ಹಾವೇರಿ: ರಜೆ ಎಂದು ಸ್ನೇಹಿತರೊಂದಿಗೆ ಆಡುತ್ತಿದ್ದ ಬಾಲಕನೊಬ್ಬ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ತಾಲ್ಲೂಕಿನ ಯಲಗಚ್ಚ ಗ್ರಾಮದಲ್ಲಿ ನಡೆದಿದೆ. 14 ವರ್ಷದ ಚೇತನ ಕಂಬಳಿ ಮೃತ ಬಾಲಕ.
ಮೂಲತಃ ನೆಗಳೂರು ಗ್ರಾಮದ ನಿವಾಸಿಯಾದ ಚೇತನ್, ವಿದ್ಯಾಭ್ಯಾಸ ಮಾಡಲು ಅಜ್ಜ-ಅಜ್ಜಿಯ ಊರಾದ ಯಲಗಚ್ಚದಲ್ಲಿ ವಾಸವಾಗಿದ್ದ. ಶಾಲೆ ರಜೆ ಇದ್ದ ಕಾರಣ ಸರ್ಕಾರಿ ಶಾಲೆಯ ಮೇಲ್ಛಾವಣಿ ಮೇಲೆ ಗೆಳಯರೊಂದಿಗೆ ಆಟವಾಡುತ್ತಿದ್ದ. ಆ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಎಂದು ಗುತ್ತಲ ಪೊಲೀಸರು ತಿಳಿಸಿದ್ದಾರೆ.
“ರೈತರ ಏಳಿಗೆಗೆ ಹಿನ್ನಡೆ… ಕೃಷಿ ಸುಧಾರಣೆಗಳ ಬಾಗಿಲು ಮುಚ್ಚಿದ ಹಾಗಾಗಿದೆ”