ವಿಜಯಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಸಳೆಯೊಂದು ಬಾಯಿಗೆ ಹಗ್ಗ ಕಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೊಲ್ಹಾರ ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 218ರ ಮೇಲೆ ಶನಿವಾರ ಮೊಸಳೆ ಕಾಣಿಸಿಕೊಂಡಿದ್ದು, ಬಾಯಿಗಿ ಬಿಗಿಯಾಗಿ ಹಗ್ಗ ಕಟ್ಟಲ್ಪಟ್ಟಿದೆ.
ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ ಸೇತುವೆ ಬಳಿ ಕಂಡು ಬಂದ ಮೊಸಳೆ ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದಾರೆ. ಯಾವುದೋ ಜನವಸತಿಗೆ ನುಗ್ಗಿದ ಮೊಸಳೆಯ ಬಾಯಿಗೆ ಹಗ್ಗ ಕಟ್ಟಿ ಕೃಷ್ಣಾ ನದಿ ಬಳಿ ಬಿಟ್ಟಿರುವ ಸಾಧ್ಯತೆ ಇದೆ.
ಇದನ್ನೂ ಓದಿ: ಖ್ಯಾತ ಟಿಕ್ಟಾಕರ್ ಖಾಸಗಿ ವಿಡಿಯೋ ಲೀಕ್: ಯಾರನ್ನು ನಂಬುವುದು ಅಂತ ಕಣ್ಣೀರಿಟ್ಟ ಯುವತಿ
ಬಾಯಿಗೆ ಹಗ್ಗ ಕಟ್ಟಿರೋ ಕಾರಣ ಆಹಾರ ಸೇವಿಸಲು ಆಗದೇ ನದಿಯಾಚೆ ಹೊರ ಬಂದಿರುವ ಮೊಸಳೆಯನ್ನು ರಕ್ಷಿಸಲು ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಹೆರಿಗೆಗೆಂದು ಆಸ್ಪತ್ರೆಗೆ ಹೋಗುವಾಗ ಗರ್ಭಿಣಿ ಪತ್ನಿ, ಪತಿ ಸಜೀವ ದಹನ: ನಿಗೂಢ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ
ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್ಗೆ ನಟಿ ಕಸ್ತೂರಿ ಖಡಕ್ ತಿರುಗೇಟು