ಬೆಂಗಳೂರು: ನಿನ್ನೆಯಷ್ಟೇ ಬಾಲಕನೊಬ್ಬ ಕರೆಂಟ್ ಶಾಕ್ಗೆ ಬಲಿಯಾಗಿದ್ದು, ಅದರ ಬೆನ್ನಿಗೆ ಇನ್ನೊಬ್ಬ ಬಾಲಕನೂ ಕರೆಂಟ್ ಶಾಕ್ನಿಂದಾಗಿ ಸಾವಿಗೀಡಾಗಿದ್ದು, ಇಂದು ಶವ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದರಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.
ಇಲ್ಲಿನ ಗ್ರಾನೈಟ್ ಕಟಿಂಗ್ ಫ್ಯಾಕ್ಟರಿಯವರು ಅವೈಜ್ಞಾನಿಕವಾಗಿ ಎಳೆದುಕೊಂಡಿದ್ದ ವಿದ್ಯುತ್ ತಂತಿಯೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ. ನಿನ್ನೆ ಆಟ ಆಡಲು ಎಂದು ಹೋಗಿದ್ದ ಏಳು ವರ್ಷದ ಬಾಲಕ ಗ್ರಾನೈಟ್ ಕಟಿಂಗ್ ಮಿಷನ್ಗೆ ಬಳಸಿದ್ದ ಹೈ ಪವರ್ ತಂತಿಯ ಸ್ಪರ್ಶಕ್ಕೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಪ್ರಕರಣ ಇಂದು ಬೆಳಗ್ಗೆ ಗಮನಕ್ಕೆ ಬಂದಿದೆ.
ಇದನ್ನೂ ಓದಿ: ಕೈ ಬಿಟ್ಟ ಕ್ಯಾಪ್ಟನ್; ಎಲ್ಲದಕ್ಕೂ ಸೋನಿಯಾ ಮತ್ತವರ ಇಬ್ಬರು ಮಕ್ಕಳ ವರ್ತನೆಯೇ ಕಾರಣ ಎಂದ ಮಾಜಿ ಸಿಎಂ
ಸಾವಿಗೀಡಾಗಿರುವುದು ಸ್ಥಳೀಯವಾಗಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕ ದಂಪತಿಯ ಪುತ್ರ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಆಟ ಆಡ್ತ ಆಡ್ತ ಕರೆಂಟ್ ಶಾಕ್ ಹೊಡೆದು ಸಾವಿಗೀಡಾದ ಬಾಲಕ; ಟ್ರಾನ್ಸ್ಫಾರ್ಮರ್ ಕೆಳಗೆ ಬಿದ್ದಿತ್ತು ಪವರ್ಫುಲ್ ತಂತಿ..
ಡಾಕ್ಟರ್ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್