ಬೆಂಗಳೂರು: ರಾಜ್ಯಾದ್ಯಂತ ಚಳಿ ತೀವ್ರಗೊಂಡಿದ್ದು, ಸಾರ್ವಜನಿಕರು ಬಿಸಿಬಿಸಿ ಕಾಫಿ-ಟೀ, ತಿಂಡಿ ಸವಿಯೋಣ ಎಂದು ಹೋಟೆಲ್ಗೆ ಹೋಗಬೇಕೆಂದರೂ ಎಲ್ಲಿಗೆ ಹೋಗಬೇಕು ಎಂದು ಯೋಚಿಸಿ ಹೋಗಬೇಕಾಗಬಹುದು. ಏಕೆಂದರೆ ಹೋಟೆಲ್ಗಳಲ್ಲಿ ದರ ಹೆಚ್ಚಳವಾಗಲಿದ್ದು, ಈಗಾಗಲೇ ಕೆಲವೆಡೆ ದರ ಪರಿಷ್ಕರಣೆಯೂ ನಡೆದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೆಲವು ಹೋಟೆಲ್ಗಳವರು ದರ ಪರಿಷ್ಕರಿಸಲು ಚಿಂತನೆ ನಡೆಸಿದ್ದರೆ, ಇನ್ನು ಕೆಲವು ಹೋಟೆಲ್ಗಳಲ್ಲಿ ದರ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕೃತ ದರವನ್ನು ಶೀಘ್ರದಲ್ಲೇ ಜಾರಿಗೊಳಿಸುವ ಕುರಿತಂತೆ ಹೋಟೆಲ್ಗಳಲ್ಲಿ ಸೂಚನೆಗಳನ್ನೂ ಅಳವಡಿಸಲಾಗಿದೆ.
ಬೆಣ್ಣೆ, ತುಪ್ಪ, ಕಾಫಿ ಪುಡಿ ಇತ್ಯಾದಿಯ ಬೆಲೆ ಈಗಾಗಲೇ ಹೆಚ್ಚಳಗೊಂಡಿದ್ದು, ಸದ್ಯ ಹಾಲಿನ ದರವೂ ಏರುವ ಸೂಚನೆ ಇದೆ. ಇಂದು ಆ ಕುರಿತ ನಿರ್ಧಾರವೂ ಪ್ರಕಟವಾಗುವ ಸಾಧ್ಯತೆ ಇದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ದರ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಹೋಟೆಲೊಂದರಲ್ಲಿ ಈಗಾಗಲೇ ಕಾಫಿ ಮತ್ತು ದೋಸೆ ದರದಲ್ಲಿ ಏರಿಕೆ ಮಾಡಲಾಗಿದ್ದು, ಹೊಸ ದರ ನ. 24ರಂದು ಜಾರಿಗೆ ಬರುವ ಕುರಿತು ಸೂಚನೆಯನ್ನೂ ಪ್ರಕಟಿಸಲಾಗಿದೆ. ಉಳಿದಂತೆ ಇತರ ಹೋಟೆಲ್ಗಳಲ್ಲೂ ಕಾಫಿ-ಟೀ ಜತೆಗೆ ಆಯ್ದ ಕೆಲವು ತಿಂಡಿ-ತಿನಿಸುಗಳ ಬೆಲೆ ಹೆಚ್ಚಳ ಆಗುವ ಸಾಧ್ಯತೆಗಳಿವೆ.
ಶಾಸಕರಿಗೇ ಹೊಡೆದು ಬಟ್ಟೆ ಹರಿದು ಹಾಕಿದ ಜನರು; ಕತ್ತಲಲ್ಲಿ ಹರಿದ ಅಂಗಿಯಲ್ಲೇ ಪರಿಸ್ಥಿತಿ ವಿವರಿಸಿದ ಕುಮಾರಸ್ವಾಮಿ..
ಸಿದ್ದರಾಮಯ್ಯ ಅರ್ಜಿ, ಹೈಕಮಾಂಡ್ ಮರ್ಜಿ: ಮುಂದಿನ ಚುನಾವಣೆಯಲ್ಲಿ ಸಿದ್ದು ಸ್ಪರ್ಧೆ ಎಲ್ಲಿಂದ?