ನವ ದೆಹಲಿ: ಇಂಜುರಿ ಸಮಸ್ಯೆಯಿಂದಾಗಿ ಟಿ-20 ವಿಶ್ವಕಪ್ ತಂಡದಿಂದ ಹೊರನಡೆದಿರುವ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಬಿಸಿಸಿಐ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ನಡುವೆ 2007ರ ಚೊಚ್ಚಲ ಟಿ-20 ವಿಶ್ವಕಪ್ ಜಯಿಸಿದ್ದ ತಂಡದಲ್ಲಿದ್ದ ಹರ್ಭಜನ್ ಸಿಂಗ್, ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಬದಲಿಗೆ ದೀಪಕ್ ಚಹರ್ಗೆ ಅವಕಾಶ ಕೊಡಬೇಕು ಎಂದಿದ್ದಾರೆ.
ದೀಪಕ್ ಚಹರ್ ಈಗಾಗಲೇ ಮೀಸಲು ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಇವರನ್ನು ಆಡುವ ಹನ್ನೊಂದರ ಬಳಗದಲ್ಲಿ ಬಳಸಿಕೊಳ್ಳಬೇಕು. ದೀಪಕ್ ಚಹರ್ ಹೊಸ ಬಾಲ್ನಲ್ಲಿ 2-3 ವಿಕೆಟ್ ತೆಗೆಯುವ ಸಾಮರ್ಥ್ಯವುಳ್ಳ ಬೌಲರ್. ಜತೆಗೆ ಸ್ವಿಂಗ್ ಬಾಲ್ನಲ್ಲೂ ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅನುಭವಿ ಭುವನೇಶ್ವರ್ ಕುಮಾರ್ಗೆ ಹೋಲಿಸಿದರೆ ದೀಪಕ್ ಚಹರ್ನಲ್ಲಿ ಹೆಚ್ಚಿನ ಕೌಶಲ್ಯವಿದೆ ಎಂದಿದ್ದಾರೆ.
ನನ್ನ ಪ್ರಕಾರ ದೀಪಕ್ ಚಹರ್ ಇನ್ಸ್ವಿಂಗ್ ಹಾಗೂ ಔಟ್ಸ್ವಿಂಗ್ ಬೌಲಿಂಗ್ ಉತ್ತಮವಾಗಿ ಮಾಡುತ್ತಾರೆ. ಪವರ್ ಪ್ಲೇನಲ್ಲಿ ಸ್ವಿಂಗ್ ಬೌಲಿಂಗ್ ಮೂಲಕ 2-3 ವಿಕೆಟ್ ಪಡೆಯುವ ಸಾಮರ್ಥ್ಯವಿದೆ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭವನೇಶ್ವರ್ ಕುಮಾರ್ ಅನುಭವಿ ವೇಗಿ. ಡೆತ್ ಓವರ್, ಅದರಲ್ಲೂ 19ನೇ ಓವರ್ನಲ್ಲಿ ಬೌಲರ್ಗಳು 8 – 10 ರನ್ ನೀಡುವುದು ಸಾಮಾನ್ಯ. ಸದ್ಯ ಭವನೇಶ್ವರ್ 15ಕ್ಕಿಂತ ಹೆಚ್ಚಿನ ರನ್ ನೀಡುತ್ತಿದ್ದಾರೆ. ಇದು ತಂಡದ ಗೆಲುವಿನ ಮೇಲೆ ಹೊಡೆತ ಬೀಳುತ್ತದೆ. ತಂಡದ ಒತ್ತಡಕ್ಕೂ ಕಾರಣವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಭುವನೇಶ್ವರ್ಗಿಂತ ದೀಪಕ್ ಚಹರ್ಗೆ ಸ್ಥಾನ ನೀಡುವುದು ಸೂಕ್ತ ಎಂದಿದ್ದಾರೆ. (ಏಜೆನ್ಸೀಸ್)