More

    ‘ನಾ ನಿನ್ನ ಮದ್ವೆ ಆಗಲ್ಲ’ ಎಂದಿದ್ದೇ ದ್ವಿತೀಯ ಪಿಯು ವಿದ್ಯಾರ್ಥಿನಿ ಮಾಡಿದ ತಪ್ಪಾ?

    ರಾಂಚಿ: ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಳು ಎಂಬ ಕಾರಣಕ್ಕೆ 12 ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ದುಷ್ಕರ್ಮಿಯೋರ್ವ ಚಾಕುವಿನಿಂದ 8ಕ್ಕೂ ಹೆಚ್ಚು ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಖುಷ್ಬೂ ಕಾಕಾ ಎಂದು ಗುರುತಿಸಲಾಗಿದ್ದು, ಆರೋಪಿ ಅರ್ಜುನ್​ ಓರಾನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ರಾಂಚಿ ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನೌಶಾದ್​ ಆಲಂ ಸುರೇಶ್​ ಕಾಕಾ ಹಾಗೂ ದಿನಿಯಾ ದಂಪತಿಯ ಪುತ್ರಿ ಖುಷ್ಬೂ ಹಾಗು ಆರೋಪಿ ಅರ್ಜುನ್​ ಇಬ್ಬರು ಪರಿಚಯಸ್ಥರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

    'ನಾ ನಿನ್ನ ಮದ್ವೆ ಆಗಲ್ಲ' ಎಂದಿದ್ದೇ ದ್ವಿತೀಯ ಪಿಯು ವಿದ್ಯಾರ್ಥಿನಿ ಮಾಡಿದ ತಪ್ಪಾ?

    ಇದನ್ನೂ ಓದಿ: ಹಿಂದೆ ಮಹಿಳೆ ಕೂತಿದ್ದಾಗಲೇ ಹಸ್ತ ಮೈಥುನ ಮಾಡಿಕೊಂಡ ರ್‍ಯಾಪಿಡೋ ಬೈಕ್​ ಚಾಲಕ! ಮುಂದೇನಾಯ್ತು?

    ಆರೋಪಿಯು ಸಂತ್ರಸ್ತೆಗೆ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ಸಂಬಂಧ ಆಕೆ ಹಲವು ಬಾರಿ ಆತನ ಮನವಿಯನ್ನು ತಿರಸ್ಕರಿಸಿದ್ದು ಇಬ್ಬರು ಸ್ನೇಹಿತರಾಗಿ ಇರೋಣ ಎಂದಿದ್ದಳು. ಈ ಸಂಬಂಧ ಕುಪಿತಗೊಂಡಿದ್ದ ಆರೋಪಿಯೂ ಶುಕ್ರವಾರ ಖುಷ್ಬೂ ಒಬ್ಬಳೇ ಇರುವ ವಿಚಾರ ತಿಳಿದು ಅವರ ಮನೆಗೆ ನುಗ್ಗಿದ್ದಾನೆ.

    ಬಳಿಕ ತನ್ನನ್ನು ಮದುವೆಯಾಗುವಂತೆ ಆಕೆಯ ಜೊತೆ ಗಲಾಟೆ ತೆಗೆದಿದ್ದಾನೆ. ಈ ಸಂಬಂಧ ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆರೋಪಿಯೂ ಸಂತ್ರಸ್ತೆಗೆ ಚಾಕುವಿನಿಂದ 8ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಕೂಡಲೇ ಖುಷ್ಬೂ ಜೋರಾಗಿ ಕೂಗಿದ ಪರಿಣಾಮ ನೆರೆಹೊರೆಯವರು ಆಕೆಯ ರಕ್ಷಣೆಗೆ ಧಾವಿಸಿದ್ದಾರೆ.

    ಗಾಯಾಳುವನ್ನು ತಕ್ಷಣವೇ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS) ದಾಖಲಿಸಿದ್ದರು ಸಹ ಚಿಕಿತ್ಸೆ ಫಲಕಾರಿಯಾಗದೆ ಸಂತ್ರಸ್ತೆ ಮೃತಪಟ್ಟಿದ್ದಾಳೆ ಎಂದು ರಾಂಚಿ ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನೌಶಾದ್​ ಆಲಂ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts