕೆ ಸೂಕ್ತ ತನಿಕೆ ಮಾಡುವಂತೆ ಆದೇಶಿಸಿದ್ದಾರೆ. ನಾಸಿಕ್ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಭುಜಬಲ್, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಅದೇ ಕಾರಣಕ್ಕೆ ತನಿಖೆ ಮಾಡುವುದಕ್ಕೆ ಆದೇಶಿಸಿದ್ದಾರೆ ಎಂದು ಹೇಳಲಾಗಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಅಕ್ಷಯ್ ಕುಮಾರ್ ಅವರು ಹೆಲಿಕಾಫ್ಟರ್ ಮೂಲಕ ನಾಸಿಕ್ಗೆ ಬಂದ ವಿಷಯ ನನಗೆ ಗೊತ್ತಿಲ್ಲ. ಆದರೆ, ಬಹಳಷ್ಟು ಜನ ಈ ವಿಷಯವಾಗಿ ನನಗೆ ದೂರು ಸಲ್ಲಿಸಿದ್ದಾರೆ. ಇಂಥ ಸಂದರ್ಭದಲ್ಲಿ ಹೆಲಿಕಾಫ್ಟರ್ನಲ್ಲಿ ಪ್ರಯಾಣ ಮಾಡುವುದು, ರೆಸಾರ್ಟ್ನಲ್ಲಿ ಉಳಿದುಕೊಳ್ಲುವುದು ಸಾಕಷ್ಟು ಚಚೆರ್ಯಾಗುತ್ತಿದೆ. ಅವರು ಯಾವ ಉದ್ದೇಶಕ್ಕಾಗಿ ಬಂದಿದ್ದರು, ಅವರಿಗೆ ಬರುವುದಕ್ಕೆ ಯಾರು ಅನುಮತಿ ಕೊಟ್ಟಿದ್ದರು ಎಂಬ ವಿಷಯಗಳ ಕುರಿತಾಗಿ ತನಿಖೆ ನಡೆಸುವುದಕ್ಕೆ ಹೇಳಿದ್ದೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಪ್ಪನ ಸ್ಟಾರ್ಗಿರಿ ನೆರಳಿಂದ ಅಂತರ ಕಾಯ್ದುಕೊಂಡಿದ್ದೇನೆ: ಟೈಗರ್ ಶ್ರಾಫ್
ಮೂಲಗಳ ಪ್ರಕಾರ, ಅಕ್ಷಯ್ ಕುಮಾರ್ ಅವರು ನಾಸಿಕ್ನ ತ್ರಯಂಬೇಕೇಶ್ವರದಲ್ಲಿ ಮಾರ್ಷಲ್ ಆರ್ಟ್ಸ್ ಮತ್ತು ನ್ಯಾಚುರೋಪತಿ ಕೇಂದ್ರವಾಗಿ ಪ್ರಾರಂಭಿಸುವುದಕ್ಕೆ ಯೋಚಿಸುತ್ತಿದ್ದಾರಂತೆ. ಅದೇ ಕಾರಣಕ್ಕೆ ಅವರು ನಾಸಿಕ್ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗುತ್ತದೆ.
ಇನ್ನೊಂದು ಮೂಲದ ಪ್ರಕಾರ, ಅಕ್ಷಯ್ ಕುಮಾರ್ ಅವರು ನ್ಯಾಚುರೋಪತಿ ಚಿಕಿತ್ಸೆ ಪಡೆಯುತ್ತಿದ್ದು, ಅದೇ ಕಾರಣಕ್ಕೆ ನಾಸಿಕ್ನ ಹೊರವಲಯದಲ್ಲಿರುವ ರೆಸಾರ್ಟ್ಗೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಕಾರಣ ಏನಾದರೂ ಇರಲಿ, ಒಟ್ಟಿನಲ್ಲಿ ಅಕ್ಷಯ್ ಕುಮಾರ್ ಇದೀಗ ತೀವ್ರ ವಿವಾದಕ್ಕೆ ತುತ್ತಾಗಿದ್ದಾರೆ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಸಿನಿಮಾ ಸೀರೆ!: ಇದು ಕನ್ನಡದ ನಟಿಯರಿಗೆ ಅರ್ಪಣೆ