ನವದೆಹಲಿ: ಸರ್ಕಾರದ ಮುಖ್ಯ ಕಾರ್ಯದರ್ಶಿ ತನ್ನ ಮಗನಿಗೆ ಸಂಬಂಧಿತ ಕಂಪನಿಯೊಂದಕ್ಕೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮುಖ್ಯಮಂತ್ರಿಯವರಿಗೆ 670 ಪುಟಗಳ ಪ್ರಾಥಮಿಕ ವರದಿ ಕೂಡ ಸಲ್ಲಿಕೆ ಆಗಿದೆ.
ಈ ಪ್ರಕರಣದಲ್ಲಿ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಆರೋಪಿ. ದ್ವಾರಕಾ ಎಕ್ಸ್ಪ್ರೆಸ್ವೇ ಯೋಜನೆಯಲ್ಲಿ ನರೇಶ್ ತಮ್ಮ ಪುತ್ರನಿಗೆ ಸಂಬಂಧಿತ ಕಂಪನಿಗೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟಿದ್ದಾರೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಸಲ್ಲಿಸಲಾದ 670 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ವಿಜಿಲೆನ್ಸ್ ಮಿನಿಸ್ಟರ್ ಅತಿಷಿ ಈ ಕುರಿತ ತನಿಖೆಗೆ ಆದೇಶಿಸಿದ್ದರು.
ಇದನ್ನೂ ಓದಿ: ಹೋರಿ ಬೆದರಿಸುವ ಸ್ಪರ್ಧೆ: ಹಬ್ಬದಲ್ಲಿ ಪಾಲ್ಗೊಂಡ ಹೋರಿಯೇ ಪರಾರಿ; ಆಮೇಲೇನಾಯ್ತು!
ಮುಖ್ಯ ಕಾರ್ಯದರ್ಶಿ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳು ಸುಳ್ಳು ಹಾಗೂ ಆಧಾರರಹಿತ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಶ್ವಿನಿ ಕುಮಾರ್ ಸುದ್ದಿಗೋಷ್ಠಿ ನಡೆಸಿ ಸಮಜಾಯಿಷಿ ನೀಡಿದ ಬೆನ್ನಿಗೇ ಈ ಪ್ರಕರಣಕ್ಕೆ ಸಂಬಂಧಿತ ಪ್ರಾಥಮಿಕ ವರದಿ ಹೊರಬಿದ್ದಿದೆ. ಅದಾಗ್ಯೂ ಈ ವಿಷಯವಾಗಿ ಮುಖ್ಯ ಕಾರ್ಯದರ್ಶಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ವಿಶ್ವಕಪ್ ಪಂದ್ಯಗಳಲ್ಲಿ ಸೋಲು; ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಏನಾಗಲಿದೆ ಬದಲಾವಣೆ?
ದ್ವಾರಕಾ ಎಕ್ಸ್ಪ್ರೆಸ್ವೇ ಸಲುವಾದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನರೇಶ್ ಕುಮಾರ್ ಮತ್ತು ಡಿಸಿ ಹೇಮಂತ್ ಕುಮಾರ್ ಮತ್ತು ಭೂಮಾಲೀಕರ ಮಧ್ಯೆ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ನರೇಶ್ ಕುಮಾರ್ ಪುತ್ರ ಕರಣ್ ಚೌಹಾನ್ಗೆ ಸಂಬಂಧಿತ ಕಂಪನಿಗೆ ಕೋಟಿಗಟ್ಟಲೆ ರೂ. ಮೌಲ್ಯದ ಅನುಕೂಲವನ್ನು ಅಕ್ರಮವಾಗಿ ಮಾಡಿರುವುದನ್ನೂ ಉಲ್ಲೇಖಿಸಲಾಗಿದೆ.
ಈ ವ್ಯವಹಾರದಲ್ಲಿ 850 ಕೋಟಿ ರೂ. ಮೊತ್ತದ ಅಕ್ರಮವಾಗಿದ್ದರೂ ಈ ಹಗರಣ ಬರೀ 312 ಕೋಟಿ ರೂ. ಮೊತ್ತದ್ದು ಎಂದು ತೋರಿಸುವ ನಿಟ್ಟಿನಲ್ಲಿಯೂ ವಿಜಿಲೆನ್ಸ್ನ ಕೆಲವು ಅಧಿಕಾರಿಗಳೊಂದಿಗೆ ನರೇಶ್ ಕುಮಾರ್ ಪ್ರಯತ್ನ ನಡೆಸಿದ್ದಾರೆಂದೂ ಹೇಳಲಾಗುತ್ತಿದೆ.
ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?
ನನ್ನ ಆಯ್ಕೆ ಅವರ ತೀರ್ಮಾನ, ಇದಕ್ಕೆ ಯಾರದ್ದೂ ವಿರೋಧವಿಲ್ಲ: ಬಿ.ವೈ.ವಿಜಯೇಂದ್ರ