ಮಂಗಳೂರು: ಹಾಲು ತರಲು ಹೋಗುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾಕಷ್ಟು ಅಂತರದಿಂದ ಹಾರಿ ಎದುರಿನಿಂದ ಬರುತ್ತಿದ್ದ ಬೈಕ್ ಅಡಿಗೆ ಬಿದ್ದ ದೃಶ್ಯವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಆ.28ರಂದು ಸಂಜೆ 4.35ರ ಸುಮಾರಿಗೆ ದ.ಕ ಜಿಲ್ಲೆಯ ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿತ್ತು. ಆದರೆ ಅದೃಷ್ಟವಶಾತ್ ಆ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಹೊರತು ಯಾವುದೇ ಅಪಾಯ ಸಂಭವಿಸಿಲ್ಲ.
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟಿನ ವಿಚಾರ ಸ್ಫೋಟಕ ಹೇಳಿಕೆ ನೀಡಿದ ನಟ ಆದಿ ಲೋಕೇಶ್…!
ಅಪಘಾತದ ದೃಶ್ಯ ಎಂಥವರ ಎದೆಯನ್ನು ಝಲ್ಲೆನಿಸುವಂತಿದ್ದು, ಕಾರಿನಲ್ಲಿರುವವರೂ, ಬೈಕ್ ಸವಾರರೂ ಸಂಪೂರ್ಣ ಭಯಭೀತರಾಗಿದ್ದೂ ದೃಶ್ಯದಲ್ಲಿ ಕಂಡು ಬರುತ್ತಿದೆ. ಬಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿರದ ಕಾರಣ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. (ದಿಗ್ವಿಜಯ ನ್ಯೂಸ್)
ಡ್ರಗ್ಸ್ ಚರ್ಚೆಯಲ್ಲಿ ಚಿರು ಹೆಸರು: ದಯವಿಟ್ಟು ಇಂದ್ರಜಿತ್ಗೆ ತಿಳಿಸಿ, ಮೇಘನಾ ರಾಜ್ ನೋವಿನ ಮಾತು!