ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಜ್ಯೋತಿಷ್ಯದ ಬಗ್ಗೆ ಜ್ಯೋತಿಷ್ಯದ ಬಗ್ಗೆ ಹೆಚ್ಚು ನಂಬಿಕೆ ಇರುವ ನಟರಲ್ಲಿ ಜಗ್ಗೇಶ್ ಸಹ ಒಬ್ಬರು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಬಗ್ಗೆ ಜಗ್ಗೇಶ್ ಅವರಿಗೆ ವಿಪರೀತ ನಂಬಿಕೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತವೆ.
ಇದನ್ನೂ ಓದಿ: ‘ಡ್ರಗ್ಸ್’ ನಟಿಯರ ನಿರೀಕ್ಷೆ ಹುಸಿ; ಅಳುತ್ತ, ಜೈಲು ಅಧಿಕಾರಿಗಳಿಗೆ ಕೈಮುಗಿಯುತ್ತಿರುವ ರಾಗಿಣಿ, ಸಂಜನಾ
ಆದರೆ, ಇದೀಗ ಜಗ್ಗೇಶ್ ಅವರು, ಜ್ಯೋತಿಷ್ಯಕ್ಕಿಂತ ನಿಮ್ಮ ಮೇಲೆ ನೀವು ನಂಬಿಕೆ ಇಡಿ ಎಂದಿದ್ದಾರೆ. ನೀವು ಸರಿ ಇದ್ದರೆ ಎಲ್ಲವೂ ಸರಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಅದಕ್ಕೆ ಕಾರಣ, ಕರೊನಾ. ಕೋವಿಡ್ನಿಂದಾಗಿ ಈ ವರ್ಷ ಸಾವು-ನೋವು ಸಂಭವಿಸಿದೆ. ಈ ವರ್ಷ ಆದ ಅನಾಹುತಗಳಿಂದ ಹೊರಬರುವುದಕ್ಕೆ ಇಡೀ ವಿಶ್ವಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ.
ಈಗ ಜಗ್ಗೇಶ್ ಸಹ ಈ ಕುರಿತು ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅವರು, ಜ್ಯೋತಿಷ್ಯದ ಬಗ್ಗೆ ಬರೆದುಕೊಂಡಿದ್ದಾರೆ. ಜ್ಯೋತಿಷ್ಯಕ್ಕಿಂತ ನಿಮ್ಮನ್ನು ನೀವು ನಂಬಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅನುರಾಗ್ ವಿರುದ್ಧ ಆ್ಯಕ್ಷನ್ ತೆಗೆದುಕೊಳ್ಳದಿದ್ದರೆ ಪಾಯಲ್ ಏನ್ಮಾಡ್ತಾರಂತೆ ಗೊತ್ತಾ?
ಈ ಕುರಿತು ಟ್ವೀಟ್ ಮಾಡಿರುವ ಅವರು, ‘2020ರ ಮುಂಚೆ ಬಹುತೇಕ ಜ್ಯೋತಿಷಿಗಳು ವಾಡಿಕೆಯಂತೆ ಈ ವರ್ಷ ಅದ್ಭುತ ಮಳೆಬೆಳೆ! ಕೆಲ ರಾಶಿಗಳಿಗೆ ಶನಿಗುರು ಉತ್ತಮಫಲ ಎಂದು ಆನೆ ಕುದುರೆ ಮೇಲೆ ಸವಾರಿ ಮಾಡಿ ಹೇಳಿಬಿಟ್ಟರು. ಆದರೆ, ಕರೊಣಾ ವಿಶ್ವ ಮನುಕುಲಕ್ಕೆ ಹೀಗೆ ಗುಮ್ಮಿ, ಅಮಾಯಕ ಸಾವು-ನೋವು-ನಷ್ಟ ಆಗುತ್ತದೆ ಎಂದು ಹೇಳಲಿಲ್ಲ. ಜ್ಯೋತಿಷ್ಯಕ್ಕಿಂತ ನಿಮ್ಮ ನೀವು ನಂಬಿ. ನೀವು ಸರಿ ಇದ್ದರೆ ಜೀವಜಗ ಸರಿ ಇರುತ್ತದೆ’ ಎಂದು ಹೇಳಿದ್ದಾರೆ.
ಜಗ್ಗೇಶ್ ಅವರ ಈ ಮಾತುಗಳಿಗೆ, ಹಲವರು ಮೆಚ್ಚುಗೆ ಸೂಚಿಸಿದ್ದು, ಅವರು ಹೇಳಿರುವುದು ಅಕ್ಷರಶಃ ನಿಜ ಎಂದು ಹೇಳಿದ್ದಾರೆ.
2020ಆರಂಭಕ್ಕೆ ಬಹುತೇಕ ಜೋತಿಷಿಗಳು ವಾಡಿಕೆಯಂತೆ ಈ ವರ್ಷ ಅದ್ಭುತ ಮಳೆಬೆಳೆ!ಕೆಲರಾಶಿಗಳಿಗೆ ಶನಿಗುರು ಉತ್ತಮಫಲ ಎಂದು ಆನೆಕುದುರೆ ಮೇಲೆ ಸವಾರಿಮಾಡಿ ಹೇಳಿಬಿಟ್ಟರು!ಆದರೆ ಕೊರೋನ ವಿಶ್ವ ಮನುಕುಲಕ್ಕೆ ಹೀಗೆ ಗುಮ್ಮಿ ಅಮಾಯಕರ ಸಾವುನೋವುನಷ್ಟ ಆಗುತ್ತದೆ ಎಂದು ಹೇಳಲಿಲ್ಲ!ಜೋತಿಷ್ಯಕ್ಕಿಂತ ನಿಮ್ಮನೀವು ನಂಬಿ!ನೀವು ಸರಿಇದ್ದರೆ ಜೀವಜಗ ಸರಿಯಿರುತ್ತದೆ! pic.twitter.com/n0m0Iimh1S
— ನವರಸನಾಯಕ ಜಗ್ಗೇಶ್ (@Jaggesh2) September 27, 2020
ನ್ಯಾಯ ಸಿಕ್ಕಿಲ್ಲ ಅಂತ ನಟ ಸುಶಾಂತ್ ಗೆಳೆಯರ ಗಾಂಧಿಗಿರಿ, ಅ. 2ರಂದೇ ಹಿಡಿಯಲಿದ್ದಾರೆ ಆ ದಾರಿ..