ತಮಿಳಿನ ಜನಪ್ರಿಯ ನಿರ್ದೇಶಕರಲ್ಲೊಬ್ಬರು ಹಿರಿಯ ನಿರ್ದೇಶಕ ಭಾರತಿರಾಜ. ರಜನಿಕಾಂತ್, ಕಮಲ್ ಹಾಸನ್ಮತ್ತು ಶ್ರೀದೇವಿ ನಿರ್ದೇಶನದ ’16 ವಯದಿನಲೇ’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಭಾರತಿರಾಜ, ಹಿಂದಿಯಲ್ಲೂ ಕೆಲವು ಚಿತ್ರಗಳನ್ನು ನಿರ್ದೇಶಿಸಿದವರು.
ಇದನ್ನೂ ಓದಿ: ವಿಜಯ್ ನಂಬರ್ 1, ಲಾರೆನ್ಸ್ ನಂಬರ್ 2 … ಯಾವುದರಲ್ಲಿ ಗೊತ್ತಾ?
ಈ ಹಿರಿಯ ನಿರ್ದೇಶಕರಿಗೆ ಇದೀಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೊಡಿ ಎಂದು ದಕ್ಷಿಣ ಭಾರತದ ಜನಪ್ರಿಯ ನಟರು ಮತ್ತು ತಂತ್ರಜ್ಱರು ಇದೀಗ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಆಗ್ರಹಿಸಿದ್ದಾರೆ.
ಅಂದಹಾಗೆ, ಇದರ ಮುಂಚೂಣಿಯಲ್ಲಿರುವವರು ಯಾರು ಗೊತ್ತಾ? ಭಾರತೀರಾಜ ಅವರ ಹಲವು ಚಿತ್ರಗಳಲ್ಲಿ ನಟಿಸಿರುವ ಕಮಲ್ ಹಾಸನ್. ಕಮಲ್ ಅಲ್ಲದೇ ನಟ ಧನುಶ್, ಪಾರ್ಥಿಬನ್, ನಿರ್ದೇಶಕರಾದ ವೆಟ್ರಿಮಾರನ್, ಬಾಲ, ಪ್ರಿಯದರ್ಶನ್ ಸೇರಿದಂತೆ ಹಲವರು ಸಚಿವರಿಗೆ ಪತ್ರ ಬರೆದು, ಭಾರತೀರಾಜ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಪ್ರಶಸ್ತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ಭಾರತೀಯ ಚಿತ್ರರಂಗಕ್ಕೆ ಭಾರತರಾಜ ಅವರ ಕೊಡುಗೆ ಅಪಾರ. ನಿರುದ್ಯೋಗ, ಅಸ್ಪೃಶ್ಯತೆ, ಮಹಿಳಾ ಸಬಲೀಕರಣ, ಮಾನವೀಯ ಸಂಬಂಧಗಳು … ಹೀಗೆ ಭಾರತಿರಾಜ ಮುಟ್ಟದ ವಿಷಯಗಳೇ ಇಲ್ಲ. ಗಂಭೀರವಾದ ವಿಷಯಗಳನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ಹೇಳುವ ಪ್ರಯತ್ನವನ್ನು ಭಾರತಿರಾಜ ಮಾಡುತ್ತಲೇ ಬಂದಿದ್ದಾರೆ. ಈ ಬಾರಿ ಅವರಿಗೆ ಪ್ರಶಸ್ತಿ ಕೊಟ್ಟು ಗೌರವಿಸಬೇಕು ಎಂದು ಈ ಪತ್ರದಲ್ಲಿ ಬರೆದಯಲಾಗಿದೆ.
ಇದನ್ನೂ ಓದಿ: ‘ಪಾನಿ’ ನಿಲ್ಲೋಕೆ ಕಾರಣ ಯಾರು ಗೊತ್ತಾ? ಆದಿತ್ಯ ಚೋಪ್ರಾ ಹೇಳ್ತಾರೆ ಕೇಳಿ …
ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರತೀ ವರ್ಷ ಭಾರತೀಯ ಚಿತ್ರರಂಗದ ದಿಗ್ಗಜರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪಟ್ಟಿಯಲ್ಲಿ ದಕ್ಷಿಣ ಭಾರತೀಯರಿಗಿಂತ ಉತ್ತರ ಭಾರತದವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬ ದೂರು ಪ್ರತೀ ವರ್ಷ ಕೇಳಿ ಬರುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಅಮಿತಾಭ್ ಬಚ್ಚನ್ ಮತ್ತು ವಿನೋದ್ ಖನ್ನಾ ಅವರಿಗೆ ಈ ಪ್ರಶಸ್ತಿ ಸಿಕ್ಕಿದ್ದು, ಅದಕ್ಕೂ ಮುನ್ನ 2016ರಲ್ಲಿ ತೆಲುಗಿ ಹಿರಿಯ ನಿರ್ದೇಶಕ ಕೆ. ವಿಶ್ವನಾಥ್ ಅವರಿಗೆ ಸಿಕ್ಕಿತ್ತು ಎಂಬುದು ಗಮನಾರ್ಹ.
ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೆ ಕರೊನಾ ಸೋಂಕು