More

    ಸಿದ್ದರಾಮಯ್ಯಗೆ ಶೂ ತೆಗದು, ತೊಡಿಸಿದ ಕಾಂಗ್ರೆಸ್​ ಕಾರ್ಯಕರ್ತ: ವಿಡಿಯೋ ವೈರಲ್​

    ಚಿಕ್ಕಬಳ್ಳಾಪುರ: ಕಾಂಗ್ರೆಸ್​ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯಗೆ ಶೂ ತೆಗದು, ತೊಡಿಸಿದ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಹಾರೋಬಂಡೆ ಸಾಯಿಬಾಬಾ ಮಂದಿರ ಬಳಿ ನಡೆದಿದೆ.

    ಘಟನೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಾರಿನಿಂದ ಕೆಳಗೆ ಇಳಿಯುವಾಗ ಶೂ ತೆಗೆದ ಕಾಂಗ್ರೆಸ್ ಕಾರ್ಯಕರ್ತ, ಮತ್ತೆ ಸಿದ್ದರಾಮಯ್ಯ ಅವರು ವಾಪಾಸ್ ಹೋಗುವಾಗಲೂ ಶೂ ತೊಡಿಸಿದರು.

    ಸಿದ್ದರಾಮಯ್ಯ ಅವರು ಬಾಗೇಪಲ್ಲಿಗೆ ತೆರಳುವಾಗ ಮಾರ್ಗಮಧ್ಯೆ ಕಾಂಗ್ರೆಸ್ ಮುಖಂಡ ಜಿ.ಎಚ್.ನಾಗರಾಜ್ ಟ್ರಸ್ಟ್​ನ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದರು. ಈ ವೇಳೆ ಶೂ ತೆಗೆಯಲು ಮತ್ತು ಹಾಕಿಕೊಳ್ಳಲು ಕಷ್ಟಪಡುತ್ತಿದ್ದನ್ನು ನೋಡಿ ಕಾರ್ಯಕರ್ತ ನಾರಾಯಣಸ್ವಾಮಿ ಎಂಬಾತ ಶೂ ಧರಿಸಿದ್ದಾರೆ.

    ಇದೀಗ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ಕುರಿತು ಪರ-ವಿರೋಧ ಚರ್ಚೆಯಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    ಒಮ್ಮೆ ನಿದ್ರೆಗೆ ಜಾರಿದ್ರೆ ಮತ್ತೆ ಏಳಲು ಬೇಕು 25 ದಿನ! ಆಧುನಿಕ ಕುಂಭಕರ್ಣನ ದಿನಚರಿ ಕೇಳಿದ್ರೆ ಬೆರಗಾಗ್ತೀರಿ

    ಕನ್ವರ್ ಯಾತ್ರೆ : ಕೇಂದ್ರ ಮತ್ತು ಯುಪಿ ಸರ್ಕಾರಕ್ಕೆ ಸುಪ್ರೀಂ ನೋಟೀಸು

    ತುಂಬಿ ಹರಿಯುವ ನದಿಯಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಬಸ್ ಚಲಾಯಿಸಿದ ಚಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts