ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳು ಇದೀಗ ಆರನೇ ವಾರಕ್ಕೆ ಎಂಟ್ರಿ ಕೊಟ್ಟಿದ್ದು, ಟಾಸ್ಕ್ಗಳಲ್ಲಿ ಭರ್ಜರಿ ಪೈಪೋಟಿ ಕೊಡುತ್ತಿದ್ದಾರೆ. ಈ ಹಿಂದೆ ಮನೆಯ ಸದಸ್ಯರ ನಡುವೆ ನಡೆಯುತ್ತಿದ್ದ ಜಟಾಪಟಿ, ಮನಸ್ತಾಪಗಳು ಕೊಂಚ ಕಡಿಮೆಯಾಗಿ, ಉತ್ತಮ ಬಾಂಧವ್ಯತೆ ಮೂಡುತ್ತಿದೆ ಎನ್ನುವಷ್ಟರಲ್ಲಿ ಆತ್ಮೀಯ ಸ್ನೇಹಿತರ ಮಧ್ಯೆ ಭಾರೀ ಭಿನ್ನಾಭಿಪ್ರಾಯ ಮೂಡಿ ಕಣ್ಣೀರಿಡುವಂತ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ರೈತರ ಆತ್ಮಹತ್ಯೆಗೆ ಪಿಣರಾಯಿ ವಿಜಯನ್ ಸರ್ಕಾರವೇ ಹೊಣೆ: ಕೇಂದ್ರ ಸಚಿವೆ ಶೋಭಾ
ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನದಿಂದಲೂ ಕೂಡ ಕಾರ್ತಿಕ್-ಸಂಗೀತಾ ಮತ್ತು ತನಿಷಾ ನಡುವಿನ ಒಡನಾಟ ಎಲ್ಲರ ಗಮನ ಸೆಳೆದಿತ್ತು. ಕೇವಲ ಸ್ನೇಹಿತರಾಗಿದ್ದ ಈ ಮೂವರು, ತದನಂತರ ಆತ್ಮೀಯ ಸ್ನೇಹಿತರಾಗಿ ಪರಸ್ಪರ ಸುಖ-ದುಃಖ ಹಂಚಿಕೊಳ್ಳುತ್ತಿದ್ದರು. ಟಾಸ್ಕ್ ಆಗಲಿ ಅಥವಾ ಯಾವುದೇ ವಿಚಾರವಾಗಲಿ ಒಬ್ಬರನೊಬ್ಬರು ಬಿಟ್ಟುಕೊಡದೆ ಜತೆಗೆ ಇರುತ್ತಿದ್ದರು. ಆದ್ರೆ, ಇದೀಗ ಮೂವರ ಸ್ನೇಹದಲ್ಲಿ ಮೂಡಿರುವ ಬಿರುಕು ಕಣ್ಣನ್ನು ಒದ್ದೆ ಮಾಡಿಸಿದೆ.
ಲುಡೋ ಚುಟುವಟಿಕೆಯಲ್ಲಿ ಸೇವ್ ಮಾಡಬಹುದು ಎಂಬ ಆಯ್ಕೆ ಕಾರ್ತಿಕ್ ಹಾಗೂ ತನಿಷಾಗೆ ಸಿಕ್ಕಾಗ ಎದುರಿನ ತಂಡದಲ್ಲಿ ಸಂಗೀತಾ ಇದ್ದರು. ಒಮ್ಮತ ನಿರ್ಧಾರ ಕೈಗೊಂಡ ಕಾರ್ತಿಕ್-ತನಿಷಾ ಸಂಗೀತಾ ಅವರ ಹೆಸರು ತೆಗೆದುಕೊಳ್ಳದೆ ಸಿರಿ ಅವರ ಹೆಸರನ್ನು ಪರಿಗಣಿಸುತ್ತಾರೆ. ಇದಕ್ಕೆ ತೀವ್ರ ಬೇಸರಗೊಂಡ ಸಂಗೀತಾ ತಮ್ಮಿಬ್ಬರ ಸ್ನೇಹಿತರ ಬಳಿ ಈ ವಿಷಯ ಕುರಿತು ಕೆಲ ಕಾಲ ವಾಗ್ವಾದ ನಡೆಸಿದರು.
ಇದನ್ನೂ ಓದಿ: ಸಚಿವ ಜಮೀರ್ ಅಹಮ್ಮದ್ ಗೆ ಸಿಎಂ ಬುದ್ಧಿಮಾತು ಹೇಳಲಿ; ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗ್ರಹ
ತನಿಷಾ ಮಾತಿಗೆ ಒಪ್ಪದ ಸಂಗೀತಾ, ಕಾರ್ತಿಕ್ ಜತೆಗೂ ಮುನಿಸಿಕೊಂಡು ಹಾರ್ಟ್ ಬ್ರೇಕ್ ಆಯಿತು ಎಂದು ಹೇಳಿಕೊಂಡು ರೆಸ್ಟ್ ರೂಮ್ ಬಳಿ ಕಣ್ಣೀರಿಟ್ಟರು. ಇದೇ ವೇಳೆ ಮೇಕ್ಅಪ್ ರೂಂನಲ್ಲಿ ಕುಳಿತು ತನಿಷಾ ಅತ್ತರೇ, ಬೆಡ್ ರೂಂನಲ್ಲಿ ಕಾರ್ತಿಕ್ ಕಣ್ಣಂಚಲಿ ನೀರು ತುಂಬಿಕೊಂಡು ಸಿರಿ ಅವರಲ್ಲಿ ತಮ್ಮ ನೋವನ್ನು ತೋಡಿಕೊಂಡರು. ಸದ್ಯ ‘ಬಿಗ್’ ಮನೆಯಲ್ಲಿ ಬಿಗ್ ಫ್ರೆಂಡ್ಸ್ ಆಗಿದ್ದ ಈ ಮೂವರು ಇದೀಗ ದೂರ..ದೂರ ಎಂಬಂತೆ ಇರುವುದು ನೋಡುಗರಿಗೆ ಬೇಸರ ತಂದಿದೆ.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.
ವಿರಾಟ್ ಕೊಹ್ಲಿಯನ್ನು ಸ್ವಾರ್ಥಿ ಎಂದವರು ಇಂದು ಪಾಕ್ ಕ್ರಿಕೆಟ್ ತಂಡದ ಮುಖ್ಯ ಕೋಚ್