More

    ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

    ನೆಲಮಂಗಲ: ಅಜ್ಜನ ಮನೆಯಲ್ಲಿದ್ದ 8 ವರ್ಷದ ಮಗನನ್ನು ನೋಡುವ ಆಸೆಗಣ್ಣಿನಲ್ಲಿ ಬರುತ್ತಿದ್ದ ಅಪ್ಪ-ಅಮ್ಮ ಇಬ್ಬರೂ ಮಾರ್ಗಮಧ್ಯೆ ದುರ್ಮರಣಕ್ಕೀಡಾಗಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಂಗಳವಾರ ಬೆಳಗ್ಗೆ ಬೈಕಿನಿಂದ ಬಿದ್ದ ದಂಪತಿ ಮೇಲೆ ಕಂಟೇನರ್​ ಲಾರಿ ಹರಿದು ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ನಗರೂರು ಗ್ರಾಮದ ನರಸಿಂಹಮೂರ್ತಿ(41) ಮತ್ತು ಇವರ ಪತ್ನಿ ಪುಷ್ಪಲತಾ (28) ಮೃತರು.

    ಇದನ್ನೂ ಓದಿರಿ ಇಬ್ಬರು ವಿಷ ಕುಡಿದ್ರು… ಮೂವರು ಸೀಮೆಎಣ್ಣೆ ಕುಡಿದ್ರು… ಈ ಜಗಳದಲ್ಲಿ ಓರ್ವ ಮಹಿಳೆ ಸತ್ತೇ ಹೋದ್ಲು

    ಪುಷ್ಪಲತಾ ಅವರ ತವರು ಮನೆ ತುಮಕೂರು ತಾಲೂಕಿನ ವರದೇನಹಳ್ಳಿಯಲ್ಲಿದೆ. ನರಸಿಂಹಮೂರ್ತಿ ದಂಪತಿಯು ಮಗನನ್ನು ವರದೇನಹಳ್ಳಿಯಲ್ಲಿ ಅಜ್ಜನ ಮನೆಯಲ್ಲೇ ಬಿಟ್ಟಿದ್ದರು. ಮಗನನ್ನು ನೋಡಲೆಂದು ಮಂಗಳವಾರ ಬೆಳಗ್ಗೆ 8ರ ಸುಮಾರಿನಲ್ಲಿ ತೆರಳುತ್ತಿದ್ದಾಗ ಬೂದಿಹಾಳ್​ ಗೇಟ್​ ಬಳಿ ಅಪಘಾತ ಸಂಭವಿಸಿದೆ. ಬೈಕ್​ ನಿಯಂತ್ರಣ ತಪ್ಪಿದ್ದರಿಂದ ಗಂಡ-ಹೆಂಡತಿ ಇಬ್ಬರೂ ರಸ್ತೆಯ ಬಲಬದಿಗೆ ಬಿದ್ದಿದ್ದು, ಹಿಂದಿನಿಂದ ಬಂದ ಕಂಟೇನರ್​ ಇಬ್ಬರ ಮೇಲೆ ಹರಿದಿದೆ. ಸ್ಥಳದಲ್ಲೇ ಅಸುನೀಗಿದ್ದಾರೆ. ಸಂಚಾರ ಪೊಲೀಸರು ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ಅಪಘಾತ ಹಿನ್ನೆಲೆಯಲ್ಲಿ ಬೂದಿಹಾಳ್​ ಗೇಟ್​ ಬಳಿ 1 ಗಂಟೆಗೂ ಹೆಚ್ಚು ಕಾಲ ವಾಹನದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಧಾವಿಸಿದ ಸಂಚಾರ ಪೊಲೀಸರು ಹಾಗೂ ಜಾಸ್​ಟೋಲ್​ ಸಿಬ್ಬಂದಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts