ಕೋಲಾರ: ಕೆರೆಯಲ್ಲಿ ಜಲಾವೃತವಾಗಿರುವ ವಿದ್ಯುತ್ ಕಂಬಗಳ ಬಳಿಗೆ ತೆಪ್ಪದಲ್ಲಿ ಹೋಗಿ ನೀರ ನಡುವೆಯೇ ನಿಂತು ದುರಸ್ತಿಗೊಳಿಸಲು ಮುಂದಾಗಿರುವ ಬೆಸ್ಕಾಂ ಸಿಬ್ಬಂದಿಯ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವಲ್ಪ ಹೆಚ್ಚೂಕಡಿಮೆಯಾದರೂ ಪ್ರಾಣಕ್ಕೇ ಸಂಚಕಾರ ಆಗುವಂಥ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದುದೇ ಈ ಮೆಚ್ಚುಗೆಗೆ ಕಾರಣ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಕೆರೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಜಲಾವೃತವಾಗಿರುವ ವಿದ್ಯುತ್ ಕಂಬದಲ್ಲಿ ಸಮಸ್ಯೆ ಆಗಿದ್ದು, ಅದರ ದುರಸ್ತಿಗಾಗಿ ಬೆಸ್ಕಾಮ್ನ ನಾಲ್ವರು ಸಿಬ್ಬಂದಿ ತೆರಳಿದ್ದು, ಜೀವದ ಹಂಗು ತೊರೆದು ಕರ್ತವ್ಯ ನಿಭಾಯಿಸಿದ್ದಾರೆ.
ಈ ನಾಲ್ವರೂ ತೆಪ್ಪದಲ್ಲಿ ತೆರಳಿದ್ದು, ವಿದ್ಯುತ್ ಕಂಬದಲ್ಲಿ ಇಬ್ಬರು, ಇನ್ನಿಬ್ಬರು ತೆಪ್ಪದಲ್ಲಿ ಇದ್ದುಕೊಂಡು ದುರಸ್ತಿ ಪಡಿಸುವ ಕೆಲಸ ಮಾಡಿದ್ದಾರೆ. ಈ ದೃಶ್ಯದ ವಿಡಿಯೋ ತುಣುಕು ಹರಿದಾಡುತ್ತಿದ್ದು, ಬೆಸ್ಕಾಂ ಸಿಬ್ಬಂದಿಯ ಕರ್ತವ್ಯ ಜನರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಬೆಸ್ಕಾಂ ಸಿಬ್ಬಂದಿಯ ಸಾಹಸ ಕಾರ್ಯಕ್ಕೆ ವಿದ್ಯುತ್ ನಿಗಮ ಅಧಿಕಾರಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದೇ ತಾಲೂಕಲ್ಲಿ ಮೂರೇ ವಾರದಲ್ಲಿ ಮತ್ತೊಂದು ‘ಶಾಕಿಂಗ್’ ಘಟನೆ; ಮನೆ ನಿರ್ಮಾಣದಲ್ಲಿ ತೊಡಗಿದ್ದ ಯುವಕ ಸಾವು