ಸಾಗರ: ರಾಜ್ಯದಲ್ಲಿ ಗೋವು ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿವೆ. ಅದರಲ್ಲೂ ಇಲ್ಲೊಂದು ಕಡೆ ದೇವಸ್ಥಾನದ ಆವರಣದಲ್ಲಿದ್ದ ಗೋವೊಂದನ್ನು ಹಗ್ಗ ಕಟ್ಟಿ ಎಳೆದು ತುಂಬಿಕೊಂಡು ಹೋಗಲಾಗಿದೆ.
ಶನಿವಾರ ರಾತ್ರಿ ಶಿವಮೊಗ್ಗ ಜಿಲ್ಲೆಯ ಸಾಗರದ ಇತಿಹಾಸ ಪ್ರಸಿದ್ದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಮಲಗಿದ್ದ ಗೋವನ್ನು ಕಳ್ಳತನ ಮಾಡಲಾಗಿದೆ. ಕಳ್ಳರು ಈ ಗೋವಿನ ಕುತ್ತಿಗೆಗೆ ಹಗ್ಗ ಬಿಗಿದು ಎಳೆದು ವಾಹನದಲ್ಲಿ ತುಂಬಿಕೊಂಡು ಹೋಗುವ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಕುಡಿದು ಕಾರು ಚಲಾಯಿಸಿದ್ದ, ತಡೆದಿದ್ದಕ್ಕೆ ‘ನಾನ್ಯಾರು ಗೊತ್ತಾ?’ ಎಂದು ಪೊಲೀಸ್ಗೇ ಕಾರು ಗುದ್ದಿಸಿ ಕೊನೆಗೂ ಸಿಕ್ಕಿಬಿದ್ದ..
ಸಾಗರದಲ್ಲಿ ಗೋಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ರಾಜಾರೋಷವಾಗಿ ಗೋಕಳವು ನಡೆಯುತ್ತಿದೆ ಎಂದು ಸಾಗರ ತಾಲೂಕಿನ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ. ಮಾತ್ರವಲ್ಲ ಗೋವುಕಳ್ಳರನ್ನು ಬಂಧಿಸಬೇಕು ಎಂದು ಆಗ್ರಹಿಸಲು ಸೋಮವಾರ ಬೆಳಗ್ಗೆ 11 ಗಂಟೆಗೆ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿದ್ದ ಗೋವನ್ನು ಕದ್ದೊಯ್ದ ಕಳ್ಳರು..
ವಿವರಗಳಿಗೆ https://t.co/YaFZZchf1J ನೋಡಿ pic.twitter.com/rICCaNRaVG— Vijayavani (@VVani4U) October 24, 2021
ಉರಿಸಿದವರೂ ಅವರೇ, ಸಹಾಯ ಮಾಡಲು ಬಂದವರೂ ಅವರ ಕಡೆಯವರೇ; ಈ ಮೇಷ್ಟ್ರ ಪರಿಸ್ಥಿತಿ ಕಡೆಗಾಗಿದ್ದೇ ಬೇರೆ..!
ಹೆಂಡತಿಗೆ ಹೈ-ಡೋಸ್ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ ವೈದ್ಯ!; ಮದ್ಯಪಾನ, ಜೂಜು, ವಾಮಾಚಾರಗಳಲ್ಲೂ ತೊಡಗಿದ್ದ ಡಾಕ್ಟರ್