ಕೊಚ್ಚಿ: ಆಲಪ್ಪುಳ ಜಿಲ್ಲಾಧಿಕಾರಿ ಕೃಷ್ಣ ತೇಜ ಕೇರಳದಲ್ಲಿ ಸಿಕ್ಕಾಪಟ್ಟೆ ಫೇಮಸ್. ಆತನ ಫೇಸ್ಬುಕ್ ಪೋಸ್ಟ್ ಸಾಮಾನ್ಯವಾಗಿ ಅನೇಕರ ಗಮನವನ್ನು ತನ್ನತ್ತ ಸೆಳೆಯುತ್ತದೆ. ನಿನ್ನೆ(ನ.23)ಯಷ್ಟೇ ಅವರು ಶೇರ್ ಮಾಡಿರುವ ವಿಡಿಯೋ ಮತ್ತು ಬರಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಮೂರನೇ ತರಗತಿ ವಿದ್ಯಾರ್ಥಿಯ ಮನಮುಟ್ಟುವ ದೃಶ್ಯವಿದೆ. ತನ್ನ ಉಳಿತಾಯದ ಹಣವನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಭೇಟಿಗೆ ಬಂದ ಬಾಲಕ ನಿಧಿನ್, ಅನಾಥ ಮಕ್ಕಳಿಗೆ ತನ್ನ ಹಣ ನೀಡುವಂತೆ ಕೇಳಿಕೊಂಡನು. ಬಾಲಕನ ಹೃದಯ ವೈಶಾಲತೆಗೆ ಕರಗಿ ಹೋದ ಜಿಲ್ಲಾಧಿಕಾರಿ ಕೃಷ್ಣ ತೇಜ, ಆತನನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ ಕ್ಷಣ ಮನಕಲಕುವಂತಿತ್ತು.
ತಮ್ಮ ಫೇಸ್ಬುಕ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕೃಷ್ಣ ತೇಜ, ನಿನ್ನೆ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಯ ವೇಳೆ ಬಾಲಕನೊಬ್ಬ ತನ್ನ ಎನ್ವಲಪ್ನೊಂದಿಗೆ ನನ್ನ ಬಳಿ ಬಂದ. ಅದೊಂದು ಮನವಿ ಪತ್ರ ಅಂದುಕೊಂಡು ನಾನು ಓಪನ್ ಮಾಡಿದೆ. ಆದರೆ, ಅದರಲ್ಲಿ ಒಂದಿಷ್ಟು ಹಣ ಇದ್ದಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಂತರ ಬಾಲಕನನ್ನು ಹಣದ ಬಗ್ಗೆ ಪ್ರಶ್ನೆ ಮಾಡಿದಾಗ, ಓಣಂ ಮತ್ತು ವಿಶು ಹಬ್ಬವನ್ನು ಆಚರಿಸದೇ ಸಂಗ್ರಹಿಸಿದ ಹಣ ಎಂದು ಹೇಳಿದನು.
ಆ ಬಾಲಕ ತನ್ನ ಉಳಿತಾಯದ ಹಣವನ್ನು ಅನಾಥ ಮಕ್ಕಳಿಗೆ ಬುಕ್ಸ್ ಸೇರಿದಂತೆ ಅಧ್ಯಯನ ಸಾಮಾಗ್ರಿಗಳನ್ನು ಕೊಳ್ಳಲು ಸರ್ಕಾರದ ಬಾಲನಿಧಿ ಯೋಜನೆಗೆ ದೇಣಿಗೆ ನೀಡಿದ. ಕೆಲವು ಅನುಭವಗಳು ಅವಿಸ್ಮರಣೀಯ. ಅದರಲ್ಲಿ ಇದೂ ಒಂದಾಗಿತ್ತು. ನಿಧಿನ್ ಮತ್ತು ಅವನ ಹೆತ್ತವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ. (ಏಜೆನ್ಸೀಸ್)
ಎಲ್ಲ ಮುಸ್ಲಿಮರನ್ನು ಕೊಂದು ಹಿಂದು ರಾಷ್ಟ್ರ ನಿರ್ಮಾಣ ಮಾಡಿ: ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿದ್ ಆಕ್ರೋಶ
ಸರ್ಕಾರಿ ವಲಯದಲ್ಲೂ ಇಲ್ಲ ಉದ್ಯೋಗ ಭದ್ರತೆ! ರೈಲ್ವೆ ಇಲಾಖೆಯಿಂದ ನೌಕರರಿಗೆ ಬಿಗ್ ಶಾಕ್
ಕೊನೆಗೂ ತುಳು ಭಾಷೆಯಲ್ಲಿ ಬಿಡುಗಡೆಯಾಗಲು ಸಜ್ಜಾದ ಕಾಂತಾರ; ಡಿಸೆಂಬರ್ನಲ್ಲಿ ತೆರೆಗೆ