ಬೆಂಗಳೂರು: ಜಮೀನು ವಿವಾದ ಕಾವೇರಿದ್ದು ಮನೆಗೆ ಬೆಂಕಿ ಇಡುವಲ್ಲಿಯವರೆಗೂ ತಲುಪಿದ್ದು, ಮನೆಯಲ್ಲಿರುವ ಹಲವಾರು ಸಾಮಾನುಗಳು ಬೆಂಕಿಯಿಂದಾಗಿ ನಾಶವಾಗಿವೆ. ಜಮೀನು ವಿವಾದ ನ್ಯಾಯಾಲಯದಲ್ಲಿದ್ದರೂ ತಾಳ್ಮೆಗೆಟ್ಟ ಕಿಡಿಗೇಡಿಗಳು ಮನೆಗೆ ಕಿಡಿ ಸೋಕಿಸಿ ಬೆಂಕಿ ಹಚ್ಚಿದ್ದಾರೆ.
ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲೂಕಿನ ಕೊಡಗುರ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೆಮ್ಮರೆಡ್ಡಿ ಎಂಬುವರಿಗೆ ಸೇರಿದ ಮನೆಗೆ ಡಿಜೆಲ್ ಸುರಿದ ದುರುಳರು ಬೆಂಕಿ ಹಚ್ಚಿದ್ದಾರೆ. ಬೆಂಕಿ ಮನೆಗೆ ಆವರಿಸಿದ್ದರಿಂದ ಅಲ್ಲಿದ್ದ ಪಾತ್ರೆ-ಸಾಮಾನುಗಳು ಸೇರಿ ಹಲವಾರು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಪೆಮ್ಮರೆಡ್ಡಿ ಅವರ ತಂದೆ ಕೆ.ವೆಂಕಟಪ್ಪ ಹಾಗೂ ಮುನಿವೆಂಕಟಪ್ಪ ಎಂಬುವವರಿಗೆ ಸೇರಿದ ಜಂಟಿ 4 ಎಕರೆ 34 ಗುಂಟೆ ಜಮೀನಲ್ಲಿ 2 ಎಕರೆ 17 ಗುಂಟೆಯನ್ನು ಮುನಿವೆಂಕಟಪ್ಪ ಬೇರೆಯವರಿಗೆ ಮಾರಾಟ ಮಾಡಿದ್ದರು. ಉಳಿದ 2 ಎಕರೆ 17 ಗುಂಟೆ ಜಮೀನನ್ನು ಪೆಮ್ಮರೆಡ್ಡಿ ಖರೀದಿಸಿದ್ದರು. ಆದರೆ ಈ ಜಮೀನು ಸಂಬಂಧ ವಿವಾದವಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ.
ಕಿಡಿ ಕಾರಿದ ಜಮೀನು ವಿವಾದ, ಮನೆ ಬೆಂಕಿಗಾಹುತಿ…
ವಿವರಗಳಿಗೆ https://t.co/YaFZZbZDD9 ನೋಡಿ.. pic.twitter.com/1Xlmt7hPjE— Vijayavani (@VVani4U) February 24, 2021
ಇನ್ನು ಪೆಮ್ಮರೆಡ್ಡಿ ಅವರ ಮನೆಗೆ ಮುನಿವೆಂಕಟಪ್ಪ ಕಡೆಯವರಾದ ರಘು, ಕಿರಣ್, ವಸಂತ್ ಎಂಬುವವರು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದ್ದು, ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಹೊಸ ಕಾರು ಖರೀದಿಸಲು ಸಚಿವ-ಸಂಸದರಿಗೆ ಲಕ್ಷಾಂತರ ಹಣ ಕೊಡುತ್ತೆ ಸರ್ಕಾರ