ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಕುರಿತಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೆಲವರು ಇದೆಲ್ಲದರಿಂದ ಬೇಸತ್ತು, ಸೋಷಿಯಲ್ ಮೀಡಿಯಾಗೆ ಗುಡ್ಬೈ ಹೇಳಿದರೆ, ಇನ್ನೂ ಕೆಲವರು ಇದ್ದೂ ಇಲ್ಲದಂತಾಗಿ ಬಿಟ್ಟಿದ್ದಾರೆ.
ಉದಾಹರಣೆಗೆ, ಕರಣ್ ಜೋಹಾರ್ ಹಲವರನ್ನು ತಮ್ಮ ಟ್ವಿಟರ್ ಅಕೌಂಟ್ನಿಂದ ಅನ್ಫಾಲೋ ಮಾಡಿದ್ದಾರೆ. ತಾವೇ ಬೆಳೆಸಿದ ಆಲಿಯಾ ಭಟ್ ಸೇರಿದಂತೆ ಹಲವರನ್ನು ದೂರ ಇಟ್ಟಿದ್ದಾರೆ. ಇನ್ನು ಅವರು ಎಷ್ಟೋ ಜನರನ್ನು ಫಾಲೋ ಮಾಡುತ್ತಿದ್ದರು. ಆ ಸಂಖ್ಯೆಯನ್ನು ಕೇವಲ ಎಂಟಕ್ಕೆ ಸೀಮಿತವಾಗಿಸಿದ್ದಾರೆ.
ಇದನ್ನೂ ಓದಿ: ಅಪಪ್ರಚಾರ ಮಾಡಿದ್ದಕ್ಕೆ ಹೆಂಡತಿಗೆ ನವಾಜುದ್ದೀನ್ ಏನ್ಮಾಡಿದ್ರು ಗೊತ್ತಾ?
ಇದು ಬರೀ ಕರಣ್ ಜೋಹಾರ್ ಕಥೆಯಷ್ಟೇ ಅಲ್ಲ, ಭಾರತದ ಬಹಳಷ್ಟು ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕಾಣಿಸಿಕೊಳ್ಳುವುದು, ಆ ನಂತರ ಮಾಯವಾಗುವುದು ಇದ್ದೇ ಇದೆ. ಬಹಳಷ್ಟು ಸೆಲೆಬ್ರಿಟಿಗಳು ತಮ್ಮ ಚಿತ್ರಗಳ ಪ್ರಮೋಷನ್ಗಾಗಿ, ತಮ್ಮ ಮನಸ್ಸಿನ ಮಾತುಗಳನ್ನು ಹೇಳುವ ಸಲುವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಲೇ ಇರುತ್ತಾರೆ. ಆದರೆ, ಕೆಲವೊಮ್ಮೆ ಏನಾದರೂ ಯಡವಟ್ಟಾಗಿ, ಅವರ ವಿರುದ್ಧ ಜನ ತಿರುಗಿಬಿದ್ದಾಗ, ಈ ಸೋಷಿಯಲ್ ಮೀಡಿಯಾದ ಸಹವಾಸವೇ ಬೇಡ ಎಂದು ದೂರ ಉಳಿದವರಿದ್ದಾರೆ. ಕೊನೆಗೆ ಒಂದಿಷ್ಟು ದಿನಗಳ ನಂತರ ಮತ್ತೆ ಪ್ರತ್ಯಕ್ಷರಾದ ಉದಾಹರಣೆಯೂ ಇದೆ.
ಬಹುಶಃ ಸೆಲೆಬ್ರಿಟಿಗಳ ಪೈಕಿ ಅತೀ ಹೆಚ್ಚು ಟ್ರೋಲ್ ಆದವರು ರಿಷಿ ಕಪೂರ್. ಒಂದು ಕಾಲಕ್ಕೆ ತಮಗನಿಸಿದ್ದನ್ನು ನೇರವಾಗಿ ಹೇಳಿ, ಹಲವರಿಂದ ಛೀಮಾರಿಗೊಳಗಾಗಿದ್ದ ರಿಷಿ ಕಪೂತ್, ಒಂದು ಹಂತದಲ್ಲಿ ಸೋಷಿಯಲ್ ಮೀಡಿಯಾ ಸಹವಾಸವೇ ಬೇಡ ಎಂದು ಟ್ವಿಟರ್ನಿಂದ ಎಕ್ಸಿಟ್ ಆಗಿದ್ದರು. ಕೊನೆಗೆ ಹಲವು ಸೆಲೆಬ್ರಿಟಿಗಳ ಮನವೊಲಿಕೆಯ ನಂತರ, ಅವರು ಪುನಃ ವಾಪಸ್ಸಾದರು.
ಇದನ್ನೂ ಓದಿ: ಚೀನಾ ವಿರುದ್ಧ ಸಮರ ಸಾರಿದ ‘ಕ್ವೀನ್’
ಇದು ಬರೀ ರಿಷಿ ಕಪೂರ್ ಮಾತ್ರವಲ್ಲ, ಅಮೀರ್ ಖಾನ್, ಸಲ್ಮಾನ್ ಖಾನ್, ಶಾರೂಖ್ ಖಾನ್, ಸೋನು ನಿಗಮ್ ಸೇರಿದಂತೆ ಹಲವರು ಟ್ರೋಲ್ಗೊಳಗಾಗುತ್ತಿದ್ದೇವೆ ಎಂಬ ಬೇಸರದಿಂದ ಸೋಷಿಯಲ್ ಮೀಡಿಯಾದಿಂದ ಹೊರಗುಳಿದ ಉದಾಹರಣೆಗಳಿವೆ. ಅಷ್ಟೇ ಏಕೆ, ಸುಶಾಂತ್ ಸಿಂಗ್ ರಜಪೂತ್ ಸಹ ಒಮ್ಮೆ ಬೇಸರಗೊಂಡು ಟ್ವಿಟರ್ನಿಂದ ಹೊರನಡೆದಿದ್ದರು.
ಈಗ ಅವರ ಸಾವಿನ ನಂತರ, ಹಲವು ಸೆಲೆಬ್ರಿಟಿಗಳ ಫಾಲೋವರ್ಸ್ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನೂ ಕೆಲವರು ನೆಗೆಟಿವ್ ವಿಚಾರಗಳ ಸಹವಾಸವೇ ಬೇಡ ಎಂದು ದೂರವಾಗುತ್ತಿದ್ದಾರೆ. ಹಾಗಂತ ಅವರು ವಾಪಸ್ಸು ಬರುವುದೇ ಇಲ್ಲ ಎಂದಲ್ಲ, ಮುಂದೊಂದು ದಿನ ಪರಿಸ್ಥಿತಿ ಸ್ವಲ್ಪ ತಿಳಿಯಾದ ಮೇಲೆ ಮತ್ತೊಮ್ಮೆ ಎಂಟ್ರಿ ಕೊಟ್ಟರೆ ಆಶ್ಚರ್ಯವಿಲ್ಲ.
ಹಿಂದಿ ‘ಬಿಗ್ಬಾಸ್’ಗೆ ಶುರುವಾಯ್ತು ದಿನಗಣನೆ; ಆದರೆ, ಕಂಡಿಷನ್ಸ್ ಅಪ್ಲೈ …