More

    ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಭಗವಾನ್​

    ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್​.ಕೆ. ಭಗವಾನ್​, ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಇಂದು ಸಂಜೆ ಅವರ ಅಂತ್ಯಕ್ರಿಯೆ ನಡೆಯಲಿದ್ದು, ನೇತ್ರದಾನ ಮಾಡುವ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

    ಇದನ್ನೂ ಓದಿ: ಆರ್​ಎಸ್​ಎಸ್ ಬಗ್ಗೆ ರಾಜಮೌಳಿ ಸಿನಿಮಾ?

    ಡಾ. ರಾಜಕುಮಾರ್​ ಅವರ ಅನುಯಾಯಿ ಮತ್ತು ಅವರ ಕುಟುಂಬಕ್ಕೆ ಆಪ್ತರಾಗಿದ್ದ ಭಗವಾನ್​ ಅವರು, ಡಾ. ರಾಜಕುಮಾರ್​ ಮತ್ತು ಪುನೀತ್​ ರಾಜಕುಮಾರ್​ ಅವರಂತೆಯೇ ಬದುಕಿದ್ದಾಗಲೇ ತಮ್ಮ ನಿಧನ ನಂತರ ನೇತ್ರದಾನ ಮಾಡುವುದಕ್ಕೆ ಬರೆದುಕೊಟ್ಟಿದ್ದರು. ಅವರ ಆಸೆಯಂತೆ ನೇತ್ರದಾನ ಆಗುತ್ತಿದ್ದು, ಅವರ ಕಣ್ಣುಗಳನ್ನು ಡಾ. ರಾಜಕುಮಾರ್​ ಅವರ ಐ ಬ್ಯಾಂಕ್​ಗೆ ದಾನ ಮಾಡಲಿದ್ದೇವೆ ಎಂದು ಅವರ ಹಿರಿಯ ಮಗ ಜ್ಯೋತಿಂದರ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಮತ್ತೊಮ್ಮೆ ‘ಭೈರತಿ ರಣಗಲ್’ ಆದ ಶಿವರಾಜಕುಮಾರ್​, ಸದ್ಯದಲ್ಲೇ ಚಿತ್ರ ಪ್ರಾರಂಭ

    ಇನ್ನು, ಭಗವಾನ್​ ಅವರ ಪಾರ್ಥೀವ ಶರೀರವನ್ನು, ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಸಂಜೆ 4ರವರೆಗೂ ಅಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಆ ನಂತರ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಯ್ಯಂಗಾರ್ ಸಂಪ್ರದಾಯದಂತೆ ಸಂಜೆ ಅಂತ್ಯಕ್ರಿಯೆ ನಡೆಲಿದೆ.

    ಹುಟ್ಟಿದ ದಿನದಂದೇ ನಿಧನರಾದ ಹಿರಿಯ ನಿರ್ದೇಶಕ ಭಗವಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts