More

    ಯಾರೂ ಇಲ್ಲದಾಗ ಮನೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು; ‘ಕಿಡಿ ಕಾರಿತು’ ಜಮೀನು ವಿವಾದ

    ಬೆಂಗಳೂರು: ಜಮೀನು ವಿವಾದ ಕಾವೇರಿದ್ದು ಮನೆಗೆ ಬೆಂಕಿ ಇಡುವಲ್ಲಿಯವರೆಗೂ ತಲುಪಿದ್ದು, ಮನೆಯಲ್ಲಿರುವ ಹಲವಾರು ಸಾಮಾನುಗಳು ಬೆಂಕಿಯಿಂದಾಗಿ ನಾಶವಾಗಿವೆ. ಜಮೀನು ವಿವಾದ ನ್ಯಾಯಾಲಯದಲ್ಲಿದ್ದರೂ ತಾಳ್ಮೆಗೆಟ್ಟ ಕಿಡಿಗೇಡಿಗಳು ಮನೆಗೆ ಕಿಡಿ ಸೋಕಿಸಿ ಬೆಂಕಿ ಹಚ್ಚಿದ್ದಾರೆ.

    ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲೂಕಿನ ಕೊಡಗುರ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೆಮ್ಮರೆಡ್ಡಿ ಎಂಬುವರಿಗೆ ಸೇರಿದ ಮನೆಗೆ ಡಿಜೆಲ್ ಸುರಿದ ದುರುಳರು ಬೆಂಕಿ ಹಚ್ಚಿದ್ದಾರೆ. ಬೆಂಕಿ ಮನೆಗೆ ಆವರಿಸಿದ್ದರಿಂದ ಅಲ್ಲಿದ್ದ ಪಾತ್ರೆ-ಸಾಮಾನುಗಳು ಸೇರಿ ಹಲವಾರು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

    ಪೆಮ್ಮರೆಡ್ಡಿ ಅವರ ತಂದೆ ಕೆ.ವೆಂಕಟಪ್ಪ ಹಾಗೂ ಮುನಿವೆಂಕಟಪ್ಪ ಎಂಬುವವರಿಗೆ ಸೇರಿದ ಜಂಟಿ 4 ಎಕರೆ 34 ಗುಂಟೆ ಜಮೀನಲ್ಲಿ 2 ಎಕರೆ 17 ಗುಂಟೆಯನ್ನು ಮುನಿವೆಂಕಟಪ್ಪ ಬೇರೆಯವರಿಗೆ ಮಾರಾಟ ಮಾಡಿದ್ದರು. ಉಳಿದ 2 ಎಕರೆ 17 ಗುಂಟೆ ಜಮೀನನ್ನು ಪೆಮ್ಮರೆಡ್ಡಿ ಖರೀದಿಸಿದ್ದರು. ಆದರೆ ಈ ಜಮೀನು ಸಂಬಂಧ ವಿವಾದವಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ.

    ಇನ್ನು ಪೆಮ್ಮರೆಡ್ಡಿ ಅವರ ಮನೆಗೆ ಮುನಿವೆಂಕಟಪ್ಪ ಕಡೆಯವರಾದ ರಘು, ಕಿರಣ್, ವಸಂತ್ ಎಂಬುವವರು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದ್ದು, ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ನಿಮ್ಮ ಪಾಸ್​ವರ್ಡ್​ ದುರ್ಬಳಕೆ ಆದ್ರೆ ಇನ್ನು ನಿಮಗೆ ಅಲರ್ಟ್ ಬರುತ್ತೆ; ಶೀಘ್ರದಲ್ಲೇ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಹೊಸ ಅಪ್​ಡೇಟ್​

    ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಹೊಸ ಕಾರು ಖರೀದಿಸಲು ಸಚಿವ-ಸಂಸದರಿಗೆ ಲಕ್ಷಾಂತರ ಹಣ ಕೊಡುತ್ತೆ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts