More

    ‘ಪಾನಿ’ ನಿಲ್ಲೋಕೆ ಕಾರಣ ಯಾರು ಗೊತ್ತಾ? ಆದಿತ್ಯ ಚೋಪ್ರಾ ಹೇಳ್ತಾರೆ ಕೇಳಿ …

    ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸ್​, ಆದಿತ್ಯ ಚೋಪ್ರಾ ಅವರನ್ನು ವಿಚಾರಣೆ ಮಾಡಿದ ವಿಷಯ ಗೊತ್ತೇ ಇದೆ. ಶನಿವಾರ ಬೆಳಿಗ್ಗೆ ಮುಂಬೈನ ವರ್ಸೋವಾ ಪೊಲೀಸ್​ ಸ್ಟೇಶನ್​ಗೆ ಹಾಜರಾದ ಆದಿತ್ಯ ಚೋಪ್ರಾ, ತಮ್ಮ ಹೇಳಿಕೆಯನ್ನು ನೀಡಿದ್ದಾರೆ.

    ಇದನ್ನೂ ಓದಿ: ಸುಶಾಂತ್​ಗೆ ಬಕೆಟ್​ ಹಿಡಿಯುವುದು ಗೊತ್ತಿರಲಿಲ್ಲ … ಅದಕ್ಕೆ ಹೀಗಾಯ್ತು ಅಂತಾರೆ ಕಂಗನಾ

    ಯಶ್​​ರಾಜ್​ ಫಿಲಂಸ್ ಬ್ಯಾನರ್​ನಡಿ ಆದಿತ್ಯ ಚೋಪ್ರಾ, ಸುಶಾಂತ್​ಗೆ ‘ಡಿಟೆಕ್ಟಿವ್​ ಬ್ಯೋಮಕೇಶ ಭಕ್ಷಿ’ ಮತ್ತು ‘ಶುದ್ಧ್​ ದೇಶಿ ರೊಮ್ಯಾನ್ಸ್​’ ಚಿತ್ರಗಳಲ್ಲಿ ಅವಕಾಶ ಕೊಟ್ಟಿದ್ದರು. ಆದಿತ್ಯ ಚೋಪ್ರಾ ಮತ್ತು ಸುಶಾಂತ್​ ನಡುವೆ ಮೂರು ಚಿತ್ರಗಳ ಒಪ್ಪಂದವಾಗಿದ್ದು, ಈ ಪೈಕಿ ಎರಡು ಚಿತ್ರಗಳ ನಿರ್ಮಾಣವಾಗಿತ್ತು. ಈ ಮಧ್ಯೆ. ಶೇಖರ್​ ಕಪೂರ್​ ನಿರ್ದೇಶನದ ‘ಪಾನಿ’ ಚಿತ್ರದಲ್ಲಿ ಅವರು ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸೆಟ್ಟೇರಲಿಲ್ಲ. ಅಲ್ಲಿಂದಲೇ ಸುಶಾಂತ್​ ಡಿಪ್ರೆಶನ್​ಗೆ ಜಾರಿದರು ಮತ್ತು ಅಲ್ಲಿಂದಲೇ ಎಲ್ಲಾ ಸಮಸ್ಯೆಗಳು ಶುರುವಾಯಿತು ಎನ್ನುವ ನಂಬಿಕೆ ಇದೆ.

    ಈ ಬಗ್ಗೆ ಹೇಳಿಕೆ ನೀಡಿರುವ ಆದಿತ್ಯ ಚೋಪ್ರಾ, ‘ಪಾನಿ’ ನಿಲ್ಲುವುದಕ್ಕೆ ಕಾರಣ ಸುಶಾಂತ್​ ಅಲ್ಲ, ನಿರ್ದೇಶಕ ಶೇಖರ್​ ಕಪೂರ್​ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಶೇಖರ್​ ಕಪೂರ್​ ಮತ್ತು ತಮ್ಮ ನಡುವೆ ಸಾಕಷ್ಟು ಕ್ರಿಯೇಟಿವ್​ ಆದಂತಹ ಭಿನ್ನಾಭಿಪ್ರಾಯಗಳು ಇದ್ದ ಕಾರಣ ಚಿತ್ರ ಮುಂದುವರೆಯಲಿಲ್ಲ ಮತ್ತು ಇದಕ್ಕೂ ಸುಶಾಂತ್​ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ.

    ಇದು ಆದಿತ್ಯ ಚೋಪ್ರಾ ಅವರ ವರ್ಶನ್​ ಆದರೆ, ಮೂಲಗಳ ಪ್ರಕಾರ ‘ಪಾನಿ’ ಚಿತ್ರ ನಿಲ್ಲುವುದಕ್ಕೆ ಕಾರಣ ಆದಿತ್ಯ ಅಲ್ಲ, ಸಲ್ಮಾನ್​ ಖಾನ್​ ಎಂಬ ಜನಪ್ರಿಯ ನಂಬಿಕೆಯೊಂದು ಬಾಳಿವುಡ್​ನಲ್ಲಿ ಇದೆ. ಸುಶಾಂತ್​ ಬಗ್ಗೆ ಯಾವುದೋ ಕಾರಣಕ್ಕೆ ಸಿಟ್ಟಾಗಿದ್ದ ಸಲ್ಮಾನ್​ ಖಾನ್​ ತಮ್ಮ ಬಲ ಉಪಯೋಗಿಸಿ, ‘ಪಾನಿ’ ಚಿತ್ರವು ಶುರುವಾಗದಂತೆ ತಡೆದರು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಆಲಿಯಾ ನಾಚಿಕೆ ಇಲ್ದೆ ಪ್ರಶಸ್ತಿ ತಗೊಂಡ್ರು … ಕಂಗನಾ ಹೊಸ ಆರೋಪ

    ‘ಪಾನಿ’ ಚಿತ್ರವನ್ನು ನಿಲ್ಲಸಬೇಕು ಎಂದು ಸಲ್ಮಾನ್​ ಬೆದರಿಕೆ ಹಾಕಿದಾಗ, ಆದಿತ್ಯ ಚೋಪ್ರಾ ಮೊದಲು ಒಪ್ಪಲಿಲ್ಲವಂತೆ. ಯಾವಾಗ ಅವರು ಬಗ್ಗಲಿಲ್ಲವೋ, ಆಗ ಸಲ್ಮಾನ್​ ನೇರವಾಗಿ ‘ಸುಲ್ತಾನ್​’ ಮತ್ತು ‘ಟೈಗರ್​ ಜಿಂದಾ ಹೇ’ ಚಿತ್ರಗಳಲ್ಲಿ ನಟಿಸುವುದಕ್ಕೆ ನಿರಾಕರಿಸಿದರಂತೆ. ಅದಾಗಲೇ, ಆ ಎರಡೂ ಚಿತ್ರಗಳ ಮೇಲೆ ಸಾಕಷ್ಟು ಹಣ ಹೂಡಿದ್ದ ಆದಿತ್ಯ, ಬೇರೆ ದಾರಿ ಇಲ್ಲದೆ ‘ಪಾನಿ’ ಚಿತ್ರವನ್ನು ನಿಲ್ಲಿಸಿದ್ದಾರೆ ಎಂದು ಬಾಲಿವುಡ್​ನಲ್ಲಿ ಹೇಳಲಾಗುತ್ತದೆ.

    ಕನ್ಯತ್ವ ಕಳೆದುಕೊಳ್ಳುವುದು ಯುವತಿಯ ಆಯ್ಕೆಯೇ ಹೊರತು ಒತ್ತಡ ಅಲ್ಲ!; ಊರ್ವಶಿ ರೌಟೇಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts