ಬಾಗಲಕೋಟೆ: ನಾಗರಹಾವು ಹಿಡಿಯುವ ವೇಳೆ ಹಾವು ಕಚ್ಚಿ ಸ್ನೇಕ್ ಕ್ಯಾಚರ್ ಡೇನಿಯಲ್ ನ್ಯೂಟನ್ (43) ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿಯಲ್ಲಿ ನಡೆದಿದೆ.
ಸೀಗಿಕೇರಿ ಗ್ರಾಮದ ಮನೆಯೊಂದರಲ್ಲಿ ಹಾವು ಹಿಡಿಯುವ ವೇಳೆ ದುರಂತ ಘಟನೆ ನಡೆದಿದೆ. ಡೇನಿಯಲ್ ಕೇವಲ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಈಗಾಗಲೇ ದೇಹದಾನ ಮಾಡಿರುವ ಡೇನಿಯಲ್, ಇದುವರೆಗೂ ಒಟ್ಟು 3279 ಹಾವನ್ನು ರಕ್ಷಣೆ ಮಾಡಿದ್ದಾರೆ. ಅದರಲ್ಲಿ 1036 ನಾಗರಹಾವು ಸೇರಿಕೊಂಡಿದೆ.
ಇದನ್ನೂ ಓದಿ: ಮಕ್ಕಳು ಮದುವೆಗೆ ಒಪ್ಪದಿದ್ದರೆ ಅದರ ಹಿಂದಿರುವ ಕಾರಣಗಳು ಇದೂ ಇರಬಹುದಲ್ಲವೆ?
ಒಟ್ಟು 75 ಬಾರಿ ಹಾವಿನಿಂದ ಕಚ್ಚಿಸಿಕೊಂಡು ಬಚಾವ್ ಆಗಿದ್ದರು. ಕಳೆದ ಜೂನ್ ತಿಂಗಳಲ್ಲಿ ನಾಗರ ಹಾವಿನ ಮರಿ ಕಚ್ಚಿದ ಪರಿಣಾಮ ಡೇನಿಯಲ್ ಪರಿಸ್ಥಿತಿ ಗಂಭೀರವಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡಿ ಬದುಕುಳಿದಿದ್ದರು. ಆದರೂ ಹಾವು ಹಿಡಿಯುವ ತನ್ನ ಕಾರ್ಯವನ್ನು ಬಿಡದೆ ಮುಂದುವರೆಸಿದ್ದರು.
ಇದನ್ನೂ ಓದಿ: ನದಿ ದಡದಲ್ಲಿ ಚಪ್ಪಲಿ ಇಟ್ಟು ಹೆಂಡತಿ ಕೊಟ್ಟ ಶಾಕ್ಗೆ ಗಂಡನ ಪ್ರಾಣವೇ ಹೋಯ್ತು..!
ಅಂದಹಾಗೆ ಡೇನಿಯಲ್ ಬಾಗಲಕೋಟೆ ನಗರದ ಜಯನಗರ ನಿವಾಸಿ. ಹಾವು ಹಿಡಿಯುವ ಮೂಲಕ ಬಾಗಲಕೋಟೆ ಹಾಗೂ ಸುತ್ತ ಮುತ್ತ ಹಳ್ಳಿಗಳಲ್ಲಿ ಸ್ನೇಕ್ ಡ್ಯಾನಿ ಎಂದೇ ಹೆಸರು ಗಳಿಸಿದ್ದರು. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ಆ ನರ್ಸ್ ಚಿತ್ರೀಕರಿಸಿ ರವಾನಿಸುತ್ತಿದ್ದುದೇಕೆ?
ಗೋಡೆ ಕುಸಿದು ಗೃಹಿಣಿ ಸಾವು ಪ್ರಕರಣಕ್ಕೆ ಟ್ವಿಸ್ಟ್: ಅನಾಮಧೇಯ ಕರೆಯಿಂದ ಗಂಡನ ಕರಾಳ ಮುಖ ಬಯಲು!
ಬಾವನ ಮದುವೆಗೆಂದು ಅತ್ತೆ ಮನೆಗೆ ಬಂದವನು ಮಸಣ ಸೇರಿದ! ಸರ್ಕಾರಿ ಶಾಲೆಯ ಆವರಣದಲ್ಲಿ ಆತ್ಮಹತ್ಯೆ
ಅಪರಾತ್ರಿಯಲ್ಲಿ ಬೆತ್ತಲಾಗಿ ವಿಡಿಯೋ ಕರೆಮಾಡ್ತಾರೆ ಯುವತಿಯರು- ಎಚ್ಚರ ತಪ್ಪಿದ್ರೆ ಆಪತ್ತು ಗ್ಯಾರೆಂಟಿ!