More

    ರೈಲಲ್ಲಿ ನೀಡಿದ್ದ ಆಮ್ಲೆಟ್​ನಲ್ಲಿ ಜಿರಳೆ; ತಿಂಡಿಗೆ ಆಮ್ಲೆಟ್​ ತಿಂದಿದ್ದ ಇನ್ನೊಬ್ಬ ಪ್ರಯಾಣಿಕನಿಗೂ ಪಶ್ಚಾತ್ತಾಪ!

    ಬೆಂಗಳೂರು: ರೈಲು-ವಿಮಾನಗಳಲ್ಲಿ ನೀಡುವ, ಬಸ್​ ನಿಲ್ದಾಣಗಳಲ್ಲಿ ಸಿಗುವ ಆಹಾರದ ಬಗ್ಗೆ ಆಗಾಗ ದೂರುಗಳು ಕೇಳಿ ಬರುವುದು ಹೊಸದೇನಲ್ಲ. ಅಂಥದ್ದೇ ಒಂದು ದೂರು ರೈಲ್ವೆ ಇಲಾಖೆ ವಿರುದ್ಧ ಕೇಳಿಬಂದಿದೆ. ಅದಕ್ಕೆ ಕಾರಣ ಆಮ್ಲೆಟ್​ನಲ್ಲಿ ಕಾಣಿಸಿದ್ದ ಜಿರಳೆ.

    ಹೌದು.. ರೈಲ್ವೆ ಪ್ರಯಾಣದ ವೇಳೆ ರೈಲ್ವೆಯವರೇ ನೀಡಿದ್ದ ಆಮ್ಲೆಟ್​ನಲ್ಲಿ ಜಿರಳೆ ಇದ್ದಿದ್ದ ಬಗ್ಗೆ ದೂರಿರುವ ಪ್ರಯಾಣಿಕರೊಬ್ಬರು ಅದರ ಫೋಟೋ ಕೂಡ ಹಂಚಿಕೊಂಡು ಪ್ರಶ್ನಿಸಿದ್ದಾರೆ. ಯೋಗೇಶ್ ಮೋರೆ ಎಂಬ ಪ್ರಯಾಣಿಕರೊಬ್ಬರು ನಿನ್ನೆ ರೈಲಿನಲ್ಲಿ ಪ್ರಯಾಣಿಸಿದ್ದಾಗ ಆದ ಈ ಘಟನೆಯನ್ನು ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ.

    ನಿನ್ನೆ ನಾವು ದೆಹಲಿಯಿಂದ 22222 ನಂಬರ್ ರೈಲಿನಲ್ಲಿ ಪ್ರಯಾಣಿಸಿದ್ದೆವು. ಬೆಳಗ್ಗೆ ಮಗುವಿಗೆಂದು ಒಂದು ಎಕ್ಸ್​ಟ್ರಾ ಆಮ್ಲೆಟ್ ಆರ್ಡರ್ ಮಾಡಿದ್ದಾಗ ಏನು ಕಾಣಿಸಿತ್ತು ಎಂಬುದರ ಫೋಟೋ ಇಲ್ಲಿ ಹಾಕಿದ್ದೇನೆ. ನನ್ನ ಮಗಳಿಗೆ 2.5 ವರ್ಷ, ಆಕೆಗೆ ಏನಾದರೂ ಆಗಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿರುವ ಅವರು, ಆಮ್ಲೆಟ್​ನಲ್ಲಿ ಜಿರಳೆ ಇರುವ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ. ಇದಕ್ಕೆ ರೈಲ್ವೆಯವರು ಪಿಎನ್​ಆರ್​ ನಂಬರ್ ಕೊಡಿ ಎಂದು ಕೇಳಿದ್ದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬರೀ ನಂಬರ್ ಕೇಳ್ತೀರಿ, ಏನೂ ಪ್ರಯೋಜನ ಎಲ್ಲ ಎಂದು ಕಮೆಂಟ್ ಮಾಡಿದ್ದಾರೆ.

    ಯೋಗೇಶ್ ಟ್ವೀಟ್​ ಗಮನಿಸಿರುವ ಇನ್ನೊಬ್ಬ ಪ್ರಯಾಣಿಕ ಆ ಟ್ವೀಟ್ ಕೋಟ್ ಮಾಡಿ ಹಂಚಿಕೊಂಡಿದ್ದು, ತಾನೂ ಅದೇ ರೈಲಿನಲ್ಲಿ ಪ್ರಯಾಣಿಸಿದ್ದಾಗಿ ಹೇಳಿಕೊಂಡಿದ್ದಾರೆ. ನಾನೂ ಬೆಳಗ್ಗೆ ಅದೇ ರೈಲಲ್ಲಿದ್ದೆ, ತಿಂಡಿಗೆ ಆಮ್ಲೆಟ್ ತಿಂದ ಬಗ್ಗೆ ನನಗೆ ಈಗ ಪಶ್ಚಾತ್ತಾಪ ಆಗುತ್ತಿದೆ. ಇನ್ನು ಮುಂದೆ ರೈಲ್ವೆಯವರಿಂದ ಆಹಾರ ತೆಗೆದುಕೊಳ್ಳುವುದಿಲ್ಲ ಎಂದಿರುವ ಆತ, ಅನನುಕೂಲತೆಗೆ ಪಶ್ಚಾತ್ತಾಪ ಎಂದಷ್ಟೇ ಹೇಳುತ್ತೀರಿ ವಿನಃ ಜರುಗಿಸಿದ ಕ್ರಮ ಏನು? ದಯವಿಟ್ಟು ತಿಳಿಸಿ ಎಂದು ಆತ ರೈಲ್ವೆಯವರನ್ನು ಪ್ರಶ್ನಿಸಿದ್ದಾರೆ.

    https://twitter.com/veneshofficial/status/1604092770976948225?s=20&t=XeHBMldxA8noyD7ljtnH-A

    ಭಿಕ್ಷೆ ಬೇಡುತ್ತಿದ್ದ ಹತ್ತು ವರ್ಷದ ಬಾಲಕ ಈಗ ಕೋಟ್ಯಧಿಪತಿ!; ಆಗಿದ್ದು ಹೇಗೆ?

    ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆಯಾಗಿ ನೀಡಿದ ಭಿಕ್ಷುಕಿ; 20 ವರ್ಷಗಳಿಂದ ಅದೇ ದೇವಳದ ಮುಂದೆ ಭಿಕ್ಷೆ ಬೇಡುತ್ತಿದ್ದ ವೃದ್ಧೆ

    15 ದಿನಗಳ ಹಿಂದೆ ಜನಿಸಿದ್ದ ಮಗುವಿನ ತಂದೆಯ ದುರಂತ ಸಾವು; ಈ ಹಿಂದೆ ಒಬ್ಬ ಸತ್ತಿದ್ದ ಬಾವಿಗೆ ಮತ್ತೊಬ್ಬ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts