More

    ಜ್ಯೋತಿಷ್ಯಕ್ಕಿಂತ ನಿಮ್ಮನ್ನು ನೀವು ನಂಬಿ … ಜಗ್ಗೇಶ್​ ಹಾಗೆ ಹೇಳಿದ್ದ್ಯಾಕೆ?

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಜ್ಯೋತಿಷ್ಯದ ಬಗ್ಗೆ ಜ್ಯೋತಿಷ್ಯದ ಬಗ್ಗೆ ಹೆಚ್ಚು ನಂಬಿಕೆ ಇರುವ ನಟರಲ್ಲಿ ಜಗ್ಗೇಶ್​ ಸಹ ಒಬ್ಬರು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಬಗ್ಗೆ ಜಗ್ಗೇಶ್​​ ಅವರಿಗೆ ವಿಪರೀತ ನಂಬಿಕೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತವೆ.

    ಇದನ್ನೂ ಓದಿ: ‘ಡ್ರಗ್ಸ್​’ ನಟಿಯರ ನಿರೀಕ್ಷೆ ಹುಸಿ; ಅಳುತ್ತ, ಜೈಲು ಅಧಿಕಾರಿಗಳಿಗೆ ಕೈಮುಗಿಯುತ್ತಿರುವ ರಾಗಿಣಿ, ಸಂಜನಾ

    ಆದರೆ, ಇದೀಗ ಜಗ್ಗೇಶ್​ ಅವರು, ಜ್ಯೋತಿಷ್ಯಕ್ಕಿಂತ ನಿಮ್ಮ ಮೇಲೆ ನೀವು ನಂಬಿಕೆ ಇಡಿ ಎಂದಿದ್ದಾರೆ. ನೀವು ಸರಿ ಇದ್ದರೆ ಎಲ್ಲವೂ ಸರಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಅದಕ್ಕೆ ಕಾರಣ, ಕರೊನಾ. ಕೋವಿಡ್​ನಿಂದಾಗಿ ಈ ವರ್ಷ ಸಾವು-ನೋವು ಸಂಭವಿಸಿದೆ. ಈ ವರ್ಷ ಆದ ಅನಾಹುತಗಳಿಂದ ಹೊರಬರುವುದಕ್ಕೆ ಇಡೀ ವಿಶ್ವಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ.

    ಈಗ ಜಗ್ಗೇಶ್​ ಸಹ ಈ ಕುರಿತು ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅವರು, ಜ್ಯೋತಿಷ್ಯದ ಬಗ್ಗೆ ಬರೆದುಕೊಂಡಿದ್ದಾರೆ. ಜ್ಯೋತಿಷ್ಯಕ್ಕಿಂತ ನಿಮ್ಮನ್ನು ನೀವು ನಂಬಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅನುರಾಗ್​ ವಿರುದ್ಧ ಆ್ಯಕ್ಷನ್​ ತೆಗೆದುಕೊಳ್ಳದಿದ್ದರೆ ಪಾಯಲ್​ ಏನ್ಮಾಡ್ತಾರಂತೆ ಗೊತ್ತಾ?

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘2020ರ ಮುಂಚೆ ಬಹುತೇಕ ಜ್ಯೋತಿಷಿಗಳು ವಾಡಿಕೆಯಂತೆ ಈ ವರ್ಷ ಅದ್ಭುತ ಮಳೆಬೆಳೆ! ಕೆಲ ರಾಶಿಗಳಿಗೆ ಶನಿಗುರು ಉತ್ತಮಫಲ ಎಂದು ಆನೆ ಕುದುರೆ ಮೇಲೆ ಸವಾರಿ ಮಾಡಿ ಹೇಳಿಬಿಟ್ಟರು. ಆದರೆ, ಕರೊಣಾ ವಿಶ್ವ ಮನುಕುಲಕ್ಕೆ ಹೀಗೆ ಗುಮ್ಮಿ, ಅಮಾಯಕ ಸಾವು-ನೋವು-ನಷ್ಟ ಆಗುತ್ತದೆ ಎಂದು ಹೇಳಲಿಲ್ಲ. ಜ್ಯೋತಿಷ್ಯಕ್ಕಿಂತ ನಿಮ್ಮ ನೀವು ನಂಬಿ. ನೀವು ಸರಿ ಇದ್ದರೆ ಜೀವಜಗ ಸರಿ ಇರುತ್ತದೆ’ ಎಂದು ಹೇಳಿದ್ದಾರೆ.

    ಜಗ್ಗೇಶ್​ ಅವರ ಈ ಮಾತುಗಳಿಗೆ, ಹಲವರು ಮೆಚ್ಚುಗೆ ಸೂಚಿಸಿದ್ದು, ಅವರು ಹೇಳಿರುವುದು ಅಕ್ಷರಶಃ ನಿಜ ಎಂದು ಹೇಳಿದ್ದಾರೆ.

    ನ್ಯಾಯ​ ಸಿಕ್ಕಿಲ್ಲ ಅಂತ ನಟ ಸುಶಾಂತ್​ ಗೆಳೆಯರ ಗಾಂಧಿಗಿರಿ, ಅ. 2ರಂದೇ ಹಿಡಿಯಲಿದ್ದಾರೆ ಆ ದಾರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts