ಉತ್ತರಕನ್ನಡ: ಶಿರಸಿಯ ಎಸ್ಬಿಐ ಸರ್ಕಲ್ ಬಳಿ ಇಂದು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿರಸಿಯ ಗಣೇಶ ನಗರದ ನಿವಾಸಿಗಳಾದ ರವಿಚಂದ್ರ ವಡ್ಡರ್ (34) ಮತ್ತು ಸುನೀಲ್ ಇಂದೂರ (26) ಮೃತ ದುರ್ದೈವಿಗಳು. ರವಿಚಂದ್ರ ವಡ್ಡರ್ ಅವರ ಚಿಕ್ಕಪ್ಪ ತೀರಿಕೊಂಡಿದ್ದರು. ಅಂತ್ಯಕ್ರಿಯೆಗೆ ಹೂವು ಮತ್ತು ಇತರ ಸಾಮಗ್ರಿ ತರಲೆಂದು ಇವರಿಬ್ಬರು ಬೈಕ್ನಲ್ಲಿ ತೆರಳುತ್ತಿದ್ದರು. ಇದನ್ನೂ ಓದಿರಿ 8ನೇ ತರಗತಿ ವಿದ್ಯಾರ್ಥಿ ಜತೆ ಓಡಿಹೋದ ಮೂರು ಮಕ್ಕಳ ತಾಯಿ! 1 ವರ್ಷದ ರಹಸ್ಯ ಬಿಚ್ಚಿಟ್ಟ ಪಾಲಕರು
ಶಿರಸಿಯ ಎಸ್ಬಿಐ ಸರ್ಕಲ್ ಬಳಿ ಬೈಕ್ ಮತ್ತು ಸಾರಿಗೆ ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ರವಿಚಂದ್ರ ವಡ್ಡರ್ ಮತ್ತು ಸುನೀಲ್ ಇಂದೂರ ಮೃತಪಟ್ಟಿದ್ದಾರೆ. ವರಸೆಯಲ್ಲಿ ಇವರಿಬ್ಬರು ಸಹೋದರರು. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊದಲೇ ಚಿಕ್ಕಪ್ಪನ ಸಾವಿನ ಸೂತಕದಲ್ಲಿದ್ದ ಮನೆಯಲ್ಲೀಗ ಸಹೋದರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು! ಕರುಗೆ ಹಾಲುಣಿಸಲಾಗದೆ ನರಳುತ್ತಿದೆ ಮೂಕಜೀವಿ
ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು