ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸ್, ಆದಿತ್ಯ ಚೋಪ್ರಾ ಅವರನ್ನು ವಿಚಾರಣೆ ಮಾಡಿದ ವಿಷಯ ಗೊತ್ತೇ ಇದೆ. ಶನಿವಾರ ಬೆಳಿಗ್ಗೆ ಮುಂಬೈನ ವರ್ಸೋವಾ ಪೊಲೀಸ್ ಸ್ಟೇಶನ್ಗೆ ಹಾಜರಾದ ಆದಿತ್ಯ ಚೋಪ್ರಾ, ತಮ್ಮ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಸುಶಾಂತ್ಗೆ ಬಕೆಟ್ ಹಿಡಿಯುವುದು ಗೊತ್ತಿರಲಿಲ್ಲ … ಅದಕ್ಕೆ ಹೀಗಾಯ್ತು ಅಂತಾರೆ ಕಂಗನಾ
ಯಶ್ರಾಜ್ ಫಿಲಂಸ್ ಬ್ಯಾನರ್ನಡಿ ಆದಿತ್ಯ ಚೋಪ್ರಾ, ಸುಶಾಂತ್ಗೆ ‘ಡಿಟೆಕ್ಟಿವ್ ಬ್ಯೋಮಕೇಶ ಭಕ್ಷಿ’ ಮತ್ತು ‘ಶುದ್ಧ್ ದೇಶಿ ರೊಮ್ಯಾನ್ಸ್’ ಚಿತ್ರಗಳಲ್ಲಿ ಅವಕಾಶ ಕೊಟ್ಟಿದ್ದರು. ಆದಿತ್ಯ ಚೋಪ್ರಾ ಮತ್ತು ಸುಶಾಂತ್ ನಡುವೆ ಮೂರು ಚಿತ್ರಗಳ ಒಪ್ಪಂದವಾಗಿದ್ದು, ಈ ಪೈಕಿ ಎರಡು ಚಿತ್ರಗಳ ನಿರ್ಮಾಣವಾಗಿತ್ತು. ಈ ಮಧ್ಯೆ. ಶೇಖರ್ ಕಪೂರ್ ನಿರ್ದೇಶನದ ‘ಪಾನಿ’ ಚಿತ್ರದಲ್ಲಿ ಅವರು ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸೆಟ್ಟೇರಲಿಲ್ಲ. ಅಲ್ಲಿಂದಲೇ ಸುಶಾಂತ್ ಡಿಪ್ರೆಶನ್ಗೆ ಜಾರಿದರು ಮತ್ತು ಅಲ್ಲಿಂದಲೇ ಎಲ್ಲಾ ಸಮಸ್ಯೆಗಳು ಶುರುವಾಯಿತು ಎನ್ನುವ ನಂಬಿಕೆ ಇದೆ.
ಈ ಬಗ್ಗೆ ಹೇಳಿಕೆ ನೀಡಿರುವ ಆದಿತ್ಯ ಚೋಪ್ರಾ, ‘ಪಾನಿ’ ನಿಲ್ಲುವುದಕ್ಕೆ ಕಾರಣ ಸುಶಾಂತ್ ಅಲ್ಲ, ನಿರ್ದೇಶಕ ಶೇಖರ್ ಕಪೂರ್ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಶೇಖರ್ ಕಪೂರ್ ಮತ್ತು ತಮ್ಮ ನಡುವೆ ಸಾಕಷ್ಟು ಕ್ರಿಯೇಟಿವ್ ಆದಂತಹ ಭಿನ್ನಾಭಿಪ್ರಾಯಗಳು ಇದ್ದ ಕಾರಣ ಚಿತ್ರ ಮುಂದುವರೆಯಲಿಲ್ಲ ಮತ್ತು ಇದಕ್ಕೂ ಸುಶಾಂತ್ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ.
ಇದು ಆದಿತ್ಯ ಚೋಪ್ರಾ ಅವರ ವರ್ಶನ್ ಆದರೆ, ಮೂಲಗಳ ಪ್ರಕಾರ ‘ಪಾನಿ’ ಚಿತ್ರ ನಿಲ್ಲುವುದಕ್ಕೆ ಕಾರಣ ಆದಿತ್ಯ ಅಲ್ಲ, ಸಲ್ಮಾನ್ ಖಾನ್ ಎಂಬ ಜನಪ್ರಿಯ ನಂಬಿಕೆಯೊಂದು ಬಾಳಿವುಡ್ನಲ್ಲಿ ಇದೆ. ಸುಶಾಂತ್ ಬಗ್ಗೆ ಯಾವುದೋ ಕಾರಣಕ್ಕೆ ಸಿಟ್ಟಾಗಿದ್ದ ಸಲ್ಮಾನ್ ಖಾನ್ ತಮ್ಮ ಬಲ ಉಪಯೋಗಿಸಿ, ‘ಪಾನಿ’ ಚಿತ್ರವು ಶುರುವಾಗದಂತೆ ತಡೆದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಆಲಿಯಾ ನಾಚಿಕೆ ಇಲ್ದೆ ಪ್ರಶಸ್ತಿ ತಗೊಂಡ್ರು … ಕಂಗನಾ ಹೊಸ ಆರೋಪ
‘ಪಾನಿ’ ಚಿತ್ರವನ್ನು ನಿಲ್ಲಸಬೇಕು ಎಂದು ಸಲ್ಮಾನ್ ಬೆದರಿಕೆ ಹಾಕಿದಾಗ, ಆದಿತ್ಯ ಚೋಪ್ರಾ ಮೊದಲು ಒಪ್ಪಲಿಲ್ಲವಂತೆ. ಯಾವಾಗ ಅವರು ಬಗ್ಗಲಿಲ್ಲವೋ, ಆಗ ಸಲ್ಮಾನ್ ನೇರವಾಗಿ ‘ಸುಲ್ತಾನ್’ ಮತ್ತು ‘ಟೈಗರ್ ಜಿಂದಾ ಹೇ’ ಚಿತ್ರಗಳಲ್ಲಿ ನಟಿಸುವುದಕ್ಕೆ ನಿರಾಕರಿಸಿದರಂತೆ. ಅದಾಗಲೇ, ಆ ಎರಡೂ ಚಿತ್ರಗಳ ಮೇಲೆ ಸಾಕಷ್ಟು ಹಣ ಹೂಡಿದ್ದ ಆದಿತ್ಯ, ಬೇರೆ ದಾರಿ ಇಲ್ಲದೆ ‘ಪಾನಿ’ ಚಿತ್ರವನ್ನು ನಿಲ್ಲಿಸಿದ್ದಾರೆ ಎಂದು ಬಾಲಿವುಡ್ನಲ್ಲಿ ಹೇಳಲಾಗುತ್ತದೆ.
ಕನ್ಯತ್ವ ಕಳೆದುಕೊಳ್ಳುವುದು ಯುವತಿಯ ಆಯ್ಕೆಯೇ ಹೊರತು ಒತ್ತಡ ಅಲ್ಲ!; ಊರ್ವಶಿ ರೌಟೇಲಾ