ಬೆಂಗಳೂರು: ಮಾದಕವಸ್ತು ಜಾಲದ ಬಗ್ಗೆ ನಟ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಾಕಷ್ಟು ಮಾಹಿತಿಗಳನ್ನು ನೀಡಿದ್ದು, ಅವರ ಒಂದು ನಿರ್ಧಿಷ್ಟ ಹೇಳಿಕೆ ಇದೀಗ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.
ಮಾದಕ ಜಾಲದಲ್ಲಿ ಸ್ಯಾಂಡಲ್ವುಡ್ ನಂಟಿದೆ. ಸರ್ಕಾರ ರಕ್ಷಣೆ ಕೊಟ್ಟರೆ ಎಲ್ಲವನ್ನು ಬಹಿರಂಗಪಡಿಸುತ್ತೇನೆಂದು ಹೇಳಿ, ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡಲಿಲ್ಲ? ಎಂದು ಇಂದ್ರಜಿತ್ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಇಂದ್ರಜಿತ್ ಹೇಳಿಕೆ ಬಹು ದೊಡ್ಡ ಚರ್ಚೆಯಾಗಿತು. ಇತ್ತೀಚೆಗೆ ಮೃತಪಟ್ಟ ನಟ ಚಿರಂಜೀವಿ ಸರ್ಜಾ ಕುರಿತೇ ಇಂದ್ರಜಿತ್ ಹೇಳಿದ್ದಾರೆಂದು ಚರ್ಚೆಯಾಗಿತ್ತು.
ಇದರ ಬೆನ್ನಲ್ಲೇ ಚಿರು ಮಾವ ಹಾಗೂ ಮೇಘನಾ ರಾಜ್ ತಂದೆ ಸುಂದರ್ ರಾಜ್ ಚಿರು ಹೆಸರನ್ನು ಪ್ರಸ್ತಾಪಿಸಬೇಡಿ. ಕರೊನಾ ಇದ್ದಿದ್ದರಿಂದ ಶವಪರೀಕ್ಷೆ ಮಾಡಿಸಲಿಲ್ಲ ಎಂದಿದ್ದರು. ಅಲ್ಲದೆ, ಸರ್ಜಾ ಕುಟುಂಬದ ಆಪ್ತರಾದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕಿಡಿಕಾರಿ ಚಿರು ಸತ್ತ ಬಳಿಕ ತೇಜೋವಧೆ ಮಾಡುವುದು ಮಾನವೀಯತೆಯಲ್ಲ ಎಂದು ಇಂದ್ರಜಿತ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಇದೀಗ ಚಿರು ಮೃತಪಟ್ಟು ಮೂರು ತಿಂಗಳಾದರೂ ಚಿರು ಹೆಸರು ಡ್ರಗ್ಸ್ ಜಾಲದಲ್ಲಿ ಕೇಳಿಬರುತ್ತಿರುವುದು ಸರ್ಜಾ ಕುಟುಂಬಕ್ಕೆ ನೋವಾಗಿದೆ. ಅದರಲ್ಲೂ ಪತ್ನಿ ಮೇಘನಾಗೆ ತುಂಬಾ ಬೇಸರವಾಗಿದ್ದು, ಪ್ರಶಾಂತ್ ಸಂಬರಗಿ ಜತೆ ನಡೆಸಿರುವ ವಾಟ್ಸ್ಆ್ಯಪ್ ಚಾಟ್ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಯಾರದೇ ಹೆಸರನ್ನು ಹಾಳು ಮಾಡಬೇಡಿ ಎಂದು ಇಂದ್ರಜಿತ್ ಅವರಿಗೆ ತಿಳಿಸಿ, ಅವರು ಪರಿಸ್ಥಿತಿಯನ್ನು ಕದಡುತ್ತಿದ್ದಾರೆ. ಅವರೇಕೆ ಚಿರು ಹೆಸರನ್ನು ಬಳಸುತ್ತಿದ್ದಾರೆಂದು ಮೇಘನಾ ಅಸಮಾಧಾನ ಹೊರಹಾಕಿದ್ದಾರೆ. ಧ್ರುವ ಸರ್ಜಾ ಸಹ ಚಾಟ್ ಮಾಡಿದ್ದು, ನಮ್ಮ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)
ಸಿನಿರಂಗದಲ್ಲಿ ಮಾದಕ ವ್ಯಸನಿಗಳಿದ್ದಾರೆ: ಸರ್ಜಾ ಕುಟುಂಬದ ಆಪ್ತ ಪ್ರಶಾಂತ್ ಸಂಬರಗಿ ಹೇಳಿಕೆ