ಅಯೋಧ್ಯೆ: ಈ ವರ್ಷದ ದೀಪಾವಳಿ ಹಬ್ಬಕ್ಕೆ ಹೊಸದೊಂದು ಗಿನ್ನಿಸ್ ರೆಕಾರ್ಡ್ ಬರೆಯಲು ಅಯೋಧ್ಯೆ ಸಿದ್ಧವಾಗಿದೆ. ಕಳೆದ ವರ್ಷ 4.10 ಲಕ್ಷ ಮಣ್ಣಿನ ದೀಪಗಳನ್ನು ಹಚ್ಚಿ ಗಿನ್ನೆಸ್ ರೆಕಾರ್ಡ್ ಬರೆಯಲಾಗಿದ್ದ ಸ್ಥಳದಲ್ಲಿ ಈ ವರ್ಷ 5.51 ಲಕ್ಷ ಮಣ್ಣಿನ ಹಣತೆ ಹಚ್ಚಿ ಗಿನ್ನೆಸ್ ರೆಕಾರ್ಡ್ ಬರೆಯಲಾಗುವುದು.
ಇದನ್ನೂ ಓದಿ: ಮಹಾಮಾರಿ ಕರೊನಾ ಕಣ್ಮರೆಯಾಗುತ್ತಿರುವ ಸಮಯದಲ್ಲಿ ದಂಪತಿ ಮಾಡಿದ್ದು ಸರಿನಾ?
ಅಯೋಧ್ಯೆಯಲ್ಲಿನ ದೀಪ ಹಚ್ಚುವ ಕಾರ್ಯಕ್ರಮವನ್ನು ಶುಕ್ರವಾರ ಆರಂಭಿಸಲಾಗುವುದು. ಶುಕ್ರವಾರ ಒಟ್ಟು 5.51 ಲಕ್ಷ ಹಣೆತೆ ಬೆಳಗಲಿವೆ. ಇಲ್ಲಿ ದೀಪ ಹಚ್ಚುವುದಕ್ಕೆಂದೆ ರಾಮ್ ಮನೋಹರ ಆವಾಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ.
ದೇವಸ್ಥಾನದ ಮಂಡಳಿ ಮತ್ತು ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಸ್ವಯಂ ಸೇವಕರ ಹೊರೆತುಪಡಿಸಿ ಬೇರೆಯವರಿಗೆ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿಲ್ಲ. 300 ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ದೀಪ ಬೆಳಗುವ ಯೋಜನೆ ಹಾಕಿಕೊಳ್ಳಲಾಗಿದೆ. ರಾಮ್ ಕಿ ಪೈದಿ ಘಾಟ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೀಪ ಬೆಳಗಿಸಲಾಗುವುದು. ಈ ಸ್ಥಳದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಮತ್ತು ರಾಜ್ಯಪಾಲರಾದ ಆನಂದಿಬೆನ್ ಪಾಟೇಲ್ ಹಾಜರಿರಲಿದ್ದಾರೆ.
ಇದನ್ನೂ ಓದಿ: ಸೈಕಲ್ ಕವಿ ಎಂದೇ ಪ್ರಸಿದ್ಧರಾದ ಆಶುಕವಿ ಐರಸಂಗ ಇನ್ನಿಲ್ಲ
ಸದ್ಯ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದಲ್ಲಿ 21 ಸಾವಿರ ದೀಪಗಳನ್ನು ಶನಿವಾರ ಬೆಳಗಿಸಲಾಗುವುದು. ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಈ ವರ್ಷ ಲೇಸರ್ ಎಫೆಕ್ಟ್ ಮೂಲದ ಪಟಾಕಿ ಸಿಡಿಸಲಾಗುವುದು. ಅದರ ಜತೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕುಚಿಪುಡಿ, ಕತಕ್ ಸೇರಿ ವಿವಿಧ ನಾಟ್ಯವನ್ನು ಲೇಸರ್ನಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)
ಡೇರಿಯ ಹಾಲು ಕೊಳ್ಳುವ ಮುನ್ನ ಎಚ್ಚರ! ಡೇರಿಯ ಹಾಲಿನಲ್ಲೇ ಸ್ನಾನ ಮಾಡಿದ್ದಾನೆ ಈ ಭೂಪ